ಆ್ಯಪ್ನಗರ

ಬಾಡಿ ಕ್ಯಾಮ್‌ ಇವೆ ಹುಷಾರ್‌

ಬಾಗಲಕೋಟೆ : ವಾಹನದಲ್ಲಿತೆರಳುತ್ತಿರುವಾಗ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರೊಂದಿಗೆ ಇನ್ನು ವಾದಕ್ಕಿಳಿಯುವಂತಿಲ್ಲ, ಏಕೆಂದರೆ ಪೊಲೀಸರ ಬಳಿ ಈಗ ಮೂರನೇ ಕಣ್ಣಿದೆ !. ಹೌದು, ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿದಾಗ ಸಾಮಾನ್ಯವಾಗಿ ಕಾರ್‌, ಬೈಕ್‌ ಸವಾರರು ಪೊಲೀಸರೊಂದಿಗೆ ವಾದ, ವಿವಾದ ನಡೆಸುತ್ತಾರೆ. ಇದೀಗ ಪೊಲೀಸರ ಬಳಿ ಬಾಡಿ ಕ್ಯಾಮ್‌ ಇರುವುದರಿಂದ ಚಟುವಟಿಕೆ ಎಲ್ಲಚಿತ್ರೀಕರಣವಾಗುತ್ತದೆ. ನಂತರ ನಾವು 'ಹಾಗೆ ಮಾಡಿಲ್ಲ' ಎಂದು ಜಾರಿಕೊಳ್ಳಲು ಅವಕಾಶವಿಲ್ಲ.

Vijaya Karnataka 15 Nov 2019, 5:00 am
ರವಿರಾಜ್‌ ಆರ್‌.ಗಲಗಲಿ ಬಾಗಲಕೋಟೆ
Vijaya Karnataka Web body cams are hushar
ಬಾಡಿ ಕ್ಯಾಮ್‌ ಇವೆ ಹುಷಾರ್‌


ವಾಹನದಲ್ಲಿತೆರಳುತ್ತಿರುವಾಗ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರೊಂದಿಗೆ ಇನ್ನು ವಾದಕ್ಕಿಳಿಯುವಂತಿಲ್ಲ, ಏಕೆಂದರೆ ಪೊಲೀಸರ ಬಳಿ ಈಗ ಮೂರನೇ ಕಣ್ಣಿದೆ !.

ಹೌದು, ಟ್ರಾಫಿಕ್‌ ರೂಲ್ಸ್‌ ಉಲ್ಲಂಘಿಸಿದಾಗ ಸಾಮಾನ್ಯವಾಗಿ ಕಾರ್‌, ಬೈಕ್‌ ಸವಾರರು ಪೊಲೀಸರೊಂದಿಗೆ ವಾದ, ವಿವಾದ ನಡೆಸುತ್ತಾರೆ. ಇದೀಗ ಪೊಲೀಸರ ಬಳಿ ಬಾಡಿ ಕ್ಯಾಮ್‌ ಇರುವುದರಿಂದ ಚಟುವಟಿಕೆ ಎಲ್ಲಚಿತ್ರೀಕರಣವಾಗುತ್ತದೆ. ನಂತರ ನಾವು 'ಹಾಗೆ ಮಾಡಿಲ್ಲ' ಎಂದು ಜಾರಿಕೊಳ್ಳಲು ಅವಕಾಶವಿಲ್ಲ.

ವಾದ ಮಾಡುವಂತಿಲ್ಲ

ಪಾರದರ್ಶಕ ಆಡಳಿತಕ್ಕಾಗಿ ಬಾಗಲಕೋಟೆ ಎಸ್‌ಪಿ ಲೋಕೇಶ್‌ ಜಗಲಾಸರ್‌ ಬಾಡಿ ಕ್ಯಾಮ್‌ಗಳನ್ನು ಟ್ರಾಫಿಕ್‌ ಪೊಲೀಸರಿಗೆ ಒದಗಿಸಿದ್ದಾರೆ. ಇದೇ ಮೊದಲ ಬಾರಿ ಜಿಲ್ಲೆಯಲ್ಲಿವಿನೂತನ ಪ್ರಯೋಗ ನಡೆದಿದೆ. ಸದ್ಯ ಬಾಗಲಕೋಟೆ ನಗರದಲ್ಲಿ15 ಪೊಲೀಸರಿಗೆ ಬಾಡಿ ಕ್ಯಾಮ್‌ ನೀಡಲಾಗಿದೆ. ಮುಂದೆ ಜಿಲ್ಲೆಯಾದ್ಯಂತ ಟ್ರಾಫಿಕ್‌ ನಿಯಂತ್ರಿಸುವ ಪೊಲೀಸರು ಈ ಕ್ಯಾಮ್‌ಧಾರಿಗಳಾಗಲಿದ್ದಾರೆ. ಸಂಚಾರ ನಿಯಂತ್ರಣೆ, ನಿಯಮ ಉಲ್ಲಂಘನೆಗೆ ದಂಡ ಹಾಕುವ ಪೊಲೀಸರು ಹಲವಾರು ಬಾರಿ ವಾಹನ ಸವಾರರೊಂದಿಗೆ ವಾಗ್ವಾದಕ್ಕಿಳಿಯಬೇಕಾಗುತ್ತದೆ. 'ನಾನು ನಿಯಮ ಉಲ್ಲಂಘಿಸಿಲ್ಲ' ಎಂದು ವಾಹನ ಸವಾರರು ವಾದ ಮಾಡುತ್ತಾರೆ. ಇನ್ನು ಪೊಲೀಸರು ಕೂಡ ಪ್ರಕರಣ ದಾಖಲಿಸದಿರಲು ಹಣ ಕೇಳಿದರು ಎಂಬ ಆರೋಪಗಳು ಕೇಳಿ ಬರುತ್ತವೆ. ಬಾಡಿ ಕ್ಯಾಮ್‌ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.

ಟ್ರಾಫಿಕ್‌ ಪೊಲೀಸರ ಶರ್ಟ್‌ನಲ್ಲಿಅಳವಡಿಸಲಾಗುವ ಕ್ಯಾಮೆರಾ ಮೂಲಕ ಇಡೀ ದಿನದ ಚಿತ್ರಣ ದಾಖಲಾಗುತ್ತದೆ. ಪೊಲೀಸರು ವಾಹನ ಸವಾರರನ್ನು ನಿಲ್ಲಿಸಿದ ಕ್ಷಣ, ಅಪಘಾತ ಸ್ಥಳಗಳಿಗೆ ಭೇಟಿ ನೀಡಿದ ದೃಶ್ಯ, ವಾಹನ ಸವಾರರು ನಡೆಸುವ ಚಟುವಟಿಕೆಗಳೆಲ್ಲಇಲ್ಲಿಚಿತ್ರೀಕರಣವಾಗುತ್ತವೆ. ಇದರಿಂದಾಗಿ ಸಂಚಾರ ನಿಯಂತ್ರಣದ ಸಂದರ್ಭದಲ್ಲಿಏನೇನಾಯಿತು ಎಂಬ ಮಾಹಿತಿ ದೃಶ್ಯಗಳ ಮೂಲಕ ದೊರಕುತ್ತದೆ. ಇದು ಪ್ರಕರಣದಲ್ಲಿಸಾಕ್ಷಿಯಾಗಿಯೂ ಪರಿಗಣಿತವಾಗುತ್ತದೆ. ಪೊಲೀಸರು ಸರಿಯಾಗಿ ಕ್ರಮ ಕೈಗೊಳ್ಳಲಿಲ್ಲ, ನಿಯಮ ಉಲ್ಲಂಘಿಸಿದ್ದರೂ ದಂಡ ವಿಧಿಸಲಿಲ್ಲಎಂಬ ಆರೋಪಗಳಿಗೆ ಕ್ಯಾಮೆರಾ ಮೂಲಕ ಉತ್ತರ ದೊರೆಯಲಿದೆ.

ಪಾರದರ್ಶಕ ಆಡಳಿತ

ಸದ್ಯ 15 ಕ್ಯಾಮೆರಾಗಳ ಮೂಲಕ ವಾಹನ ಸವಾರರ ವಾಹನ ಚಾಲನೆ, ಸಂಚಾರ ನಿಯಂತ್ರಣ, ಅಪಘಾತ ಸ್ಥಳದ ಭೇಟಿಯಂತಹ ದೃಶ್ಯಗಳು ಸೆರೆಯಾಗುತ್ತಿವೆ. ಒಮ್ಮೆ ರೆಕಾರ್ಡಿಂಗ್‌ ಆರಂಭಗೊಂಡರೆ ಎರಡು ದಿನದ ದೃಶ್ಯಗಳು ಕ್ಯಾಮೆರಾದಲ್ಲಿದೊರೆಯುತ್ತವೆ. ಈ ದೃಶ್ಯಗಳನ್ನು ಡೌನ್‌ಲೋಡ್‌ ಮಾಡಿ ಇಡಬಹುದು. ಕಂಪ್ಯೂಟರ್‌ ಮೂಲಕ ದೃಶ್ಯಗಳನ್ನು ವೀಕ್ಷಿಸಲು ಸಾಧ್ಯವಿದೆ. ಬಾಗಲಕೋಟೆ ನಗರದ ವಿದ್ಯಾಗಿರಿ ಸರ್ಕಲ್‌, ಬಸವೇಶ್ವರ ವೃತ್ತ, ಎಪಿಎಂಸಿ ವೃತ್ತ, ಗದ್ದನಕೇರಿ ಕ್ರಾಸ್‌ಗಳಲ್ಲಿನಿಯೋಜಿತರಾದ ಟ್ರಾಫಿಕ್‌ ಕಾನ್‌ಸ್ಟೇಬಲ್‌ಗಳು ಕ್ಯಾಮೆರಾ ಬಳಸುತ್ತಿದ್ದಾರೆ. ಪ್ರತಿ ದೃಶ್ಯವೂ ಕ್ಯಾಮೆರಾದಲ್ಲಿರೆಕಾರ್ಡ್‌ ಆಗುವುದರಿಂದ ವಿಶೇಷವಾಗಿ ಬೈಕ್‌ ಸವಾರರು ವಾದ ಮಾಡಲು ಅವಕಾಶವಿಲ್ಲ. ಅಕಸ್ಮಾತ್‌ ಪೊಲೀಸರು ತಪ್ಪು ಮಾಡಿದ್ದರೆ ಅದು ಕೂಡ ಚಿತ್ರೀಕರಣವಾಗುತ್ತದೆ. ಹೀಗಾಗಿ ವಾಹನ ಸವಾರರೂ ಈಗ ಜಾಗೃತರಾಗಿದ್ದಾರೆ.

---

ಪಾರದರ್ಶಕ ಆಡಳಿತದ ದೃಷ್ಟಿಯಿಂದ ಬಾಡಿ ಕ್ಯಾಮ್‌ಗಳನ್ನು ಪೊಲೀಸರಿಗೆ ನೀಡಲಾಗಿದೆ. ವಾಹನ ಸವಾರರ ಸಂಚಾರ ಉಲ್ಲಂಘನೆ ಕ್ಯಾಮೆರಾದಲ್ಲಿದಾಖಲಾಗುತ್ತದೆ. ಕ್ಯಾಮೆರಾಗಳಲ್ಲಿಪ್ರತಿ ಚಟುವಟಿಕೆ ದಾಖಲಾಗುವುದರಿಂದ ಪೊಲೀಸರ ಮೇಲೆ ಆರೋಪ ಬಂದಾಗ ಪರಿಶೀಲಿಸಲು ದಾಖಲೆ ದೊರೆಯುತ್ತದೆ. ಶೀಘ್ರದಲ್ಲೇ ಜಿಲ್ಲೆಯ ಪ್ರತಿ ತಾಲೂಕಿಗೆ ಬಾಡಿ ಕ್ಯಾಮ್‌ ಒದಗಿಸಲಾಗುತ್ತದೆ.

-ಲೋಕೇಶ ಜಗಲಾಸರ್‌, ಎಸ್‌ಪಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ