ಆ್ಯಪ್ನಗರ

ಸಿದ್ಧು ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವ ಸದ್ದು

ಬಾದಾಮಿ: ಮೋದಿಯವರ ಆಸೆಯಂತೆ ಎಲ್ಲೆಡೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆದರೆ, ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಕ್ಷೇತ್ರವಾದ ಬಾದಾಮಿಯಲ್ಲೀಗ ಬಿಜೆಪಿ ಸದಸ್ಯತ್ವ ಅಭಿಯಾನ ಸದ್ದು ಮಾಡುತ್ತಿದೆ. ಹೆಚ್ಚು ಜನ ಸದಸ್ಯರನ್ನು ಮಾಡಿಕೊಳ್ಳುವ ಕಾರ್ಯಕ್ಕೆ ಬಿಜೆಪಿ ಸಂಕಲ್ಪ ಮಾಡಿದೆ.

Vijaya Karnataka 7 Jul 2019, 5:00 am
ಬಾದಾಮಿ: ಮೋದಿಯವರ ಆಸೆಯಂತೆ ಎಲ್ಲೆಡೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆದರೆ, ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಸಿದ್ದರಾಮಯ್ಯ ಕ್ಷೇತ್ರವಾದ ಬಾದಾಮಿಯಲ್ಲೀಗ ಬಿಜೆಪಿ ಸದಸ್ಯತ್ವ ಅಭಿಯಾನ ಸದ್ದು ಮಾಡುತ್ತಿದೆ. ಹೆಚ್ಚು ಜನ ಸದಸ್ಯರನ್ನು ಮಾಡಿಕೊಳ್ಳುವ ಕಾರ್ಯಕ್ಕೆ ಬಿಜೆಪಿ ಸಂಕಲ್ಪ ಮಾಡಿದೆ.
Vijaya Karnataka Web bjp membership in sidhu constituency
ಸಿದ್ಧು ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವ ಸದ್ದು


ಭಾರತೀಯ ಜನತಾ ಪಕ್ಷ ಕ್ಕೆ ದೇಶದಲ್ಲಿ ಪ್ರತಿಶತ 50 ರಷ್ಟು ಬೆಂಬಲ ಜನಾದೇಶದ ಮೂಲಕ ವ್ಯಕ್ತವಾಗಿದೆ. ನುಡಿದಂತೆ ನಡೆಯುವ ಪ್ರಧಾನಿ ನರೇಂದ್ರ ಮೋದಿಜಿ ಅವರು ತಮ್ಮ ಸ್ವಕ್ಷೇತ್ರ ವಾರಾಣಾಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದು ಎಲ್ಲ ಕ್ಷೇತ್ರಗಳಲ್ಲಿಯೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯತ್ವ ಮಾಡಿಸುವಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪೂರ ಹೇಳಿದರು.

ಶನಿವಾರ ಇಲ್ಲಿಯ ಬಿಜೆಪಿ ತಾಲೂಕು ಕಚೇರಿಯಲ್ಲಿ ಪಕ್ಷ ದ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಐತಿಹಾಸಿಕ ಕ್ಷೇತ್ರ ನಿಜಕ್ಕೂ ಬಿಜೆಪಿಗೆ ಹೆಚ್ಚಿನ ಒಲುವ ಪಡೆದುಕೊಂಡಿದೆ. ಮುಖಂಡರು ಕಾರ್ಯಕರ್ತರು ಕ್ಷೇತ್ರದ ಮತದಾರರ ಸಂಖ್ಯೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಡೆದ ಮತಗಳ ಪ್ರತಿಶತ 25 ರಷ್ಟು ಸದಸ್ಯರನ್ನಾಗಿಸುವ ಕ್ರಮ ಜರುಗಬೇಕು ಎಂದರು.

ಮಾಜಿ ಶಾಸಕ ಎಂ.ವಿ.ಬನ್ನಿ, ಎಂ.ಕೆ.ಪಟ್ಟಣಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಮಮದಾಪೂರ, ಸಂಚಾಲಕ ಸಿದ್ದಣ್ಣ ಶಿವನಗುತ್ತಿ ಮಾತನಾಡಿ ಮೊದಲಿಗೆ ನೋಂದಾಯಿತರೂ ಕೂಡಾ 8980808080 ಮೊಬೈಲ್‌ ನಂಬರ್‌ಗೆ ಮಿಸ್‌ ಕಾಲ ಮಾಡುವ ಮೂಲಕ ಮತ್ತೊಮ್ಮೆ ಸದಸ್ಯರಾಗಬೇಕು. ಮೊದಲಿದ್ದವರಿಗೆ ನೋಂದಾಯಿತ ಮೆಸೇಜ್‌ ಬರಲಿದೆ. ಹೊಸದಾಗಿ ಆದವರಿಗೆ ನೋಂದಣಿ ಮೆಸೇಜ್‌ ಬರಲಿದ್ದು, ಕಾರ್ಯಕರ್ತರು ಪ್ರತಿ ಬೂತ್‌ ಮಟ್ಟದಲ್ಲಿ ಬೂತ್‌ ಮತದಾರರ ಸಂಖ್ಯೆಯ ಪ್ರತಿಶತ 50ಕ್ಕೂ ಹೆಚ್ಚೆಗೆ ನೋಂದಣಿಯಾಗುವಂತೆ ಕಾರ್ಯಶೀಲರಾಗಬೇಕು ಎಂದರು.

ಜಿಪಂ ಮಾಜಿ ಸದಸ್ಯ ಎಫ್‌.ಆರ್‌.ಪಾಟೀಲ, ಜಾಲತಾಣ ಸಂಚಾಲಕ ಭುವನೇಶ ಪೂಜಾರ, ತಾಪಂ ಅಧ್ಯಕ್ಷೆ ರೇಣುಕಾ ಕೊಳ್ಳನ್ನವರ, ನಗರ ಘಟಕ ಅಧ್ಯಕ್ಷ ನಾಗರಾಜ ಕಾಚೆಟ್ಟಿ, ಪರಸಪ್ಪ ನಾಯ್ಕರ್‌, ಶರಣಬಸಪ್ಪ ಹಂಚಿನಾಳ ಉಪಸ್ಥಿತರಿದ್ದರು. ಅಡಿವೆಪ್ಪ ಡಾಣಕಶಿರೂರ, ತಾಪಂ ಸದಸ್ಯ ಕುಮಾರ ಪಟ್ಟಣಶೆಟ್ಟಿ, ನಿಂಗಪ್ಪ ಹೊಸಮನಿ, ಬಸವರಾಜ ಗೊನ್ನಾಗರ, ಕನಕಪ್ಪ ಬಂದಕೇರಿ, ಈರಣ್ಣ ಗಾಣಿಗೇರ, ಬಂಡಿವಡ್ಡರ, ಶಹಾಜಿ ಪವಾರ್‌ ಸೇರಿದಂತೆ ಕಾರ್ಯಕರ್ತರು ಇದ್ದರು. ಭೀಮನಗೌಡ ಪಾಟೀಲ ಸ್ವಾಗತಿಸಿದರು. ಶಿವನಗೌಡ ಸುಂಕದ ನುರೂಪಿಸಿದರು. ರಂಗಪ್ಪ ಹಳ್ಳಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ