ಆ್ಯಪ್ನಗರ

ಬಸ್‌ ಡಿಕ್ಕಿ: ಕಟಗಿನಹಳ್ಳಿ ಮಹಿಳೆ ಸಾವು

ಮಂಗಳೂರಿನಿಂದ ಬಂದಿದ್ದ ವಲಸೆ ಕಾರ್ಮಿಕರನ್ನು ವಿಜಯಪುರಕ್ಕೆ ಬಿಟ್ಟು ಹಿಂದಿರುಗುವ ಸಂದರ್ಭದಲ್ಲಿಕುಡಿದ ಮತ್ತಿನಲ್ಲಿಚಾಲಕ ಮಾಡಿದ ಯಡವಟ್ಟಿನಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ ನೀರಿನ ಟ್ಯಾಂಕ್‌ಗೆ ಹಾಗೂ ಟ್ಯಾಂಕ್‌ ಬಳಿ ನಿಂತಿದ್ದ ಮೂವರಿಗೆ ಡಿಕ್ಕಿ ಹೊಡೆದ ಘಟನೆ ಸಮೀಪದ ಕಟಗಿನಹಳ್ಳಿ ಗ್ರಾಮದಲ್ಲಿನಡೆದಿದೆ.

Vijaya Karnataka Web 14 May 2020, 5:00 am
ಗುಳೇದಗುಡ್ಡ : ಮಂಗಳೂರಿನಿಂದ ಬಂದಿದ್ದ ವಲಸೆ ಕಾರ್ಮಿಕರನ್ನು ವಿಜಯಪುರಕ್ಕೆ ಬಿಟ್ಟು ಹಿಂದಿರುಗುವ ಸಂದರ್ಭದಲ್ಲಿಕುಡಿದ ಮತ್ತಿನಲ್ಲಿಚಾಲಕ ಮಾಡಿದ ಯಡವಟ್ಟಿನಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ ನೀರಿನ ಟ್ಯಾಂಕ್‌ಗೆ ಹಾಗೂ ಟ್ಯಾಂಕ್‌ ಬಳಿ ನಿಂತಿದ್ದ ಮೂವರಿಗೆ ಡಿಕ್ಕಿ ಹೊಡೆದ ಘಟನೆ ಸಮೀಪದ ಕಟಗಿನಹಳ್ಳಿ ಗ್ರಾಮದಲ್ಲಿನಡೆದಿದೆ.
Vijaya Karnataka Web bus collision woman dies in katangahalli
ಬಸ್‌ ಡಿಕ್ಕಿ: ಕಟಗಿನಹಳ್ಳಿ ಮಹಿಳೆ ಸಾವು


ಬಸ್‌ ಡಿಕ್ಕಿ ಹೊಡೆದ ಪರಿಣಾಮ ಜ್ಯೊತೆವ್ವ ಜಾಜ್‌ರ್‍ ಆಸಂಗಿ(36) ಚಿಕಿತ್ಸೆ ಫಲಿಸದೇ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿಸಾವಿಗಿಡಾಗಿದ್ದಾಳೆ. ನವೀನ್‌ ರತ್ನಪ್ಪ ನಾಗರಾಳ(22) ಹಾಗೂ 8 ವರ್ಷದ ಬಾಲಕಿ ಹೊಳೆವ್ವ ಸ್ಥಿತಿ ಗಂಭಿರವಾಗಿದ್ದು,ಅವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ.

ಬಸ್‌ ಚಾಲಕ ಪರಸಪ್ಪ ಶಿರಗುಪ್ಪಿ ಕುಡಿದ ಮತ್ತಿನಲ್ಲಿದ್ದು,ಆರೋಪಿ ಚಾಲಕ ಗುಳೇದಗುಡ್ಡ ತಾಲೂಕಿನ ಮಂಗಳಗುಡ್ಡ ನಿವಾಸಿ ಎಂದು ತಿಳಿದು ಬಂದಿದೆ. ಕೆಎಸ್‌ಆರ್‌ಟಿಸಿ ಬಸ್‌ ಸಮೇತ ಚಾಲಕ ಪರಸಪ್ಪ ತನ್ನ ಊರಿಗೆ ಹೊರಟಿದ್ದ, ಇನ್ನೊಬ್ಬ ಚಾಲಕ ಎಂ. ಸತೀಶಚಂದ್ರ ಕೂಡ ಮದ್ಯ ಸೇವಿಸಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೇ ಮಂಗಳೂರು ಡಿಪೋಗೆ ಸೇರಿದ ಬಸ್‌ನ್ನು ಠಾಣೆಗೆ ತಂದು ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ದಾಖಲಾಗಿದೆ.

ಪೋಟೊ:13ಜಿಎಲ್‌ಡಿ-1

ಗುಳೇದಗುಡ್ಡ ಸಮೀಪದ ಕಟಗಿನಹಳ್ಳಿ ಗ್ರಾಮದಲ್ಲಿಬಸ್‌ ಆಪಘಾತಗೊಂಡಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ