ಆ್ಯಪ್ನಗರ

ಮಾಜಿ ಸಿಎಂ ಸಿದ್ದುಗೆ ಟ್ವೀಟಾಹ್ವಾನ

ಬಾದಾಮಿ: ಲೋಕಸಭೆ ಚುನಾವಣೆ ನಂತರ ಬಾದಾಮಿ ಕ್ಷೇತ್ರದ ಕಡೆ ಬಾರದ ಮಾಜಿ ಸಿಎಂ ಹಾಗೂ ಶಾಸಕ ಸಿದ್ದರಾಮಯ್ಯ ಅವರಿಗೆ ಇಷ್ಟಲಿಂಗ ನರೇಗಲ್‌ ಟ್ವೀಟ್‌ ಮೂಲಕ ನೆನಪು ಮಾಡಿದ್ದಾರೆ.

Vijaya Karnataka 14 Jun 2019, 5:00 am
ಬಾದಾಮಿ: ಲೋಕಸಭೆ ಚುನಾವಣೆ ನಂತರ ಬಾದಾಮಿ ಕ್ಷೇತ್ರದ ಕಡೆ ಬಾರದ ಮಾಜಿ ಸಿಎಂ ಹಾಗೂ ಶಾಸಕ ಸಿದ್ದರಾಮಯ್ಯ ಅವರಿಗೆ ಇಷ್ಟಲಿಂಗ ನರೇಗಲ್‌ ಟ್ವೀಟ್‌ ಮೂಲಕ ನೆನಪು ಮಾಡಿದ್ದಾರೆ.
Vijaya Karnataka Web come to the field now
ಮಾಜಿ ಸಿಎಂ ಸಿದ್ದುಗೆ ಟ್ವೀಟಾಹ್ವಾನ


ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಹಾಗೂ ಅಧಿಕಾರಿಗಳ ನಿರ್ಲಕ್ಷ ತನ ಕುರಿತು ನಮೂದಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸದ್ದು ಮಾಡಿ ಶಾಸಕ ಮಾಜಿ ಸಿಎಂ, ಸಿದ್ದರಾಮಯ್ಯ ಅವರನ್ನು ಬಾದಾಮಿ ಕ್ಷೇತ್ರಕ್ಕೆ ಆಹ್ವಾನಿಸಿದ್ದಾರೆ.

ರಾಜಕೀಯ ಚಟುವಟಿಕೆಗಳು ಮುಗಿದಿವೆ. ಕ್ಷೇತ್ರದ ಜನರಿಗೆ ಬೇಸಿಗೆ ಮುಗಿದರೂ ಮಳೆರಾಯನ ಅಭಾವದಿಂದ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ನದಿಗೆ ನೀರು ಹರಿಸುವ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ಚಟುವಟಿಕೆಗಳು ತೀವ್ರ ಮಂದಗತಿಯಲ್ಲಿ ಸಾಗುತ್ತಿದೆ. ದನಕರುಗಳಿಗೆ ನೀರಿಲ್ಲ, ಜನತಾ ದರ್ಶನ ಇಲ್ಲ, ಅಧಿಕಾರಿಗಳು ಮಾತು ಕೇಳುತ್ತಿಲ್ಲ ಎಂದು ಟ್ವೀಟರ್‌ ಮೂಲಕ ಸಮಸ್ಯೆಗಳ ಪಟ್ಟಿ ಮಾಡಿದ್ದಾರೆ.

' ಬಾದಾಮಿ ಕ್ಷೇತ್ರಕ್ಕೆ ಬಂದು ಕನಿಷ್ಟ 15 ದಿನವಾದರೂ ಇಲ್ಲಿಯೇ ಉಳಿದು ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ನೀವು 15 ದಿನ ಇಲ್ಲಿ ಇದ್ದರೆ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂಬ ಭಾವನೆ ಹೊಂದಿರುವ ಜನರ ಅಭಿಮಾನಕ್ಕೆ ಗೌರವ ತರುವ ನಿಟ್ಟಿನಲ್ಲಿ ಉಳಿಯಬೇಕಿದೆ. ದಯವಿಟ್ಟು ಬಾದಾಮಿಗೆ ಅತಿಥಿ ಶಾಸಕರಾಗಬೇಡಿ' ಎನ್ನುವುದು ಇಷ್ಟಲಿಂಗ ಅವರ ಮನವಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ