ಬಾಗಲಕೋಟೆ: ಸಿದ್ದರಾಮಯ್ಯ ಮುಳುಗ್ತಾರಾ ಅಂತಾ ಡಿಕೆಶಿ ನೋಡ್ತಿದ್ದಾರೆ, ಡಿಕೆಶಿ ಮುಳುಗ್ತಾರಾ ಅಂತ ಸಿದ್ದರಾಮಯ್ಯ ನೋಡ್ತಿದ್ದಾರೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಮುಳುಗುತ್ತಿರುವ ಹಡಗು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅಧಿಕಾರ ಕಳ್ಕೊಂಡ ಮೇಲೆ, ಸ್ಥೀಮಿತನೂ ಕಳೆದುಕೊಂಡಿದ್ದಾರೆ. ಐದು ಪಂಚ್ಯ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ಪಶ್ಚಿಮ ಬಂಗಾಳ, ಆಸ್ಸಾಂ, ಪಾಂಡಿಚೇರಿ ಬಿಜೆಪಿ ಗೆಲ್ಲುತ್ತೆ. ತಮಿಳನಾಡು ಹಾಗೂ ಕೇರಳದಲ್ಲಿ, ಬಿಜೆಪಿ ಅಕೌಂಟ್ ಓಪನ್ ಮಾಡುತ್ತೆ. ಕರ್ನಾಟಕದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತೆ. ಕಾಂಗ್ರೆಸ್ ತಾಕತ್ತಿದ್ರೆ ಒಂದು ರಾಜ್ಯದಲ್ಲಿ ಗೆಲ್ಲಲಿ ಎಂದು ಕಟೀಲ್ ಕಾಂಗ್ರೆಸ್ಗೆ ಸವಾಲು ಹಾಕಿದರು.
ಯಾರು ಮುಳುಗೋ ಹಡಗು? ಅವರ ಹಡಗು ತೂತಾಗಿದೆ. ನೀರು ಒಳಗೆ ಬರ್ತಿದೆ. ಭಯದಿಂದ ಆ ಹಡಗು ಮುಳುಗ್ತಿದೆ ಎಂದು ಹೇಳ್ತಿದ್ದಾರೆ. ಆ ಹಡಗನ್ನ ಎತ್ತಲಿಕ್ಕೂ ಜನ ಇಲ್ಲ ಅಲ್ಲಿ. ಸಿದ್ದರಾಮಯ್ಯ ಮುಳುಗ್ತಾರಾ ಅಂತಾ ಡಿಕೆಶಿ ನೋಡ್ತಿದ್ದಾರೆ, ಡಿಕೆಶಿ ಮುಳುಗ್ತಾರಾ ಎಂದು ಸಿದ್ದರಾಮಯ್ಯ ನೋಡ್ತಿದ್ದಾರೆ. ಇಬ್ಬರು ಹಡಗಿನ ಕ್ಯಾಪ್ಟನ್ಗಳು ಆಚೆ, ಈಚೆ ಮುಖಮಾಡಿಕೊಂಡು ಕುಳ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ಪಕ್ಷದಲ್ಲಿ ನಾಯಕತ್ವ ಪ್ರಶ್ನೆ ಮತ್ತು ಪತ್ರ ಸಮರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕಟೀಲ್, ನಾಯಕತ್ವ ಯಾವುದೇ ಬದಲಾವಣೆ ಇಲ್ಲ. ಇನ್ನೂ ಎರಡೂವರೆ ವಷ೯ ಯಡಿಯೂರಪ್ಪನವರೇ ಇತಾ೯ರೆ.. ಬಿಎಸ್ವೈ ನಮ್ಮ ಸವ೯ ಸಮ್ಮತಿಯ ನಾಯಕ. ಯಾರೋ ಹಾದಿ ಬೀದಿಯಲ್ಲಿ ಹೋಗುವವರು ಮಾತನಾಡಿದ್ರೆ ನೀವು ಆಸ್ಪದೆ ಕೊಟ್ಟರೆ ನಾವು ಜವಾಬ್ದಾರರಲ್ಲ ಎಂದರು.
ರಾಜ್ಯದ ಅನೈತಿಕ ಸರಕಾರದಿಂದಾಗಿಯೇ, 2 ಸಲ ಪ್ರವಾಹ, ಕೊರೊನಾ ಬಂದಿದೆ: ಎಸ್.ಆರ್. ಪಾಟೀಲ್
ಯತ್ನಾಳ್ ಬಗ್ಗೆ ಕಿಡಿ!
ಪಕ್ಷದ ನೋಟಿಸ್ ಗೆ ಅದು ಲವ್ ಲೆಟರ್ ಎಂಬ ಯತ್ನಾಳ ಹೇಳಿಕೆ ವಿಚಾಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಪಕ್ಷ ಈಗಾಗಲೇ ನೋಟಿಸ್ ಕೊಟ್ಟಿದೆ. ಲವ್ ಲೆಟರ್ ಯಾವುದು? ನೋಟಿಸ್ ಯಾವುದೆಂಬ ಜ್ಞಾನ ಇಲ್ಲದವರು ಅಂತವರಿಗೆ ಏನಂತ ಮಾತನಾಡಬೇಕು ಎಂದರು.
ಇನ್ನು ಯತ್ನಾಳ್ ಹೇಳಿಕೆಗಳು ರಾಷ್ಟ್ರೀಯ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು. ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಶಿಸ್ತು ಸಮಿತಿ ಇದೆ. ಇದೆಲ್ಲವನ್ನು ಶಿಸ್ತು ಸಮಿತಿ ಅವಲೋಕನ ಮಾಡುತ್ತೇ. ಮತ್ತು ಅದು ನಡೀತಿದೆ. ನೋಟಿಸ್ ನೀಡಿದ್ದರೆ, ಉತ್ತರ ಕೊಟ್ಟರೆ ಇನ್ನೊಂದು ನೋಟಿಸ್ ಹೋಗುತ್ತೆ. ಇನ್ನೂ ಹದ್ದು ಮೀರಿ ಅವರೇ ಹೊರಗೆ ಹೀಗಬೇಕೆನ್ನೋದಿದ್ರೆ ಅದು ಅವರ ತಪ್ಪು. ಪಕ್ಷ ಎಲ್ಲವನ್ನ ಸಿಸ್ಟಮ್ ಅಲ್ಲೆ ತರುತ್ತೇ ಎಂದು ಕಟೀಲ್ ತಿಳಿಸಿದರು.
ಯಾರು ಮುಳುಗೋ ಹಡಗು? ಅವರ ಹಡಗು ತೂತಾಗಿದೆ. ನೀರು ಒಳಗೆ ಬರ್ತಿದೆ. ಭಯದಿಂದ ಆ ಹಡಗು ಮುಳುಗ್ತಿದೆ ಎಂದು ಹೇಳ್ತಿದ್ದಾರೆ. ಆ ಹಡಗನ್ನ ಎತ್ತಲಿಕ್ಕೂ ಜನ ಇಲ್ಲ ಅಲ್ಲಿ. ಸಿದ್ದರಾಮಯ್ಯ ಮುಳುಗ್ತಾರಾ ಅಂತಾ ಡಿಕೆಶಿ ನೋಡ್ತಿದ್ದಾರೆ, ಡಿಕೆಶಿ ಮುಳುಗ್ತಾರಾ ಎಂದು ಸಿದ್ದರಾಮಯ್ಯ ನೋಡ್ತಿದ್ದಾರೆ. ಇಬ್ಬರು ಹಡಗಿನ ಕ್ಯಾಪ್ಟನ್ಗಳು ಆಚೆ, ಈಚೆ ಮುಖಮಾಡಿಕೊಂಡು ಕುಳ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ಪಕ್ಷದಲ್ಲಿ ನಾಯಕತ್ವ ಪ್ರಶ್ನೆ ಮತ್ತು ಪತ್ರ ಸಮರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕಟೀಲ್, ನಾಯಕತ್ವ ಯಾವುದೇ ಬದಲಾವಣೆ ಇಲ್ಲ. ಇನ್ನೂ ಎರಡೂವರೆ ವಷ೯ ಯಡಿಯೂರಪ್ಪನವರೇ ಇತಾ೯ರೆ.. ಬಿಎಸ್ವೈ ನಮ್ಮ ಸವ೯ ಸಮ್ಮತಿಯ ನಾಯಕ. ಯಾರೋ ಹಾದಿ ಬೀದಿಯಲ್ಲಿ ಹೋಗುವವರು ಮಾತನಾಡಿದ್ರೆ ನೀವು ಆಸ್ಪದೆ ಕೊಟ್ಟರೆ ನಾವು ಜವಾಬ್ದಾರರಲ್ಲ ಎಂದರು.
ರಾಜ್ಯದ ಅನೈತಿಕ ಸರಕಾರದಿಂದಾಗಿಯೇ, 2 ಸಲ ಪ್ರವಾಹ, ಕೊರೊನಾ ಬಂದಿದೆ: ಎಸ್.ಆರ್. ಪಾಟೀಲ್
ಯತ್ನಾಳ್ ಬಗ್ಗೆ ಕಿಡಿ!
ಪಕ್ಷದ ನೋಟಿಸ್ ಗೆ ಅದು ಲವ್ ಲೆಟರ್ ಎಂಬ ಯತ್ನಾಳ ಹೇಳಿಕೆ ವಿಚಾಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಪಕ್ಷ ಈಗಾಗಲೇ ನೋಟಿಸ್ ಕೊಟ್ಟಿದೆ. ಲವ್ ಲೆಟರ್ ಯಾವುದು? ನೋಟಿಸ್ ಯಾವುದೆಂಬ ಜ್ಞಾನ ಇಲ್ಲದವರು ಅಂತವರಿಗೆ ಏನಂತ ಮಾತನಾಡಬೇಕು ಎಂದರು.
ಇನ್ನು ಯತ್ನಾಳ್ ಹೇಳಿಕೆಗಳು ರಾಷ್ಟ್ರೀಯ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು. ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಶಿಸ್ತು ಸಮಿತಿ ಇದೆ. ಇದೆಲ್ಲವನ್ನು ಶಿಸ್ತು ಸಮಿತಿ ಅವಲೋಕನ ಮಾಡುತ್ತೇ. ಮತ್ತು ಅದು ನಡೀತಿದೆ. ನೋಟಿಸ್ ನೀಡಿದ್ದರೆ, ಉತ್ತರ ಕೊಟ್ಟರೆ ಇನ್ನೊಂದು ನೋಟಿಸ್ ಹೋಗುತ್ತೆ. ಇನ್ನೂ ಹದ್ದು ಮೀರಿ ಅವರೇ ಹೊರಗೆ ಹೀಗಬೇಕೆನ್ನೋದಿದ್ರೆ ಅದು ಅವರ ತಪ್ಪು. ಪಕ್ಷ ಎಲ್ಲವನ್ನ ಸಿಸ್ಟಮ್ ಅಲ್ಲೆ ತರುತ್ತೇ ಎಂದು ಕಟೀಲ್ ತಿಳಿಸಿದರು.