ಆ್ಯಪ್ನಗರ

ಶ್ರೀರಾಮುಲು ಪರ ಅಮಿತೋತ್ಸಾಹ

ಬಾದಾಮಿ : ಸಿಎಂ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ದಿನ ಪ್ರದರ್ಶನವಾಗಿದ್ದ ಕಾಂಗ್ರೆಸ್‌ ಶಕ್ತಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರೋಡ್‌ ಶೋ ಮೂಲಕ ಗುರುವಾರ ಶಕ್ತಿ ಪ್ರದರ್ಶನ ಮಾಡಿತು. ಈ ಮೂಲಕ ಚಾಲುಕ್ಯರ ನಾಡು ಬಾದಾಮಿಯ ಈ ಚುನಾವಣಾ ಕಣ, ರಂಗಿನಿಂದಲೇ ಆರಂಭವಾಗಿ ರಂಗಿನಿಂದಲೇ ಅಂತ್ಯ ಕಂಡಂತಿತ್ತು.

Vijaya Karnataka 10 May 2018, 9:17 pm
ಬಾದಾಮಿ : ಸಿಎಂ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ ದಿನ ಪ್ರದರ್ಶನವಾಗಿದ್ದ ಕಾಂಗ್ರೆಸ್‌ ಶಕ್ತಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರೋಡ್‌ ಶೋ ಮೂಲಕ ಗುರುವಾರ ಶಕ್ತಿ ಪ್ರದರ್ಶನ ಮಾಡಿತು. ಈ ಮೂಲಕ ಚಾಲುಕ್ಯರ ನಾಡು ಬಾದಾಮಿಯ ಈ ಚುನಾವಣಾ ಕಣ, ರಂಗಿನಿಂದಲೇ ಆರಂಭವಾಗಿ ರಂಗಿನಿಂದಲೇ ಅಂತ್ಯ ಕಂಡಂತಿತ್ತು.
Vijaya Karnataka Web bjps big road show
ಶ್ರೀರಾಮುಲು ಪರ ಅಮಿತೋತ್ಸಾಹ


ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ ಕಾಲಕ್ಕೆ ಹೇಳಿಕೊಳ್ಳುವಷ್ಟು ಜನ ಸೇರಿರಲಿಲ್ಲ. ಸ್ಥಳೀಯ ನಾಯಕರೇ ರೋಡ್‌ ಶೋ ನಡೆಸಿದ್ದರು. ಈಗ ಅದೆಲ್ಲವನ್ನೂ ಮೀರಿ ರೋಡ್‌ ಶೋನಲ್ಲಿ ಸೇರಿದ್ದ ಜನಸ್ತೋಮ ಇಡೀ ಬಾದಾಮಿ ಸುತ್ತಲಿನ ಪರಿಸರದಲ್ಲಿ ಕಮಲ ಪಾಳಯದಲ್ಲಿ ಚೈತನ್ಯ ಮೂಡಿಸಿತು. 'ಅಮಿತೋತ್ಸಾಹ'ದಲ್ಲಿ ನಡೆದ ರೋಡ್‌ ಶೋ ಕಣವನ್ನು ಮತ್ತಷ್ಟು ರಂಗೇರಿಸಿದರು.

ಅಭ್ಯರ್ಥಿ, ಬಿಜೆಪಿಗೆ ಜೈಕಾರ

ಶ್ರೀರಾಮುಲು ಪರ ಮತಯಾಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬೆಳಗ್ಗೆ 11ಕ್ಕೆ ಆಗಮಿಸುತ್ತಿದ್ದಂತೆ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿನ ಕಾರ್ಯಕರ್ತರ ದಂಡು ದೌಡಾಯಿಸಿತು. ಜಯಘೋಷಣೆ ಮೂಲಕ ಬೆಂಬಲ ಸೂಚಿಸಿದರು. ತೆರೆದ ವಾಹನವೇರಿದ ಮುಖಂಡರು, ಕಾರ್ಯಕರ್ತರು ಅಭ್ಯರ್ಥಿ ಪರ ಘೋಷಣೆ, ನಾನಾ ವಾದ್ಯಮೇಳಗಳೊಂದಿಗೆ ಬಸವೇಶ್ವರ ಸರ್ಕಲ್‌ದಿಂದ ರೋಡ್‌ ಶೋ ಆರಂಭವಾಯಿತು. 25 ಸಾವಿರಕ್ಕೂ ಅಧಿಕ ಜನ ಭಾಗಿಯಾಗಿದ್ದರು. ಸುಮಾರು 3 ಗಂಟೆ ಕಾಲ ನಡೆದ ಮೆರವಣಿಗೆ ಅಂಬೇಡ್ಕರ್‌ ವೃತ್ತಕ್ಕೆ ತೆರಳಿತು. ಅಲ್ಲಿ ಸಂವಿಧಾನ ಶಿಲ್ಪಿ ಪುತ್ಥಳಿಗೆ ಅಮಿತ್‌ ಶಾ ಹಾಗೂ ಬಿಎಸ್‌ವೈ ಮಾಲಾರ್ಪಣೆ ಮಾಡಿದರು. ನಂತರ ರಾಮದುರ್ಗ ಕ್ರಾಸ್‌ನಲ್ಲಿ ರೋಡ್‌ ಶೋ ಅಂತ್ಯಗೊಂಡಿತು.

ಸಂಸದ ಪಿ.ಸಿಗದ್ದಿಗೌಡರ, ಎಂ.ಕೆ.ಪಟ್ಟಣಶೆಟ್ಟಿ, ಮಹಾಂತೇಶ ಮಮದಾಪೂರ, ಆರ್‌.ವಿ.ಶೀಲವಂತರ, ಎಸ್‌.ಟಿ.ಪಾಟೀಲ, ಪಿ.ಎಚ್‌.ಪೂಜಾರ ಸೇರಿದಂತೆ ಅನೇಕರು ರೋಡ್‌ ಶೋ ವಾಹನದಲ್ಲಿದ್ದರು.

ಸಂಚಾರ ಅಸ್ತವ್ಯಸ್ತ

ನಗರದ ಪ್ರಮುಖ ರಸ್ತೆಗಳಲ್ಲಿ 3 ಗಂಟೆ ಕಾಲ ರೋಡ್‌ ಶೋ ಹಾಗೂ ರಾಜ್ಯ ಹೆದ್ದಾರಿ ಕಾಮಗಾರಿ ನಡೆದಿದ್ದರಿಂದ ಸಾರ್ವಜನಿಕ ಸಂಚಾರ ಅಸ್ತವ್ಯಸ್ತಗೊಂಡಿತು. ಮುಖ್ಯರಸ್ತೆಯಲ್ಲಿನ ಕೆಂಪು ಮಣ್ಣು ಮುಖಂಡರು ಹಾಗೂ ಕಾರ್ಯಕರ್ತರಿಗೆ ಮೆತ್ತಿದ್ದು ಕಂಡುಬಂತು. ಅಮಿತ್‌ ಶಾ ಸೇರಿದಂತೆ ಬಿಜೆಪಿ ಮುಖಂಡರು ರೋಡ್‌ ಶೋನ ವಿಡಿಯೋ ತುಣುಕುಗಳನ್ನು ಟ್ವೀಟ್‌ ಮಾಡಿ ಸಂಭ್ರಮಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ