ಆ್ಯಪ್ನಗರ

ಬಿಜೆಪಿಗೆ ಆರಂಭದಲ್ಲೇ ವಿಘ್ನ:ಎಸ್ಸಾರ್‌

ಬಾಗಲಕೋಟೆ : ಬಿಜೆಪಿ ಸರಕಾರಕ್ಕೆ ಸಚಿವ ಸಂಪುಟ ವಿಸ್ತರಣೆ ಮೂಲಕ ಆರಂಭದಲ್ಲೇ ವಿಘ್ನ ಆರಂಭವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ ತಿಳಿಸಿದರು.

Vijaya Karnataka 21 Aug 2019, 5:00 am
ಬಾಗಲಕೋಟೆ : ಬಿಜೆಪಿ ಸರಕಾರಕ್ಕೆ ಸಚಿವ ಸಂಪುಟ ವಿಸ್ತರಣೆ ಮೂಲಕ ಆರಂಭದಲ್ಲೇ ವಿಘ್ನ ಆರಂಭವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ ತಿಳಿಸಿದರು.
Vijaya Karnataka Web bjp strating trouble sr patil
ಬಿಜೆಪಿಗೆ ಆರಂಭದಲ್ಲೇ ವಿಘ್ನ:ಎಸ್ಸಾರ್‌


ಜಿಲ್ಲೆಯ ಬಾದಾಮಿ ತಾಲೂಕಿನ ಖ್ಯಾಡ ಗ್ರಾಮದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ರಚನೆ ಕುರಿತು ಮಾತನಾಡಿದ ಅವರು, ಬಿಜೆಪಿ ಸರಕಾರದ ಸಚಿವ ಸಂಪುಟ ರಚನೆ ಆಗುತ್ತಲೇ ವಿಘ್ನ ಎದುರಿಸುತ್ತಿದೆ. ಈ ಬೆಳವಣಿಗೆ ಸರಕಾರದ ಆಯುಷ್ಯ ಕಡಿಮೆ ಇದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ ಎಂದರು.

ಬಿಜೆಪಿ ಬೇವಿನ ಬೀಜ ಬಿತ್ತಿ ಮಾವಿನಹಣ್ಣಿಗೆ ಆಸೆ ಪಡುವಂತೆ ಕಾಣುತ್ತಿದೆ. ಆದರೆ ಬೇವಿನ ಬೀಜ ಬಿತ್ತಿದರೆ ಬೇವಿನ ಬೀಜವೇ ಬರುತ್ತದೆಯೇ ಹೊರತು ಮಾವಿನಹಣ್ಣು ಬರಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಸಚಿವರಾಗಬೇಕೆಂಬ ಆಸೆ ಹೊತ್ತ ಹಲವರ ನಿರೀಕ್ಷೆ ಹುಸಿಯಾಗಿದೆ. ಒತ್ತಡದಲ್ಲೇ ಸಚಿವ ಸಂಪುಟ ರಚನೆ ಆದಂತೆ ತೋರುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ರೀತಿ, ಶಾಸಕರಿಗೆ ಆಮಿಷವೊಡ್ಡಿ ರಾಜೀನಾಮೆ ಕೊಡಿಸಿದ್ದು ಇದೆಲ್ಲವನ್ನೂ ನೋಡಿದರೆ ಸರಕಾರದ ಅವಧಿ ತುಂಬಾ ಕಡಿಮೆ ಎಂದು ತೋರುತ್ತಿದೆ. ಜತೆಗೆ ಅನರ್ಹ ಶಾಸಕರ ಸ್ಥಿತಿಯಂತೂ ತ್ರಿಶಂಕುವಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ