ಆ್ಯಪ್ನಗರ

ಇನ್ನು ಕಾಪ್ಟರ್‌ ಹಾರಾಟ, ಸ್ಟಾರ್‌ ಹೋರಾಟ

ಬಾಗಲಕೋಟ : ಪ್ರವಾಸಿ ತಾಣ ಬಾದಾಮಿಗೆ ಹೆಲಿ ಟೂರಿಸಂ ಬರಲಿಲ್ಲ, ಆದರೆ ಮೇ 12ರವರೆಗೆ ಸಾಕಷ್ಟು ಹೆಲಿಕಾಪ್ಟರ್‌ಗಳು ಬಾದಾಮಿಯಲ್ಲಿ ಹಾರಾಡಲಿವೆ !.

Vijaya Karnataka Web 26 Apr 2018, 5:00 am
ಬಾಗಲಕೋಟ : ಪ್ರವಾಸಿ ತಾಣ ಬಾದಾಮಿಗೆ ಹೆಲಿ ಟೂರಿಸಂ ಬರಲಿಲ್ಲ, ಆದರೆ ಮೇ 12ರವರೆಗೆ ಸಾಕಷ್ಟು ಹೆಲಿಕಾಪ್ಟರ್‌ಗಳು ಬಾದಾಮಿಯಲ್ಲಿ ಹಾರಾಡಲಿವೆ !.
Vijaya Karnataka Web capture flight star fight
ಇನ್ನು ಕಾಪ್ಟರ್‌ ಹಾರಾಟ, ಸ್ಟಾರ್‌ ಹೋರಾಟ


ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ಶ್ರೀರಾಮುಲು ಎದುರಾಳಿಯಾಗಿರುವ ಕಣದಲ್ಲಿ ಇನ್ನು ಹೆಲಿಕಾಪ್ಟರ್‌ಗಳು ಸದ್ದು ಮಾಡಲಿವೆ. ಇಬ್ಬರೂ ಪ್ರತಿಸ್ಪರ್ಧಿಗಳು ತಮ್ಮ ಪಕ್ಷದ ಸ್ಟಾರ್‌ ಪ್ರಚಾರಕರಾಗಿದ್ದಾರೆ, ಇಷ್ಟೇ ಅಲ್ಲ ಕಾಪ್ಟರ್‌ನಲ್ಲಿ ಸಂಚರಿಸುವ ಅನಿವಾರ್ಯತೆಯೂ ಇಬ್ಬರಿಗಿದೆ.

ಹಾರಾಟವೋ ಹಾರಾಟ

ಸಮಯದ ಕೊರತೆ, ಹೆಚ್ಚಿನ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವ ಅನಿವಾರ್ಯತೆಯಿರುವ ಇಬ್ಬರೂ ಪ್ರಭಾವಿಗಳು ಸಂಚಾರಕ್ಕೆ ಹೆಲಿಕಾಪ್ಟರ್‌ ಬಳಸಲಿದ್ದಾರೆ. ನಾಮಪತ್ರ ಸಲ್ಲಿಕೆ ದಿನ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಾಪ್ಟರ್‌ನಲ್ಲೇ ಬಂದಿಳಿದಿದ್ದರು. ಇನ್ನು ಶ್ರೀರಾಮುಲು ಕೂಡ ಪ್ರತ್ಯೇಕ ಕಾಪ್ಟರ್‌ನಲ್ಲಿ ಆಗಮಿಸಿದರು. ಸಿಎಂ ಸಿದ್ದರಾಮಯ್ಯ ಮಾತ್ರ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ಬಂದು ಕಾರ್‌ನಲ್ಲಿ ಬಾದಾಮಿಗೆ ಬಂದರು. ಎರಡೂ ಪಕ್ಷಗಳ ರಾಷ್ಟ್ರೀಯ, ರಾಜ್ಯ ಮುಖಂಡರು, ತಾರಾ ಪ್ರಚಾರಕರು ಹೆಲಿಕಾಪ್ಟರ್‌ನಲ್ಲೇ ಬಾದಾಮಿಗೆ ಬರಲಿದ್ದಾರೆ. ಹೀಗಾಗಿ ಅಲ್ಲಿನ ಎರಡೂ ಹೆಲಿಪ್ಯಾಡ್‌ಗಳು ಬ್ಯುಸಿಯಾಗಲಿವೆ. ಸದಾ ಕಾಪ್ಟರ್‌ನಲ್ಲೇ ಸಂಚರಿಸುವ ಶ್ರೀರಾಮುಲು ಮೊಳಕಾಲ್ಮೂರು ಹಾಗೂ ಬಾದಾಮಿ ಮಧ್ಯೆ ಸಂಚರಿಸಲು ಕಾಪ್ಟರ್‌ ಬಳಸುವುದು ನಿಶ್ಚಿತವಾಗಿದೆ.

ವೆಚ್ಚಕ್ಕೆ ದಾರಿ

ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವವರು ಹೆಲಿಕಾಪ್ಟರ್‌ನಲ್ಲಿ ಬಂದರೆ ಪ್ರತಿ ಬಾರಿ 20 ಸಾವಿರ ರೂ. ವೆಚ್ಚವನ್ನು ಸೇರಿಸಲಾಗುತ್ತದೆ. ಇದೇ ಉದ್ದೇಶದಿಂದ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಭ್ಯರ್ಥಿಯಾಗಿದ್ದ ಸಿಎಂ ಸಿದ್ದರಾಮಯ್ಯ ಕಾಪ್ಟರ್‌ ಬಳಸಲಿಲ್ಲ. ಬದಲಿಗೆ ಹುಬ್ಬಳ್ಳಿಯಿಂದ ಕಾರ್‌ ಮೂಲಕ ಆಗಮಿಸಿದರು ಎನ್ನಲಾಗಿದೆ. ಇನ್ನು ಶ್ರೀರಾಮುಲು ಅವರು ಕಾಪ್ಟರ್‌ನಲ್ಲಿಯೇ ಆಗಮಿಸಿದರು. ಕಾಪ್ಟರ್‌ ಬಳಕೆಯಲ್ಲಿ ಎರಡು ಬಗೆಯಲ್ಲಿ ವೆಚ್ಚ ನಿರ್ಧರಿಸಲಾಗುತ್ತದೆ. ಪಕ್ಷದ ವತಿಯಿಂದ ಖರ್ಚು ತೋರಿಸಲೂ ಅವಕಾಶವಿರುತ್ತದೆ. ಸ್ಟಾರ್‌ ಪ್ರಚಾರಕರು ಪ್ರಚಾರ ಕೈಗೊಂಡಾಗ ಕಾಪ್ಟರ್‌ ಖರ್ಚು ಪಕ್ಷದ ಲೆಕ್ಕಕ್ಕೆ ಸೇರುತ್ತದೆ. ಆದರೆ ತಾರಾ ಪ್ರಚಾರಕರಾಗಿರುವವರು ತಾವೇ ಅಭ್ಯರ್ಥಿಯಾಗಿರುವ ಕ್ಷೇತ್ರದಲ್ಲಿ ವೆಚ್ಚವನ್ನು ಅವರ ಖಾತೆಗೆ ಸೇರಿಸಲಾಗುತ್ತದೆ. ಇನ್ನು ತಾರಾ ಪ್ರಚಾರಕರು ಒಂದಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಪ್ರಚಾರ ನಡೆಸಿದರೆ ಆ ಎಲ್ಲ ಅಭ್ಯರ್ಥಿಗಳ ವೆಚ್ಚದಲ್ಲಿ ಕಾಪ್ಟರ್‌ ವೆಚ್ಚ ಸೇರಿಸಲಾಗುತ್ತದೆ. ಇದೇ ಕಾರಣದಿಂದ ರಾಜಕಾರಣಿಗಳು ಎಚ್ಚರಿಕೆಯಿಂದ ಕಾಪ್ಟರ್‌ ಬಳಸುತ್ತಿದ್ದಾರೆ. ಇನ್ನು ಬಾದಾಮಿಯಲ್ಲೂ ಕಾಪ್ಟರ್‌ ಹಾರಾಟ ಜೋರಾಗಲಿದೆ. ಬಿಜೆಪಿ ಮುಖಂಡ ಜನಾರ್ದನರೆಡ್ಡಿ ಪ್ರವಾಸೋದ್ಯಮ ಸಚಿವರಿದ್ದಾಗ ಬಾದಾಮಿ ಮೂಲಕ ಹೆಲಿ ಟೂರಿಸಂ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಅದು ಈಡೇರಲಿಲ್ಲ, ಆದರೆ ಈಗ ಪ್ರಚಾರಕ್ಕೆ ರೆಡ್ಡಿ ಕಾಪ್ಟರ್‌ನಲ್ಲೇ ಬಾದಾಮಿಗೆ ಬರಲಿದ್ದಾರೆ !.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ