ಆ್ಯಪ್ನಗರ

ಕಾಂಗ್ರೆಸ್‌ನಿಂದ ಮುಕ್ತಿ ಪಡೆದರೆ ಸಾಕು ಎಂದು ಕುಮಾರಸ್ವಾಮಿ ನನ್ನ ಬಳಿ ಹೇಳಿದ್ದಾರೆ: ಈಶ್ವರಪ್ಪ

ಕಾಂಗ್ರೆಸ್ ದಲಿತರನ್ನು ಬೆದರುಗೊಂಬೆ ತರಹ ಮಾಡಿದೆ. ಕಾಂಗ್ರೆಸ್ ನಲ್ಲಿ ದಲಿತರನ್ನ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಸ್ವತಃ ಪರಮೇಶ್ವರ್‌ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ನನಗೆ ಮೂರು ಬಾರಿ ಸಿಎಂ ಹುದ್ದೆ ತಪ್ಪಿತು ಎಂದು ಹೇಳಿಕೊಂಡಿದ್ದಾರೆ.

Vijaya Karnataka Web 25 Feb 2019, 3:56 pm
ಬಾಗಲಕೋಟ: ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸ್ವತಃ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಯೇ ಸಾಕ್ಷಿಯಾಗಿದೆ. ಅವರು ನನ್ನೊಂದಿಗೆ ಈ ಬಗ್ಗೆ ಮಾತನಾಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.
Vijaya Karnataka Web ಕೆಎಸ್‌ ಈಶ್ವರಪ್ಪ
ಕೆಎಸ್‌ ಈಶ್ವರಪ್ಪ


ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸರಕಾರ ಹೆಚ್ಚು ದಿನ ಬಾಳೋದಿಲ್ಲ ಎಂದರು.

ಕಾಂಗ್ರೆಸ್‌ನಿಂದ ಮುಕ್ತಿ ಪಡೆದರೆ ಸಾಕು ಎಂದು ಕುಮಾರಸ್ವಾಮಿ ನನ್ನ ಬಳಿ ಹೇಳಿಕೊಂಡಿದ್ದಾರೆ. ಇದಕ್ಕೆ ದಾಖಲೆಗಳು ಇರಲ್ಲ. ಕುಮಾರಸ್ವಾಮಿ ನನ್ನೊಂದಿಗೆ ಮಾತನಾಡುವಾಗ ಈ ರೀತಿ ಹೇಳಿದ್ದಾರೆ ಎಂದರು.

ಮುಂದೆ ನಾವು ನೀವು ಸೇರಿ ಸರಕಾರ ರಚಿಸೋಣ. ಕಾಂಗ್ರೆಸ್‌ ಸಹವಾಸ ಸಾಕಾಗಿದೆ ಎನ್ನುವ ಕುರಿತು ಎಚ್‌ಡಿಕೆ ಹೇಳಿದ್ದಾರೆ ಎಂದು ಈಶ್ವರಪ್ಪ ಪುನರಚ್ಚರಿಸಿದರು.

ಕಾಂಗ್ರೆಸ್ ದಲಿತರನ್ನು ಬೆದರುಗೊಂಬೆ ತರಹ ಮಾಡಿದೆ. ಕಾಂಗ್ರೆಸ್ ನಲ್ಲಿ ದಲಿತರನ್ನ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಸ್ವತಃ ಪರಮೇಶ್ವರ್‌ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ನನಗೆ ಮೂರು ಬಾರಿ ಸಿಎಂ ಹುದ್ದೆ ತಪ್ಪಿತು ಎಂದು ಹೇಳಿಕೊಂಡಿದ್ದಾರೆ. ಮೂರು ಬಾರಿ ಸಿಎಂ ಆಗುವ ಅವಕಾಶ ತಪ್ಪಿದ್ದು ಜಾತಿಯಿಂದಲೇ ಎಂದು ಪರಮೇಶ್ವರ್ ಹೇಳಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿ ಅನ್ನೋದನ್ನ ಸ್ವತಃ ಪರಮೇಶ್ವರ ನೇರವಾಗಿ ಒಪ್ಪಿಕೊಂಡಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಹಿಂದುಳಿದವರನ್ನು ಕಾಂಗ್ರೆಸ್‌ ಎಂದಿಗೂ ಬಳಸಿಕೊಳ್ಳುತ್ತಿರುವುದು ವೋಟ್‌ ಬ್ಯಾಂಕ್‌ಗಾಗಿ ಮಾತ್ರ. ಅದೀಗ ಪಾಪ, ಅಲ್ಲಿನ ನಾಯಕರಿಗೂ ಅರಿವಾಗಿದೆ. ಅದಕ್ಕೆ ಈಗ ತಮ್ಮ ಮನದಾಳದ ಮಾತುಗಳನ್ನು ಹೊರಗೆ ಹಾಕುತ್ತಿದ್ದಾರೆಂದು ಈಶ್ವರಪ್ಪ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ