ಆ್ಯಪ್ನಗರ

ಸವದಿಗೆ ಸಿದ್ದರಾಮಯ್ಯ ಕರೆ, ‘ಕೆಎಸ್‌ಆರ್‌ಟಿಸಿ ನೌಕರರನ್ನು ಕರೆದು ಇತ್ಯರ್ಥ ಮಾಡಪ್ಪ’ ಎಂದ ಮಾಜಿ ಸಿಎಂ

“ಕೆಎಸ್ಸಾರ್ಟಿಸಿ ನೌಕರರನ್ನು ಕರೆದು ಇತ್ಯರ್ಥ ಮಾಡಪ್ಪ. ಜನಗಳಿಗೆ ತೊಂದ್ರೆಯಾಗುತ್ತೆ. ಕೊನೆಗೆ ನಿನ್ನನ್ನೇ ಬೈತಾರೆ,” ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

Vijaya Karnataka 12 Dec 2020, 4:21 pm
ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರ ಸಂಬಂಧ ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಕರೆ ಮಾಡಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಎಸ್‌ಆರ್‌ಟಿಸಿ ನೌಕರರನ್ನು ಕರೆದು ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚನೆ ನೀಡಿದ್ದಾರೆ.
Vijaya Karnataka Web Siddaramaiah


ಬಾದಾಮಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಮಧ್ಯೆ ಲಕ್ಷ್ಮಣ ಸವದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಮಾತನಾಡಿದರು.

“ಕೆಎಸ್ಸಾರ್ಟಿಸಿ ನೌಕರರನ್ನು ಕರೆದು ಇತ್ಯರ್ಥ ಮಾಡಪ್ಪ. ಜನಗಳಿಗೆ ತೊಂದ್ರೆಯಾಗುತ್ತೆ. ಕೊನೆಗೆ ನಿನ್ನನ್ನೇ ಬೈತಾರೆ,” ಎಂದು ಸಲಹೆ ನೀಡಿದ ಸಿದ್ದರಾಮಯ್ಯ, “ಸವದಿ ನಿನ್ನ ಕಷ್ಟ ನನಗೆ ಗೊತ್ತಿದೆ. ಕುಳಿತು ಮಾತನಾಡಿ, ಮುಷ್ಕರ ಕೈಬಿಡುವಂತೆ ಮಾಡಿ,” ಎಂದು ಸೂಚಿಸಿದರು.

ಇಂದೇ ಫೋನ್‌ ಮಾಡಿ ಕರೆದು ಕೂತು ಮಾತನಾಡುವಂತೆ ಹೇಳುತ್ತೇನೆ. ನೀವು ಮುಷ್ಕರ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದೀರಿ. ಈ ಮುಷ್ಕರ ಬಹಳ ದಿನ ಸಾಗದಿರಲಿ. ಇದರಿಂದ ಜನರಿಗೆ ತೊಂದರೆಯಾಗುತ್ತದೆ ಎಂದು ಸಿದ್ದರಾಮಯ್ಯ ಸಲಹೆ ನೀಡಿದರು. ನಂತರ ಲಕ್ಷ್ಮಣ ಸವದಿ ಅವರಿಗೆ ಕರೆ ಮಾಡಿ ಸಿದ್ದರಾಮಯ್ಯ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ