ಆ್ಯಪ್ನಗರ

ರೈತರಿಗೆ ಮೆಣಸಿನಕಾಯಿ ಖಾರ...!

ಬಸವರಾಜ ಜುಮನಾಳ ಬೇವೂರ ಸತತ ಬರದಿಂದ ಮೊದಲೇ ತೊಂದರೆ ಅನುಭವಿಸುತ್ತಿರುವ ರೈತ ಸಮುದಾಯ ಪ್ರಸಕ್ತ ವರ್ಷ ಹಿಂಗಾರು ಸಂಪೂರ್ಣ ವಿಫಲವಾಗಿದ್ದರಿಂದ ರೈತರ ಆಶಾದಾಯಕ ವಾಣಿಜ್ಯ ಬೆಳೆ ಮೆಣಸಿನಕಾಯಿ ಬೆಳೆ ಇಳುವರಿ ಸಂಪೂರ್ಣ ಕುಂಠಿತವಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

Vijaya Karnataka 8 Dec 2018, 5:00 am
ಬಸವರಾಜ ಜುಮನಾಳ ಬೇವೂರ
Vijaya Karnataka Web chilli soup for farmers
ರೈತರಿಗೆ ಮೆಣಸಿನಕಾಯಿ ಖಾರ...!


ಸತತ ಬರದಿಂದ ಮೊದಲೇ ತೊಂದರೆ ಅನುಭವಿಸುತ್ತಿರುವ ರೈತ ಸಮುದಾಯ ಪ್ರಸಕ್ತ ವರ್ಷ ಹಿಂಗಾರು ಸಂಪೂರ್ಣ ವಿಫಲವಾಗಿದ್ದರಿಂದ ರೈತರ ಆಶಾದಾಯಕ ವಾಣಿಜ್ಯ ಬೆಳೆ ಮೆಣಸಿನಕಾಯಿ ಬೆಳೆ ಇಳುವರಿ ಸಂಪೂರ್ಣ ಕುಂಠಿತವಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಬಾಗಲಕೋಟ ತಾಲೂಕಿನಾದ್ಯಂತ ಮುಂಗಾರಿನ ಅರ್ಭಟದ ಖುಷಿಯಿಂದ ರೈತರು ಬಿತ್ತಿದ ಬೆಳೆಗಳು ಮಳೆ ಕೈ-ಕೊಟ್ಟಿದ್ದರಿಂದ ಅರ್ಧ-ಮರ್ಧ ಬಂದರೂ ಫಸಲು ಕೈಗೆಟುಕದಂತ ಸ್ಥಿತಿಯಾಗಿದೆ, ಬೇವೂರ, ರಾಂಪೂರ ಸತ್ತಮುತ್ತಲಿನ ಪ್ರದೇಶದಲ್ಲಿ ಕಪ್ಪು ಮಣ್ಣಿನಲ್ಲಿ ರೈತರು ಮೆಣಸಿನಕಾಯಿ ಬೆಳೆಯ ಜತೆಗೆ ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದಾರೆ. ಈ ವರ್ಷ ಮುಂಗಾರಿನ ಮಳೆ ಕೊರತೆಯ ನಡುವೆಯೂ ಬೆಳೆದ ಉಳ್ಳಾಗಡ್ಡಿ 500-1000 ರೂ.ವರೆಗೆ ಮಾರಾಟವಾಗಿ ರೈತರು ಈ ಬೆಳೆಯಲ್ಲಿಯೂ ಹಾನಿ ಅನುಭವಿಸಿದ್ದಾರೆ.

ಹಲ್ಲ ಇದ್ರ ಕಡ್ಲಿಲ್ಲ, ಕಡ್ಲಿದ್ರ ಹಲ್ಲಿಲ್ಲ:

ಇದೀಗ ಮೆಣಸಿನಕಾಯಿಗೆ 10,000-15,000 ರೂ ಮಾರುಕಟ್ಟೆಯಲ್ಲಿ ದರವಿದ್ದರೂ ಮಳೆ ಕೊರತೆಯಿಂದ ಇಳುವರಿ ಬಾರದ್ದರಿಂದ ಹಲ್ಲ ಇದ್ರ ಕಡ್ಲಿಲ್ಲ, ಕಡ್ಲಿದ್ರ ಹಲ್ಲಿಲ್ಲ ಎನ್ನುವಂತಾಗಿದೆ ಹಳ್ಳೂರ, ಭಗವತಿ, ಬಿಲ್‌ಕೆರೂರ, ಸಂಗಾಪೂರ, ಮನ್ನಿಕಟ್ಟಿ, ಕಿರಸೂರ, ಮುಗಳೊಳ್ಳಿ, ಸೇರಿದಂತೆ ಹಲವು ಗ್ರಾಮಗಳ ರೈತರ ಸ್ಥಿತಿ, ಹೋಗಾಗಿ ಬೆಳೆ ಬಂದಾಗ ಬೆಲೆ ಇರುವುದಿಲ್ಲ, ಬೆಲೆ ಇದ್ದಾಗ ಬೆಳೆ ಬರುವದಿಲ್ಲ ಎನ್ನುವಂತಾಗಿದೆ. ರೈತರ ಗೋಳು.

ಇಳುವರಿ ಕುಂಠಿತ:

ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ಬಾಗಲಕೋಟ ತಾಲೂಕಿನಲ್ಲಿ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ಪ್ರಮುಖವಾಗಿ ಕಪ್ಪು ಮಣ್ಣಿನ ಪ್ರದೇಶಗಳಾದ, ಬೆನಕಟ್ಟಿ, ಹಳ್ಳೂರ, ಭಗವತಿ, ಬೇವೂರ, ರಾಂಪೂರ, ತಿಮ್ಮಾಪೂರ, ನಾಯನೇಗಲಿ, ಸುತಗುಂಡಾರ ಮತ್ತಿತರ ಕಡೆಗಳಲ್ಲಿ ಬೆಳೆಯಲಾಗುತ್ತದೆ. ಪ್ರತಿ ಎಕರೆಗೆ ಕನಿಷ್ಠ 4 ರಿಂದ 5 ಕ್ವಿಂಟಲ್‌ ಇಳುವರಿ ಬರುತ್ತಿದ್ದ ಮೆಣಸಿನಕಾಯಿಯ ಬೆಳೆ ಈ ವರ್ಷ ಮಳೆ ಕೊರತೆಯಿಂದ ಕೇವಲ 1 ಕ್ವಿಂಟಲ್‌ ಇಳುವರಿ ಬಂದಿದ್ದು ರೈತ ಸಮುದಾಯ ಕೈ ಕೈ ಹಿಚುಕಿಕೊಳ್ಳುವಂತಾಗಿದೆ.

ಬರುವ ಆದಾಯಕ್ಕಿಂತ ಖರ್ಚೆ ಹೆಚ್ಚಾಗಿದೆ. ಹಿಂಗಾದರೆ ರೈತರು ಹೆಂಗ ಬಾಳೇ ಮಾಡಬೇಕ್ರಿ ಭೂಮಿ ಕೂಟ ಆಡಿದ್ರ ಕೆಡಾಂಗಿಲ್ಲ ಎಂಬ ಹಿರಿಯರ ಮಾತಿನಂತೆ ಈ ವರ್ಷ ಇಲ್ಲಾಂದ್ರ ಮುಂದಿನ ವರ್ಷ ಚುಲೋ ಪೀಕು ಬರತಾವ್‌ .. ಅಂತ್‌ ನಾವೂ ನಾಲೈದು ವರ್ಷದಿಂದ ಕೈಸುಟಗೊಂಡಿವಿ.
ಮುತ್ತುಗೌಡರ, ರೈತ, ರಾಂಪುರ.

ಮಳೆ ಕೊರತೆಯಿಂದ ಮೆಣಸಿನಕಾಯಿ ಬೆಳೆ ಉತ್ಪಾದನೆ ಕುಂಠಿತಗೊಂಡಿರುವುದು ನಿಜ, ರೈತರು ಸಿಕ್ಕಾಪಟ್ಟೆ ಖರ್ಚು ಮಾಡಿ ಉತ್ಪಾದನೆ ಮಾಡಿದರೂ ಬೆಲೆ ಸಿಗುವುದು ದುರ್ಬಲವಾಗಿದೆ, ಸರಕಾರ ರೈತರ ಸಮಸ್ಯೆಗೆ ಸ್ಪಂದಿಸಬೇಕು.
ಎಂ.ಎಸ್‌.ವೈಜಾಪೂರ, ಸದಸ್ಯರು, ಎಪಿಎಂಸಿ, ಬೇವೂರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ