ಆ್ಯಪ್ನಗರ

ನೆರೆ ಹಾಗೂ‌ ಮಳೆ ಹಾನಿ ಅಧ್ಯಯನಕ್ಕಾಗಿ ಬಾಗಲಕೋಟೆ ಜಿಲ್ಲೆಗೆ ಕೇಂದ್ರ ತಂಡ ಭೇಟಿ

ಬಾಗಲಕೋಟೆ ಜಿಲ್ಲೆಯಲ್ಲಿ ಸಂಭವಿಸಿದ ನೆರೆ ಹಾಗೂ ಮಳೆ ಹಾನಿ ಅಧ್ಯಯನಕ್ಕಾಗಿ ಅಧಿಕಾರಿಗಳ ತಂಡ ಆಗಮಿಸಿ ಜಿಲ್ಲೆಯಲ್ಲಿ ಸಮೀಕ್ಷೆಯನ್ನು ಕೈಗೊಂಡಿದೆ. ಮಳೆಯಿಂದ ಹಾನಿಗೊಳಗಾದ ಪ್ರದೇಶವನ್ನು ಕೇಂದ್ರ ಸರಕಾರದ ಅಧಿಕಾರಿಗಳ ತಂಡ ಮಂಗಳವಾರ ವೀಕ್ಷಣೆ ಮಾಡಿದೆ.

Vijaya Karnataka Web 8 Sep 2020, 2:45 pm
ಬಾಗಲಕೋಟೆ: ಜಿಲ್ಲೆಯಲ್ಲಿ ನೆರೆ ಹಾಗೂ‌ ಮಳೆ ಹಾನಿ ಅಧ್ಯಯನಕ್ಕಾಗಿ ಕೇಂದ್ರ ಸರಕಾರದ ಅಧಿಕಾರಿಗಳ ತಂಡ ಬಾದಾಮಿ ತಾಲೂಕಿನಲ್ಲಿ ಮಂಗಳವಾರ ಪ್ರವಾಸ ಕೈಗೊಂಡಿತು.
Vijaya Karnataka Web ಬಾಗಲಕೋಟೆಯಲ್ಲಿ ನೆರೆ ಅಧ್ಯಯನ


ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದ ಸೇತುವೆ, ಹಳೆಯ ಸೇತುವೆ ಬಳಿ ನೆರೆ, ಮಳೆಯಿಂದಾದ ಹಾನಿಯನ್ನು ಸದಸ್ಯರು ವೀಕ್ಷಿಸಿದರು.
ಪ್ರವಾಹ ಸಂಕಷ್ಟ:ಮಂಗಳವಾರ ಜಿಲ್ಲಾ ಪ್ರವಾಸ ನಡೆಸಲಿರುವ ಕೇಂದ್ರ ಸಮೀಕ್ಷಾ ತಂಡ

2 ಎಕರೆ ಹೆಸರು ಬೆಳೆದು ಹಾನಿಗೀಡಾದ ಗ್ರಾಮದ ಹೊಳೆಬಸಪ್ಪ ಅವರಿಂದ ತಂಡದ ಸದಸ್ಯರು ನೆರೆ ಹಾನಿ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಹೆಬ್ಬಳ್ಳಿಗೆ ಭೇಟಿ‌ ನೀಡಿದ ತಂಡ ಹಾಳಾಗಿರುವ ಗೋವಿನ ಜೋಳ, ಕಬ್ಬು ಬೆಳೆಯನ್ನು ವೀಕ್ಷಣೆ ಮಾಡಿತು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀಕ್ಷಕ ಎಂಜಿನಿಯರ್ ಸದಾನಂದ ಬಾಬು ಹಾಗೂ ಗ್ರಾಮೀಣಾಭಿವೃದ್ದಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಪಿ.ರಾಜವೇದಿ ತಂಡದ ನೇತೃತ್ವ ವಹಿಸಿದ್ದರು.
ಪ್ರವಾಹದಿಂದ 8,071 ಕೋಟಿ ರೂ. ನಷ್ಟ: ಕೇಂದ್ರ ಅಧ್ಯಯನ ತಂಡಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ವರದಿ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಕ್ಯಾ.ಡಾ.ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ್, ಎಸ್ ಪಿ ಲೋಕೇಶ್ ಜಗಲಾಸರ್ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ