ಆ್ಯಪ್ನಗರ

ಮಂದಿರಗಳ ತೆರವು, ಈದ್ಗಾ ಕಾರ್ಯಾಚರಣೆ ತಡೆ

ಜಮಖಂಡಿ: ನಗರದ ಜಂಬುಕೇಶ್ವರಗಲ್ಲಿಹಾಗೂ ಕುಂಬಾರಗಲ್ಲಿಯಲ್ಲಿನ ಎರಡು ಮಂದಿರಗಳು ಮತ್ತು ಲೋಕೋಪಯೋಗಿ ಇಲಾಖೆಯಿಂದ ಮೂರು ಮಂದಿರಗಳನ್ನು ಗುರುವಾರ ಬೆಳಗಿನ ಜಾವ ತೆರವುಗೊಳಿಸಲಾಯಿತು. ಈ ಸಂದರ್ಭ ಈದ್ಗಾ ತೆರವು ಕಾರ್ಯಾಚರಣೆ ನಡಸುತ್ತಿದ್ದಾಗ ಕೆಲವರು ವಿರೋಧ ವ್ಯಕ್ತಪಡಿಸಿ ತಡೆಯೊಡ್ಡಿದರು.

Vijaya Karnataka 31 Jan 2020, 5:00 am
ಜಮಖಂಡಿ: ನಗರದ ಜಂಬುಕೇಶ್ವರಗಲ್ಲಿಹಾಗೂ ಕುಂಬಾರಗಲ್ಲಿಯಲ್ಲಿನ ಎರಡು ಮಂದಿರಗಳು ಮತ್ತು ಲೋಕೋಪಯೋಗಿ ಇಲಾಖೆಯಿಂದ ಮೂರು ಮಂದಿರಗಳನ್ನು ಗುರುವಾರ ಬೆಳಗಿನ ಜಾವ ತೆರವುಗೊಳಿಸಲಾಯಿತು. ಈ ಸಂದರ್ಭ ಈದ್ಗಾ ತೆರವು ಕಾರ್ಯಾಚರಣೆ ನಡಸುತ್ತಿದ್ದಾಗ ಕೆಲವರು ವಿರೋಧ ವ್ಯಕ್ತಪಡಿಸಿ ತಡೆಯೊಡ್ಡಿದರು.
Vijaya Karnataka Web clearing of temples interrupting logging operations
ಮಂದಿರಗಳ ತೆರವು, ಈದ್ಗಾ ಕಾರ್ಯಾಚರಣೆ ತಡೆ


ಲೋಕೋಪಯೋಗಿ ಇಲಾಖೆಯವರು ರಸ್ತೆಗೆ ಅಡ್ಡಲಾಗಿದೆ ಎಂದು

ಕುಂಚನೂರು ರಸ್ತೆ ಹತ್ತಿರದ ಸದಾನಂದ ಮಂದಿರದ ತಡೆಗೋಡೆ ಮತ್ತು ಬಾವಿ, ಮೈಗೂರು ರಸ್ತೆ ದೇಸಾಯಿ ವೃತ್ತದ ಹತ್ತಿರದ ಮಂದಿರಗಳನ್ನು ತೆರವುಗೊಳಿಸಿದರು. ಲಕ್ಕನ ಕೆರೆ ಹತ್ತಿರದ ಮುಧೋಳ ಹೊರ ರಸ್ತೆಗೆ ಹೊಂದಿಕೊಂಡ ಈದ್ಗಾ ತೆರವು ಕಾರ್ಯಾಚರಣೆಗೆ ಮುಸ್ಲಿಂ ಬಾಂಧವರು ತಡೆಯೊಡ್ಡಿದರು. ಈ ಸ್ಥಳ ಭೂಮಾಪನ ಇಲಾಖೆಯಲ್ಲಿವಕ್ಫ ಮಂಡಳಿ ಹೆಸರಿನಲ್ಲಿನೋಂದಣಿಯಾಗಿದೆ ತೆರವಿಗೆ ವಕ್ಫ ಮಂಡಳಿ ಪರವಾನಿಗೆ ತೆಗೆದುಕೊಳ್ಳಬೇಕೆಂದು ವಾದಿಸಿ ತೆರವು ಕಾರ್ಯಾಚರಣೆ ನಿಲ್ಲಿಸಿದರಲ್ಲದೆ ಮತ್ತೆ ತಡೆಗೋಡೆ ನಿರ್ಮಿಸಲು ಒತ್ತಾಯಿಸಿದರು.

ಈದ್ಗಾ ಪ್ರದೇಶ ರಸ್ತೆಗೆ ಅಡ್ಡಲಾಗಿದ್ದು ಹಿಂದಿನ ಶಾಸಕರು ಈದ್ಗಾಕ್ಕೆ ಪಕ್ಕದಲ್ಲಿಸ್ಥಳಾವಕಾಶ ನೀಡಿ ಮುಂಭಾಗದ ಸ್ಥಳವನ್ನು ರಸ್ತೆಗೆ ನೀಡಬೇಕೆಂದು ಸಮಾಜ ಬಾಂಧವರಿಗೆ ವಿನಂತಿಸಿದ್ದರು. ಅದಕ್ಕೆ ಸಮಾಜದವರು ಒಪ್ಪಿಕೊಂಡಿದ್ದರು. ಆದರೆ ಅಂದು ನೀಡಿದ ಸ್ಥಳ ಇನ್ನೂ ವಕ್ಫ ಮಂಡಳಿ ಹೆಸರಿಗೆ ನೋಂದಣಿಯಾಗಿಲ್ಲಅದು ಎಲ್ಲಿಯವರೆಗೆ ವಕ್ಫ ಹೆಸರಿಗೆ ಆಗುವದಿಲ್ಲವೋ ಅಲ್ಲಿಯವರೆಗೆ ತೆರವು ಮಾಡಲು ಬಿಡುವುದಿಲ್ಲಎಂದು ಪಟ್ಟುಹಿಡಿದರು. ಅಧಿಕಾರಿಗಳು ಅಷ್ಟಕ್ಕೆ ಕಾರ್ಯಾಚರಣೆ ನಿಲ್ಲಿಸಿದರು.

ಕಾರ್ಯಾಚರಣೆಯಲ್ಲಿತಹಸೀಲ್ದಾರ್‌ ಸಂಜಯ ಇಂಗಳೆ, ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ, ಸಿಪಿಐ ಡಿ.ಕೆ.ಪಾಟೀಲ ಪಿಎಸ್‌.ಐ ಗೋವಿಂದಗೌಡ ಪಾಟೀಲ ಅನೀಲ ರಾಠೋಡ, ಲೋಕೋಪಯೋಗಿ ಇಲಾಖೆ ಎಇಇ ಜಯಾನಂದ ಹಿರೇಮಠ, ಹಾಗೂ ಎರಡೂ ಇಲಾಖೆಯ ಸಿಬ್ಬಂದಿಗಳು ಇದ್ದರು.

ನಗರ ಸಭೆಯಿಂದ 2ಮಂದಿರ ತೆರೆವುಳಿಸಿದ್ದೇವೆ. ಅದೇ ರೀತಿ ಲೋಕೋಪಯೋಗಿ ಇಲಾಖೆಯ ಸಹಯೋಗದೊಂದಿಗೆ ರಸ್ತೆಗೆ ಅಡ್ಡಲಾಗಿದ್ದ ಮಂದಿರ ತೆರವುಗೊಳಿಸಿದ್ದೇವೆ
ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ