ಆ್ಯಪ್ನಗರ

ಈಶ್ವರಪ್ಪ ಭೇಟಿಗೆ ಹೋದ ಕಾರ್ಯಕರ್ತ ಅವರ ಮಗಳ ಮೊಬೈಲ್ ಕದ್ದು ಪರಾರಿ?

ಬೆಂಗಳೂರಲ್ಲಿ ನಾಪತ್ತೆಯಾಗಿದ್ದ ಮೊಬೈಲ್, ಬಾಗಲಕೋಟೆಯಲ್ಲಿ ಪತ್ತೆಯಾಗಿದ್ದು ಹೇಗೆ?

Vijaya Karnataka Web 26 Sep 2019, 12:07 pm
ಬಾಗಲಕೋಟೆ: ಬೆಂಗಳೂರಿನ ನಿವಾಸದಲ್ಲಿ ಕಾಣೆಯಾಗಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಪುತ್ರಿ ಮೊಬೈಲ್ ಬಾಗಲಕೋಟೆಯಲ್ಲಿ ಪತ್ತೆಯಾಗಿದೆ. ಸಚಿವರ ಭೇಟಿಗೆ ಬಂದಿದ್ದ ಸ್ವಪಕ್ಷದ ಕಾರ್ಯಕರ್ತನೇ ಈ ಮೊಬೈಲ್ ಕದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
Vijaya Karnataka Web Mobile


ಈಶ್ವರಪ್ಪನವರ ಪುತ್ರಿ ಶಾಂತಾ ಕೆ ಎಂಬುವರಿಗೆ ಸೇರಿದ ಮೊಬೈಲ್ ಸೆಪ್ಟೆಂಬರ್ 13ರಂದು ಗಾಂಧಿಭವನದ ಸಚಿವರ ನಿವಾಸದಿಂದ ಕಾಣೆಯಾಗಿತ್ತು. ಈ ಕುರಿತು ಬೆಂಗಳೂರು ಈಶಾನ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಐಎಮ್ಇಐ ನಂಬರ್ ಮೂಲಕ ಬೆಂಗಳೂರು ಪೊಲೀಸರು ಮೊಬೈಲ್ ಪತ್ತೆ ಹಚ್ಚಿದ್ದು, ಬಾಗಲಕೋಟೆ ಜಿಲ್ಲೆಯ ಬಂಟನೂರ ಗ್ರಾಮದ ಲಕ್ಷ್ಮಣ ಬಂಡಿವಡ್ಡರ್ ಎಂಬಾತನ ಬಳಿ ಇತ್ತು.

ಅಂತ್ಯಕ್ರಿಯೆ ವೇಳೆ ಕೇಂದ್ರ ಸಚಿವರ ಬೆಲೆಬಾಳುವ ಮೊಬೈಲ್‌ ಕಳವು

ಲಕ್ಷ್ಮಣ ಬಂಡಿವಡ್ಡರ ಬಿಜೆಪಿ ಕಾರ್ಯಕರ್ತನಾಗಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ಭೇಟಿಗೆ ಹೋದಾಗ ಮೊಬೈಲ್ ಕದ್ದು ತಂದನಾ ಎನ್ನುವ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರಿದಿದ್ದು ಆ ಮೊಬೈಲ್ ಆತನ ಕೈ ಸೇರಿದ್ದು ಹೇಗೆ ಎಂಬುದು ಇನ್ನು ತಿಳಿಯಬೇಕಷ್ಟೇ.

ಲೋಕಾಪುರ ಪೋಲಿಸರಿಗೆ ಮಾಹಿತಿ ನೀಡಿದ ಪೊಲೀಸರು ಮೊಬೈಲ್‌ನ್ನು ಬೆಂಗಳೂರಿಗೆ ತರಿಸಿಕೊಂಡು ವಾರಸುದಾರರಿಗೆ ಒಪ್ಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ