ಆ್ಯಪ್ನಗರ

ಯಡಿಯೂರಪ್ಪ ಹೆಚ್ಚು ದಿನ ಸಿಎಂ ಆಗಿರಲ್ಲ, ಈ ಬಗ್ಗೆ ಚರ್ಚೆ ನಡೀತಿರೋದು ನಿಜ: ಸಿದ್ದರಾಮಯ್ಯ

ಅನುದಾನ ಕಡಿತಗೊಂಡಿರುವ ಬಗ್ಗೆ ಬಿಜೆಪಿ ಶಾಸಕರೇ ದನಿ ಎತ್ತುತ್ತಿದ್ದಾರೆ. ನಾವು ಸತ್ಯ ಹೇಳ್ತಿದ್ವಿ, ಪಾಪ ಅವರಿಗೂ ಬಿಸಿ ಮುಟ್ಟಿದೆ. ಈಗ ಸತ್ಯ ಹೇಳೋಕೆ ಅವರು ಶುರು ಮಾಡಿದ್ದಾರೆ. ಯಡಿಯೂರಪ್ಪ ವಿರುದ್ಧ ಪಕ್ಷದಲ್ಲೇ ದನಿ ಎದ್ದಿರುವುದಂತೂ ಸ್ಪಷ್ಟವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Vijaya Karnataka Web 20 Oct 2020, 12:48 pm
ಬಾಗಲಕೋಟೆ: ಬಿಎಸ್‌ ಯಡಿಯೂರಪ್ಪ ಇನ್ನು ಹೆಚ್ಚು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲ್ಲ. ಆ ಪಕ್ಷದ ನಾಯಕರೇ ಇದನ್ನು ಹೇಳುತ್ತಿದ್ದಾರೆ. ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆಯೇ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲ ಬಹಿರಂಗವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
Vijaya Karnataka Web ಸಿದ್ದರಾಮಯ್ಯ
ಸಿದ್ದರಾಮಯ್ಯ


ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.

ಬಹಳ ದಿನ ಯಡಿಯೂರಪ್ಪ ಸಿಎಂ ಆಗಿರಲ್ಲ ಎಂಬ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ವಿಚಾರವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು.

ಯಡಿಯೂರಪ್ಪನನ್ನ ತೆಗೆಯಬೇಕೆಂದು ಬಹಳ ದೊಡ್ಡ ಚರ್ಚೆ ನಡೆದಿದೆ. ನಾವಂತೂ ಸರಕಾರವನ್ನ ಬೀಳಿಸೋಕೆ ಹೋಗೋಲ್ಲ. ಅವರ ತಿಕ್ಕಾಟದಿಂದ ಸರಕಾರ ಬಿದ್ದು ಹೋದ್ರೆ ನಾವು ಚುನಾವಣೆ ಎದುರಿಸಲು ರೆಡಿ. ಯಡಿಯೂರಪ್ಪನನ್ನ ಕೆಳಗಿಳಿಸೋ ಚರ್ಚೆ ನಡೀತಾ ಇರೋದು ನಿಜ ಎಂದರು.

ಯಾವಾಗ ಇಳಿಸ್ತಾರೆ, ಯಾರು ಸಿಎಂ ಆಗ್ತಾರೆ ಅಂತ ನನಗೆ ಗೊತ್ತಿಲ್ಲ, ಚರ್ಚೆಯಂತೂ ನಡೀತಾ ಇದೆ. ಉತ್ತರ ಕನಾ೯ಟಕದವರೇ ಸಿಎಂ ಆಗ್ತಾರೆ ಎನ್ನುವ ಹೇಳಿಕೆ ಬಗ್ಗೆ ನಾನೇಕೆ ಮಾತನಾಡಲಿ, ಅದು ಅವರ ಪಕ್ಷದ ವಿಚಾರ, ಯಡಿಯೂರಪ್ಪ ಮಾತನಾಡಲಿ ಎಂದು ಸಿದ್ದರಾಮಯ್ಯ ಉತ್ತರಿಸಿದರು.

ಅನುದಾನ ಕಡಿತಗೊಂಡಿರುವ ಬಗ್ಗೆ ಬಿಜೆಪಿ ಶಾಸಕರೇ ದನಿ ಎತ್ತುತ್ತಿದ್ದಾರೆ. ನಾವು ಸತ್ಯ ಹೇಳ್ತಿದ್ವಿ, ಪಾಪ ಅವರಿಗೂ ಬಿಸಿ ಮುಟ್ಟಿದೆ. ಈಗ ಸತ್ಯ ಹೇಳೋಕೆ ಅವರು ಶುರು ಮಾಡಿದ್ದಾರೆ. ಯಡಿಯೂರಪ್ಪ ವಿರುದ್ಧ ಪಕ್ಷದಲ್ಲೇ ದನಿ ಎದ್ದಿರುವುದಂತೂ ಸ್ಪಷ್ಟವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ