ಆ್ಯಪ್ನಗರ

ಸಂವಿಧಾನ ಸುಡೋದು ಅನಾಗರಿಕ ಪ್ರವೃತ್ತಿ: ನ್ಯಾ. ನಾಗಮೋಹನ್‌ ದಾಸ್‌

ಸಂವಿಧಾನ ಸುಟ್ಟರೆ ಪರ್ಯಾಯ ವ್ಯವಸ್ಥೆ ಏನು?, ದೇಶದಲ್ಲಿ ಅರಾಜಕತೆ ಉಂಟಾಗುತ್ತೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಏನು?

Vijaya Karnataka Web 8 Dec 2018, 3:22 pm
ಬಾಗಲಕೋಟ: ಯಾವುದೇ ಗ್ರಂಥವಾದರೂ ಓದಿ, ಅರ್ಥ ಮಾಡಿಕೊಳ್ಳಬೇಕು. ಅರ್ಥವಾಗಿಯು ಕೂಡ ಭಿನ್ನಾಭಿಪ್ರಾಯವಿದ್ದರೆ, ಅದನ್ನು ವ್ಯಕ್ತಪಡಿಸಬೇಕು. ಆದರೆ, ಗ್ರಂಥ ಸುಡುತ್ತೇವೆ ಎನ್ನುವುದು ಅನಾಗರಿಕ ಪ್ರವೃತ್ತಿ ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಿವಿಮಾತು ಹೇಳಿದ್ದಾರೆ.
Vijaya Karnataka Web nag


ನಗರದಲ್ಲಿ ಮಾತನಾಡಿದ ಅವರು, ಸಂವಿಧಾನ ಸುಟ್ಟರೆ ಪರ್ಯಾಯ ವ್ಯವಸ್ಥೆ ಏನು?, ದೇಶದಲ್ಲಿ ಅರಾಜಕತೆ ಉಂಟಾಗುತ್ತೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಏನು?, ಸಂವಿಧಾನ ಬದಲಾಯಿಸುತ್ತೇನೆ ಎನ್ನುವರು ಪರ್ಯಾಯ ವ್ಯವಸ್ಥೆ ಏನಿಟ್ಟಿದ್ದೀರಾ?, ದೇಶದ ಜನತೆಗೆ ಅಲ್ಟರ್ನೆಟ್ ಕೊಡಲೇಬೇಕು, ಏನಿಟ್ಟಿದ್ದೀರಾ ಸ್ವಾಮಿ?, ಅಲ್ಟರ್ನೆಟ್ ಇಲ್ಲದೆ ಮಾತನಾಡುತ್ತಿದ್ದೀರಿ. ದೇಶದಲ್ಲಿ ಅರಾಜಕತೆ ಸೃಷ್ಟಿಸುವುದೇ ಉದ್ದೇಶನಾ?, ಅರಾಜಕತೆ ಉಂಟಾದರೆ ಪ್ರಜಾಪ್ರಭುತ್ವ ಕಳೆದುಕೊಳ್ಳುತ್ತೇವೆ. ಆಗ ಬಾಯಿಗೆ ಬೀಗ ಹಾಕಿಕೊಂಡು ಗುಲಾಮರಂತೆ ಬದುಕಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. .
ರಾಜಕೀಯ ವ್ಯಕ್ತಿಗಳಿದ ಸಂವಿಧಾನ ಬದಲಾವಣೆ ಮಾಡುವ ವಿಚಾರ ಪ್ರಸ್ತಾಪಿಸಿ ಮಾತನಾಡಿರುವ ನ್ಯಾಯಮೂರ್ತಿಗಳು, ಜನತೆಗೆ ಮೂಲಭೂತ ಹಕ್ಕು ಸಿಗುವ ಸಂವಿಧಾನ ನಿಮ್ಮ ಬಳಿ ಇದ್ದರೆ ದೇಶದ ಮುಂದೆ ಇಡಿ. ಈ ಬಗ್ಗೆ ಚರ್ಚೆ ನಡೆಯಲಿ. ದೇಶದ ಜನರೇ ಯಾವ ರೀತಿಯ ಸಂವಿಧಾನ ಬೇಕೆಂದು ನಿರ್ಧರಿಸಲಿ ಎಂದಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ

ಪ್ರತ್ಯೇಕ ಲಿಂಗಾಯತ ಧರ್ಮದ ವರದಿಯೊಂದು ಯುನಾನಮಸ್. ವರದಿಯನ್ನು ನಾನೊಬ್ಬನೆ ಬರೆದಿಲ್ಲ. ಒಬ್ಬಬ್ಬೊ ಸದಸ್ಯರು ಒಂದೊಂದು ಅಧ್ಯಾಯ ಬರೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪ್ರತ್ಯೇಕ ಲಿಂಗಾಯತ ಧರ್ಮ ಪ್ರಸ್ತಾವನೆಯನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಸಲ್ಲಿಸಿದೆ. ಆದರೆ, ಅದು ಪೆಂಡಿಗ್ ಆಗಿಯೇ ಉಳಿದಿದೆ. ನನ್ನ ವರದಿ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಈ ಬಗ್ಗೆ ಸರಕಾರವೇ ತೀರ್ಮಾನ ಮಾಡಲಿ ಎಂದಿದ್ದಾರೆ.

ಜನತೆಗೆ ಈ ಸ್ಥಿತಿ ಬರಬಾರದಿತ್ತು

ಜನರ ಸಮಸ್ಯೆಗೆ ಸರಕಾರ ಪರಿಹಾರ ಸೂಚಿಸಬೇಕು. ಆದರೆ, ದುರಾದೃಷ್ಟವಾಶತ್, ಸರಕಾರವೇ ಜನರಿಗೆ ಸಮಸ್ಯೆ ತಂದೊಡ್ಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಜನತೆಗೆ ಇಂಥ ಸ್ಥಿತಿ ಬರಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ರೈತರ ಸಾಲಮನ್ನಾ ಮಾಡುವಲ್ಲಿ ಸರಕಾರ ದೃಢ ನಿರ್ಧಾರ ಕೈಕೊಂಡಿದೆ. ತೊಡಕುಗಳು ನಿವಾರಣೆಯಾಗಿ ಬೇಗ ಸಾಲಮನ್ನಾ ಆಗುವಂತಾಗಲಿ ಎಂದು ನಿವೃತ್ತ ನ್ಯಾಯಮೂತಿ೯ ಎಚ್‌.ಎಸ್. ನಾಗಮೋಹನ ದಾಸ್ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ