ಸಂತೆಯಲ್ಲಿಗಬ್ಬೆದ್ದ ಘಾಟು, ಕೆಸರಲ್ಲೇ ವಹಿವಾಟು
ಹುನಗುಂದ: ಪಟ್ಟಣದಲ್ಲಿಪ್ರತಿ ಶನಿವಾರ ನಡೆಯುವ ಸಂತೆಗೆ ಮೂಲ ಸೌಲಭ್ಯ ಕಲ್ಪಿಸದೇ ಇರುವುದರಿಂದ ಅಲ್ಲಲ್ಲಿ ಕೊಳಚೆ ನೀರಿನಲ್ಲಿವ್ಯಾಪಾರಿಗಳು ಹಾಗೂ ಗ್ರಾಹಕರು ಪರದಾಡುತ್ತ ಸಂತೆ ನಡೆಸುವಂತಾಯಿತು.
Vijaya Karnataka 22 Sep 2019, 5:00 am
ಹುನಗುಂದ: ಪಟ್ಟಣದಲ್ಲಿಪ್ರತಿ ಶನಿವಾರ ನಡೆಯುವ ಸಂತೆಗೆ ಮೂಲ ಸೌಲಭ್ಯ ಕಲ್ಪಿಸದೇ ಇರುವುದರಿಂದ ಅಲ್ಲಲ್ಲಿ ಕೊಳಚೆ ನೀರಿನಲ್ಲಿವ್ಯಾಪಾರಿಗಳು ಹಾಗೂ ಗ್ರಾಹಕರು ಪರದಾಡುತ್ತ ಸಂತೆ ನಡೆಸುವಂತಾಯಿತು.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಟ್ಟಣದಲ್ಲಿತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ ಇದಕ್ಕೆ ಸೂಕ್ತ ನಿರ್ವಹಣೆ ಇಲ್ಲದೆ ಹಂದಿ ಹಾಗೂ ಸಂಜೆಯಾದರೆ ಅನೈತಿಕ ಚಟುವಟಿಕೆಗಳ ಹಾಗೂ ಮದ್ಯಪಾನಿಗಳ ತಾಣವಾಗಿ ಪರಿಣಮಿಸುತ್ತದೆ. ಬಸ್ ನಿಲ್ದಾಣದ ಪಕ್ಕದಲ್ಲಿಇರುವ ಪುರಸಭೆ ಜಾಗದಲ್ಲಿಸಿ.ಎಂ.ಎಸ್.ಎಂ.ಟಿ.ಡಿ.ಪಿ ಯೋಜನೆ ಅಡಿಯಲ್ಲಿ2011ರಲ್ಲಿಪುರಸಭೆಯಿಂದ 15 ಲಕ್ಷ ಖರ್ಚು ಮಾಡಿ ತರಕಾರಿ ಮಾರುಕಟ್ಟೆ ನಿರ್ಮಿಸಿದ್ದು ಬಿಟ್ಟರೆ ಮಾರುಕಟ್ಟೆಗೆ ಯಾವುದೇ ಸುರಕ್ಷೆ ಇಲ್ಲ. ಸುತ್ತುಗೋಡೆ ಇಲ್ಲದ ಕಾರಣ ಸಾರ್ವಜನಿಕರು ನಿತ್ಯ ಈ ಸ್ಥಳದಲ್ಲಿಶೌಚಾಲಯವಾಗಿ ಮಾರ್ಪಟ್ಟು ಇಡೀ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ.
ಆದಾಯ ಬೇಕು ಅಭಿವೃದ್ಧಿಬೇಡ
ವಾರದ ಸಂತೆಯಲ್ಲಿಪುರಸಭೆ ಆದಾಯ ಬೇಕು, ಸಂತೆ ಮೈದಾನ ಅಭಿವೃದ್ಧಿ ಬೇಡವಾಗಿದೆ. ಸಂತೆ ಮೈದಾನವನ್ನು ಕಾಂಕ್ರಿಟ್ ಮಾಡಿಸಿ ವ್ಯಾಪಾರಸ್ಥರಿಗೆ ಶೆಡ್ ಹಾಕುವ ಕೆಲಸಕ್ಕೆ ಮುಂದಾಗಿಲ್ಲ. ಕನಿಷ್ಟ ಕುಡಿಯುವ ನೀರಿಲ್ಲ, ಮಳೆ ಬಂದರೆ ಕೆಸರುಗದ್ದೆಯಂತಾಗುವ ಮೈದಾನದಲ್ಲಿಸಂತೆಗೆ ಬರುವ ಅನೇಕರು ಜಾರಿ ಬಿದ್ದ ಘಟನೆಗಳು ನಡೆದಿದೆ. ಇದರ ಮಧ್ಯೆ ಹಂದಿ, ನಾಯಿ ಜಾನುವಾರುಗಳ ಓಡಾಟ ಕಾಟಕ್ಕೆ ವ್ಯಾಪಾರಸ್ಥರು ಹೈರಾಣಾಗಿದ್ದಾರೆ.
ಸಂತೆ ಕರ ವಸೂಲಿ ಹರಾಜಿನ ಮೂಲಕ ಪುರಸಭೆ ವಾರ್ಷಿಕ ಲಕ್ಷಾಂತರ ರೂ.ಆದಾಯ ಬರುತ್ತಿದ್ದು ಸಂತೆ ಮೈದಾನದಲ್ಲಿಸೌಲಭ್ಯ ಕಲ್ಪಿಸುವಲ್ಲಿಆಡಳಿತ ನಿರ್ಲಕ್ಷತಾಳಿದೆ ಪರಿಣಾಮ ರೈತರು, ವ್ಯಾಪಾರಸ್ಥರು, ಗ್ರಾಹಕರು ಕೆಸರಲ್ಲೇ ತರಕಾರಿ ಇತರೆ ವ್ಯಾಪಾರ ವಹಿವಾಟು ಮಾಡುವಂತಾಗಿದೆ. ವಾರದ ಸಂತೆ ನಡೆಯುತ್ತಿದ್ದು ಸುತ್ತಲಿನ ಹಳ್ಳಿಯಿಂದ ರೈತರು, ವರ್ತಕರು ಇಲ್ಲಿಗೆ ತರಕಾರಿ, ಕಾಳುಕಡಿ ವ್ಯಾಪಾರಕ್ಕೆ ಬರುತ್ತಾರೆ ಸಂತೆ ಮೈದಾನದಲ್ಲಿವ್ಯಾಪಾರಸ್ಥರಿಗೆ ಕನಿಷ್ಠ ಕುಡಿಯುವ ನೀರು, ಶೌಚಾಲಯ ಸೌಲಭ್ಯವಿಲ್ಲ, ವ್ಯಾಪಾರಸ್ಥರಿಗೆ ನೆರಳಿನ ಸೌಲಭ್ಯವಂತೂ ಇಲ್ಲವೇ ಇಲ್ಲ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಟ್ಟಣದಲ್ಲಿತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ ಇದಕ್ಕೆ ಸೂಕ್ತ ನಿರ್ವಹಣೆ ಇಲ್ಲದೆ ಹಂದಿ ಹಾಗೂ ಸಂಜೆಯಾದರೆ ಅನೈತಿಕ ಚಟುವಟಿಕೆಗಳ ಹಾಗೂ ಮದ್ಯಪಾನಿಗಳ ತಾಣವಾಗಿ ಪರಿಣಮಿಸುತ್ತದೆ. ಬಸ್ ನಿಲ್ದಾಣದ ಪಕ್ಕದಲ್ಲಿಇರುವ ಪುರಸಭೆ ಜಾಗದಲ್ಲಿಸಿ.ಎಂ.ಎಸ್.ಎಂ.ಟಿ.ಡಿ.ಪಿ ಯೋಜನೆ ಅಡಿಯಲ್ಲಿ2011ರಲ್ಲಿಪುರಸಭೆಯಿಂದ 15 ಲಕ್ಷ ಖರ್ಚು ಮಾಡಿ ತರಕಾರಿ ಮಾರುಕಟ್ಟೆ ನಿರ್ಮಿಸಿದ್ದು ಬಿಟ್ಟರೆ ಮಾರುಕಟ್ಟೆಗೆ ಯಾವುದೇ ಸುರಕ್ಷೆ ಇಲ್ಲ. ಸುತ್ತುಗೋಡೆ ಇಲ್ಲದ ಕಾರಣ ಸಾರ್ವಜನಿಕರು ನಿತ್ಯ ಈ ಸ್ಥಳದಲ್ಲಿಶೌಚಾಲಯವಾಗಿ ಮಾರ್ಪಟ್ಟು ಇಡೀ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ.
ಆದಾಯ ಬೇಕು ಅಭಿವೃದ್ಧಿಬೇಡ
ವಾರದ ಸಂತೆಯಲ್ಲಿಪುರಸಭೆ ಆದಾಯ ಬೇಕು, ಸಂತೆ ಮೈದಾನ ಅಭಿವೃದ್ಧಿ ಬೇಡವಾಗಿದೆ. ಸಂತೆ ಮೈದಾನವನ್ನು ಕಾಂಕ್ರಿಟ್ ಮಾಡಿಸಿ ವ್ಯಾಪಾರಸ್ಥರಿಗೆ ಶೆಡ್ ಹಾಕುವ ಕೆಲಸಕ್ಕೆ ಮುಂದಾಗಿಲ್ಲ. ಕನಿಷ್ಟ ಕುಡಿಯುವ ನೀರಿಲ್ಲ, ಮಳೆ ಬಂದರೆ ಕೆಸರುಗದ್ದೆಯಂತಾಗುವ ಮೈದಾನದಲ್ಲಿಸಂತೆಗೆ ಬರುವ ಅನೇಕರು ಜಾರಿ ಬಿದ್ದ ಘಟನೆಗಳು ನಡೆದಿದೆ. ಇದರ ಮಧ್ಯೆ ಹಂದಿ, ನಾಯಿ ಜಾನುವಾರುಗಳ ಓಡಾಟ ಕಾಟಕ್ಕೆ ವ್ಯಾಪಾರಸ್ಥರು ಹೈರಾಣಾಗಿದ್ದಾರೆ.
ಸಂತೆ ಕರ ವಸೂಲಿ ಹರಾಜಿನ ಮೂಲಕ ಪುರಸಭೆ ವಾರ್ಷಿಕ ಲಕ್ಷಾಂತರ ರೂ.ಆದಾಯ ಬರುತ್ತಿದ್ದು ಸಂತೆ ಮೈದಾನದಲ್ಲಿಸೌಲಭ್ಯ ಕಲ್ಪಿಸುವಲ್ಲಿಆಡಳಿತ ನಿರ್ಲಕ್ಷತಾಳಿದೆ ಪರಿಣಾಮ ರೈತರು, ವ್ಯಾಪಾರಸ್ಥರು, ಗ್ರಾಹಕರು ಕೆಸರಲ್ಲೇ ತರಕಾರಿ ಇತರೆ ವ್ಯಾಪಾರ ವಹಿವಾಟು ಮಾಡುವಂತಾಗಿದೆ. ವಾರದ ಸಂತೆ ನಡೆಯುತ್ತಿದ್ದು ಸುತ್ತಲಿನ ಹಳ್ಳಿಯಿಂದ ರೈತರು, ವರ್ತಕರು ಇಲ್ಲಿಗೆ ತರಕಾರಿ, ಕಾಳುಕಡಿ ವ್ಯಾಪಾರಕ್ಕೆ ಬರುತ್ತಾರೆ ಸಂತೆ ಮೈದಾನದಲ್ಲಿವ್ಯಾಪಾರಸ್ಥರಿಗೆ ಕನಿಷ್ಠ ಕುಡಿಯುವ ನೀರು, ಶೌಚಾಲಯ ಸೌಲಭ್ಯವಿಲ್ಲ, ವ್ಯಾಪಾರಸ್ಥರಿಗೆ ನೆರಳಿನ ಸೌಲಭ್ಯವಂತೂ ಇಲ್ಲವೇ ಇಲ್ಲ.