ಆ್ಯಪ್ನಗರ

ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ತೇರದಾಳ: ಜಮಖಂಡಿ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆಯಬೇಕಿದ್ದ ಹಳಿಂಗಳಿ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯ ಬಾಲ್ಯ ವಿವಾಹವನ್ನು ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆ ಹಿಡಿದು ಬಾಲಕಿಯನ್ನು ಬುಧವಾರ ಜಮಖಂಡಿಯ ಸ್ವಾದಾರ ಕೇಂದ್ರಕ್ಕೆ ಒಪ್ಪಿಸುವ ಕೆಲಸ ಮಾಡಿದ್ದಾರೆ.

Vijaya Karnataka 7 Feb 2019, 5:00 am
ತೇರದಾಳ: ಜಮಖಂಡಿ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆಯಬೇಕಿದ್ದ ಹಳಿಂಗಳಿ ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯ ಬಾಲ್ಯ ವಿವಾಹವನ್ನು ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ತಡೆ ಹಿಡಿದು ಬಾಲಕಿಯನ್ನು ಬುಧವಾರ ಜಮಖಂಡಿಯ ಸ್ವಾದಾರ ಕೇಂದ್ರಕ್ಕೆ ಒಪ್ಪಿಸುವ ಕೆಲಸ ಮಾಡಿದ್ದಾರೆ.
Vijaya Karnataka Web child marriage prevention officers
ಬಾಲ್ಯ ವಿವಾಹ ತಡೆದ ಅಧಿಕಾರಿಗಳು


ಘಟನೆ ವಿವರ-ಹಳಿಂಗಳಿ ಗ್ರಾಮದ ಅಂಬೇಡ್ಕರ್‌ ಕಾಲೊನಿಯ 15 ವರ್ಷದ ಬಾಲಕಿಯನ್ನು ಕೊಣ್ಣೂರು ಗ್ರಾಮದಲ್ಲಿ ಮದುವೆಗೆ ಬುಧವಾರ ನಿಶ್ವಿಯಿಸಿದ್ದರು. ಅದರಂತೆ ಬುಧವಾರ ಬಾಲಕಿಯನ್ನು ಕೊಣ್ಣೂರ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು. ಜಿಲ್ಲಾ ಮಕ್ಕಳ ಸಹಾಯವಾಣಿ ಮೂಲಕ ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಧಾರವಾಡದ ಬಿಡಿಎಸ್‌ಎಸ್‌ ಸಂಸ್ಥೆಯವರು ಗ್ರಾಮಕ್ಕೆ ಆಗಮಿಸಿ ಬಾಲಕಿ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಬಾಲಕಿಯ ತಂದೆ ಮಾತ್ರ ಇದ್ದು, ಉಳಿದವರು ಯಾರು ಇರಲಿಲ್ಲ. ನಿಮ್ಮ ಮಗಳು ಎಲ್ಲಿ ಎಂದು ವಿಚಾರಿಸಿದಾಗ ಪಕ್ಕದ ಹಳ್ಳಿಗೆ ಪೂಜಾ ಕಾರ‍್ಯಕ್ರಮಕ್ಕೆ ಹೋಗಿರುವುದಾಗಿ ಬಾಲಕಿ ತಂದೆ ತಿಳಿಸಿದ್ದಾರೆ. ನಾವು ಇಲ್ಲಿಯೇ ಕೂಡುತ್ತೇವೆ. ಕೂಡಲೇ ನಿಮ್ಮ ಮಗಳನ್ನು ಕರೆದುಕೊಂಡು ಬನ್ನಿ ಎಂದು ಹೇಳಿ ಅಧಿಕಾರಿಗಳು ಅವರ ಮನೆ ಮುಂದೆ ಕುಳಿತಿದ್ದಾರೆ. ಬಾಲಕಿಯನ್ನು ಕರೆತರುವುದಾಗಿ ಹೇಳಿ ಹೋದ ತಂದೆ, ಸುಮಾರು ಎರಡು ಗಂಟೆಗಳ ನಂತರ ಬಾಲಕಿಯೊಂದಿಗೆ ಪ್ರತ್ಯಕ್ಷ ನಾಗಿದ್ದಾನೆ. ಕೂಡಲೇ ಅಧಿಕಾರಿಗಳು ಬಾಲಕಿಯನ್ನು ತೇರದಾಳ ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದು ವರದಿ ತೆÜಗೆದುಕೊಂಡು ಜಮಖಂಡಿಯ ಸ್ವಾದಾರ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಧಿಕಾರಿಗಳಾದ ಮಂಜುನಾಥ ಆಲಗೂರ, ಉಮಾ ಹಡಲಗಿ, ಬಿಡಿಎಸ್‌ಎಸ್‌ ಸಂಸ್ಥೆಯ ಮಹಾನಂದಾ ದೊಡಮನಿ, ಎಎಸೈ ಎಲ್‌.ಬಿ. ಮಾಳಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ