ಆ್ಯಪ್ನಗರ

ಅಭಿವೃದ್ಧಿಗೆ ಬ್ಯಾಂಕ್‌ ಸಹಕಾರಿ: ಸಿದ್ದರಾಮಯ್ಯ

ದೇಶದ ಕೃಷಿ ಹಾಗೂ ಗುಡಿಕೈಗಾರಿಕೆಗಳು ನಿಂತಿರುವುದೇ ಈ ಸಹಕಾರಿ ಕ್ಷೇತ್ರದ ಬಲದಿಂದ. ಸಹಕಾರಿ ಕ್ಷೇತ್ರದಲ್ಲಿ ಒಳ್ಳೆಯ ಸೇವೆ ನೀಡಿರುವ ಸಂಘಗಳು ಬೆಳೆಯುತ್ತವೆ. ದೇಶದಲ್ಲಿ ಸುಮಾರು ಶೇ.98ರಷ್ಟು ಸೊಸೈಟಿಗಳು ಲಾಭದಲ್ಲಿವೆ. ಸಹಕಾರಿ ಕ್ಷೇತ್ರಕ್ಕೆ ಸರಕಾರ ಸಾಕಷ್ಟು ಸೌಲಭ್ಯ ನೀಡಿದೆ. ಈಗಲೂ ನೀಡಲಾಗುತ್ತಿದೆ. ಸಹಕಾರಿ ಕ್ಷೇತ್ರ ಒಳ್ಳೆಯ ಕ್ಷೇತ್ರವಾಗಿದೆ. ಸಹಕಾರಿ ಕ್ಷೇತ್ರ ಜನರ ವಿಶ್ವಾಸ ನಂಬಿಕೆ ಗಳಿಸಬೇಕು. ಆಗ ಸಂಘ ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದರು

Vijaya Karnataka 6 Mar 2019, 7:49 am
ಗುಳೇದಗುಡ್ಡ: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಅದೇ ಪ್ರದೇಶದ ಸಹಕಾರಿ ಬ್ಯಾಂಕಗಳು ಪ್ರಮುಖ ಪಾತ್ರವಹಿಸುತ್ತವೆ.ಒಳ್ಳೆಯವರ ಕೈಯಲ್ಲಿ ಬ್ಯಾಂಕ್‌ ಇದ್ದರೆ ಬ್ಯಾಂಕ್‌ ಬೆಳವಣಿಗೆಯೊಂದಿಗೆ ಗ್ರಾಮಸ್ಥರು ಮುಂದೆ ಬರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ,ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಹೇಳಿದರು.
Vijaya Karnataka Web Siddaramaiah


ಅವರು ಸಮೀಪದ ತೊಗುಣಶಿ ಗ್ರಾಮದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ, ದೇಶದ ಕೃಷಿ ಹಾಗೂ ಗುಡಿಕೈಗಾರಿಕೆಗಳು ನಿಂತಿರುವುದೇ ಈ ಸಹಕಾರಿ ಕ್ಷೇತ್ರದ ಬಲದಿಂದ. ಸಹಕಾರಿ ಕ್ಷೇತ್ರದಲ್ಲಿ ಒಳ್ಳೆಯ ಸೇವೆ ನೀಡಿರುವ ಸಂಘಗಳು ಬೆಳೆಯುತ್ತವೆ. ದೇಶದಲ್ಲಿ ಸುಮಾರು ಶೇ.98ರಷ್ಟು ಸೊಸೈಟಿಗಳು ಲಾಭದಲ್ಲಿವೆ. ಸಹಕಾರಿ ಕ್ಷೇತ್ರಕ್ಕೆ ಸರಕಾರ ಸಾಕಷ್ಟು ಸೌಲಭ್ಯ ನೀಡಿದೆ. ಈಗಲೂ ನೀಡಲಾಗುತ್ತಿದೆ. ಸಹಕಾರಿ ಕ್ಷೇತ್ರ ಒಳ್ಳೆಯ ಕ್ಷೇತ್ರವಾಗಿದೆ. ಸಹಕಾರಿ ಕ್ಷೇತ್ರ ಜನರ ವಿಶ್ವಾಸ ನಂಬಿಕೆ ಗಳಿಸಬೇಕು. ಆಗ ಸಂಘ ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.

ಸೊಸೈಟಿಯ ನಾಮಫಲಕವನ್ನು ಸಿದ್ಧರಾಮಯ್ಯನವರು ಅನಾವರಣಗೊಳಿಸಿದರು. ನಂತರ ಮಾಜಿ ಸಿಎಂ ಸಿದ್ಧರಾಮಯ್ಯನವರನ್ನು ಸನ್ಮಾನಿಸಲಾಯಿತು.

ಸಕ್ಕರೆ ಸಚಿವ ಆರ್‌.ಬಿ.ತಿಮ್ಮಾಪೂರ, ಎಚ್‌.ವೈ.ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ಮುತ್ತಪ್ಪ ಕೋಮಾರ, ಶಿವಾನಂದ ಉದುಪುಡಿ, ರವೀಂದ್ರ ಕಲಬುರ್ಗಿ, ಹೊಳಬಸು ಶೆಟ್ಟರ, ಮಹೇಶ ಹೊಸಗೌಡರ, ಮಲ್ಲಣ್ಣ ಯಲಿಗಾರ, ಪಿಕೆಪಿಎಸ್‌ ಅಧ್ಯಕ್ಷ ಎಸ್‌.ಎಂ.ಪಾಟೀಲ, ಯಲ್ಲಪ್ಪ ಬಸರಕೋಡ, ಶಿವಾನಂದ ವಾಲಿಕಾರ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಸೀತಿಮನಿ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ