ಆ್ಯಪ್ನಗರ

ಪಿತೃಪಕ್ಷ ಮುಗಿದ ಬಳಿಕ ಅಧಿಕಾರಕ್ಕೆ ಬರಲಿದೆ ಬಿಜೆಪಿ: ವೀರಣ್ಣ ಚರಂತಿಮಠ

ಶಾಸಕರು ರಾಜೀನಾಮೆ‌ ಕೊಟ್ಟು ಚುನಾವಣೆ‌ ಎದುರಿಸುವುದು ಅಷ್ಟೊಂದು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಪ್ರಯತ್ನ ಮುಂದುವರೆದಿದೆ. ಬಿಜೆಪಿ ಇಂದಲ್ಲ‌ ನಾಳೆ ಪಿತೃ ಪಕ್ಷದ ಬಳಿಕ ಅಧಿಕಾರ ಗದ್ದುಗೆ ಹಿಡಿಯುತ್ತೆ ಎಂದ ವೀರಣ್ಣ.

Vijaya Karnataka Web 25 Sep 2018, 3:13 pm
ಬಾಗಲಕೋಟ: ರಾಜ್ಯ ಸಮ್ಮಿಶ್ರ ಸರಕಾರ ಕುರಿತ ಗೊಂದಲಗಳು ಮುಂದುವರಿದಿರುವಂತೆಯೇ ಪಿತೃ ಪಕ್ಷದ ಬಳಿಕ ಬಿಜೆಪಿ‌ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೊಸ ಬಾಂಬ್ ಸಿಡಿಸಿದ್ದಾರೆ.
Vijaya Karnataka Web veernna charanthimat.


ಬಾಗಲಕೋಟದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಿಧಾನ ಪರಿಷತ್ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನುಕಣಕ್ಕಿಳಿಸದ ಹಾಗೂ ಅಧಿಕಾರ ಹಿಡಿಯುವ ಕಸರತ್ತು ಠುಸ್ಸಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಅಧಿಕಾರ ಹಿಡಿಯುವ ಪ್ರಯತ್ನ ಮುಂದುವರಿದಿದೆ. ಸೂಕ್ತ ಸಂದರ್ಭದಲ್ಲಿ‌ ಎಲ್ಲವನ್ನೂ ಹೇಳಲಾಗುವುದು ಎಂದರು. ಈಗ ತಾತ್ಕಾಲಿಕವಾಗಿ ಪ್ರಯತ್ನ ಸ್ಥಗಿತಗೊಳಿಸಲಾಗಿದೆ. ಪಿತೃ ಪಕ್ಷ ಮುಗಿದ ಬಳಿಕ ಮಹೂರ್ತ ಫಿಕ್ಸ್ ಮಾಡಲಾಗುವುದು ಎಂದರು.

ಶಾಸಕರು ರಾಜೀನಾಮೆ‌ ಕೊಟ್ಟು ಚುನಾವಣೆ‌ ಎದುರಿಸುವುದು ಅಷ್ಟೊಂದು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಪ್ರಯತ್ನ ಮುಂದುವರೆದಿದೆ. ಬಿಜೆಪಿ ಇಂದಲ್ಲ‌ ನಾಳೆ ಪಿತೃ ಪಕ್ಷದ ಬಳಿಕ ಅಧಿಕಾರ ಗದ್ದುಗೆ ಹಿಡಿಯುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಆಂತರಿಕ ವಿಷಯಗಳನ್ನು ಬಹಿರಂಗ ಪಡಿಸುವುದಿಲ್ಲ, ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ