ಆ್ಯಪ್ನಗರ

ಟ್ರಾಫಿಕ್ ಪೊಲೀಸರಿಂದ ಸಿಎಂ ಯಡಿಯೂರಪ್ಪಗೆ ಸೀಟ್ ಬೆಲ್ಟ್ ನಿಯಮ ಮಾಫಿ!

ಕಾರಿನಲ್ಲಿಪ್ರಯಾಣಿಸು­ವಾಗ ಸೀಟ್‌ ಬೆಲ್ಟ್‌ ಧರಿಸಬೇಕೆಂಬುದು ನಿಯಮ ಇಲ್ಲದಿದ್ದರೆ ಪೊಲೀಸರು ದಂಡ ವಿಧಿಸುತ್ತಾರೆ ಆದರೆ, ಶುಕ್ರವಾರ ಜಿಲ್ಲಾಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಿ...

Vijaya Karnataka 5 Oct 2019, 8:05 am
ಬಾಗಲಕೋಟೆ: ಕಾರಿನಲ್ಲಿಪ್ರಯಾಣಿಸು­ವಾಗ ಸೀಟ್‌ ಬೆಲ್ಟ್‌ ಧರಿಸಬೇಕೆಂಬುದು ನಿಯಮ. ಇಲ್ಲದಿದ್ದರೆ ಪೊಲೀಸರು ದಂಡ ವಿಧಿಸುತ್ತಾರೆ. ಆದರೆ, ಶುಕ್ರವಾರ ಜಿಲ್ಲಾಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ಸೀಟ್‌ ಬೆಲ್ಟ್‌ ಹಾಕಿರಲಿಲ್ಲ. ಯಾವ ಪೊಲೀಸರೂ ದಂಡ ವಿಧಿಸಲಿಲ್ಲ.
Vijaya Karnataka Web bsy


ಸಿಎಂ ಯಡಿಯೂರಪ್ಪ ಶುಕ್ರವಾರ ಜಿಲ್ಲೆಯಲ್ಲಿಪ್ರವಾಸ ಕೈಗೊಂಡರು. ಮುಧೋಳಕ್ಕೆ ಆಗಮಿಸಿ ನಂತರ ಬಾಗಲಕೋಟೆಗೆ ತೆರಳಿದರು. ಬಾಗಲಕೋಟೆಯಲ್ಲಿಸಭೆ ಮುಗಿಸಿ ಆಲಮಟ್ಟಿಗೆ ತೆರಳಿದರು. ಇಡೀದಿನ ಕಾರಿನಲ್ಲಿ ಸಂಚರಿಸುವಾಗ ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ. 'ಮುಖ್ಯಮಂತ್ರಿಯೇ ನಿಯಮ ಪಾಲಿಸದಿದ್ದರೆ ಜನಸಾಮಾನ್ಯರು ಹೇಗೆ ಪಾಲಿಸುತ್ತಾರೆ ಎಂಬ ಚರ್ಚೆ ನೆರೆದಿದ್ದವರ ನಡುವೆ ನಡೆಯಿತು.

ಬಿಎಸ್‌ವೈಗೆ ಪ್ರತಿಭಟನೆಯ ಸ್ವಾಗತ

ರಾಜ್ಯಕ್ಕೆ ನೆರೆ ಪರಿಹಾರ ನೀಡದ ಕೇಂದ್ರ ಸರಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯದ ನಾಗರಿಕರು ಈಗ ಮುಖ್ಯಮಂತ್ರಿ ವಿರುದ್ಧ ಕೋಪ ತೀರಿಸಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ನೆರೆ ಹಾನಿ ವೀಕ್ಷಣೆಗೆ ಶುಕ್ರವಾರ ಆಗಮಿಸಿದ ಸಿಎಂ ಯಡಿಯೂರಪ್ಪ ಅವರಿಗೆ ಸಂತ್ರಸ್ತರಿಂದ ಪ್ರತಿಭಟನೆಯ ಸ್ವಾಗತ ದೊರೆಯಿತು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿನೆರೆ ಹಾನಿ ವೀಕ್ಷಿಸಿ ಮಹಾಲಿಂಗಪುರ ಮೂಲಕ ಮುಧೋಳಕ್ಕೆ ಬಂದರು. ಅಲ್ಲಿಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ರೈತ ಸಂಘಟನೆಗಳ ನೇತೃತ್ವದಲ್ಲಿನೆರೆ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ವಿತರಣೆಗೆ ಒತ್ತಾಯಿಸಿ ಧರಣಿ ನಡೆದಿತ್ತು. ಬಸವೇಶ್ವರ ಸರ್ಕಲ್‌ ನಲ್ಲಿಧರಣಿ ಸ್ಥಳಕ್ಕೆ ಸಿಎಂ ಕರೆ ತರುವ ಬದಲು ಪ್ರತಿಭಟನಾಕಾರರನ್ನೇ ಜಿಎಲ್‌ಬಿಸಿ ಪ್ರವಾಸಿ ಮಂದಿರಕ್ಕೆ ಆಹ್ವಾನಿಸಲಾಯಿತು. ಸಿಎಂ ಬರುತ್ತಿದ್ದಂತೆ ನೂರಾರು ರೈತರು, ಸಂತ್ರಸ್ತರು ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ