ಆ್ಯಪ್ನಗರ

ಭರವಸೆ ಪತ್ರ: ಚುನಾವಣೆ ಬಹಿಷ್ಕಾರ ವಾಪಸ್‌!

ಕಲಾದಗಿ: ಮುಳುಗಡೆ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಬರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಮಾಡಿದ್ದ ಸಮೀಪದ ಶಾರದಾಳ, ಅಂಕಲಗಿ ಹಾಗೂ ಗೋವಿಂದಕೊಪ್ಪ ಸಂತ್ರಸ್ತರು ತಮ್ಮ ನಿರ್ಧಾರ ಹಿಂತೆಗೆದುಕೊಂಡಿದ್ದಾರೆ.

Vijaya Karnataka 22 Apr 2019, 5:00 am
ಕಲಾದಗಿ: ಮುಳುಗಡೆ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಬರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಮಾಡಿದ್ದ ಸಮೀಪದ ಶಾರದಾಳ, ಅಂಕಲಗಿ ಹಾಗೂ ಗೋವಿಂದಕೊಪ್ಪ ಸಂತ್ರಸ್ತರು ತಮ್ಮ ನಿರ್ಧಾರ ಹಿಂತೆಗೆದುಕೊಂಡಿದ್ದಾರೆ.
Vijaya Karnataka Web confession letter election boycott withdraws
ಭರವಸೆ ಪತ್ರ: ಚುನಾವಣೆ ಬಹಿಷ್ಕಾರ ವಾಪಸ್‌!


ಭಾನುವಾರ ಸಂಜೆ ಇಲ್ಲಿನ ಶ್ರೀ ಸಾಯಿಮಂದಿರದಲ್ಲಿ ನಡೆದ ಮೂರು ಗ್ರಾಮಗಳ ಪ್ರಮುಖರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಭರವಸೆಯ ಪತ್ರ:

ಜಿಲ್ಲಾಧಿಕಾರಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ಮಹಾ ವ್ಯವಸ್ಥಾಪಕರು ಭಾನುವಾರ ಮಧ್ಯಾಹ್ನ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಾಡುವ ಪ್ರಯತ್ನದ ಬಗ್ಗೆ ಭರವಸೆಯ ಪತ್ರಗಳನ್ನು ನೀಡಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸುವುದರೊಂದಿಗೆ ಭರವಸೆಯ ಪತ್ರ ನೀಡಿರುವುದರಿಂದ ಚುನಾವಣೆ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳುವ ಒಮ್ಮತದ ನಿರ್ಣಯವನ್ನು ಕೈಗೊಂಡರು.

ಸಭೆಯಲ್ಲಿ ಲಕ್ಷ ್ಮಣಗೌಡ ಗೌಡರ, ಕೆ.ಎಲ್‌.ಬಿಲಕೇರಿ, ರಮೇಶ ಶಿವನಿಚ್ಚಿ, ಯಲ್ಲಪ್ಪ ನಂದ್ಯಾಳ, ವಿಠಲ ಶಿವನಿಚ್ಚಿ, ನಿಂಗಪ್ಪ ಬೆಳ್ಳಿಕಿಂಡಿ, ಮಾರುತಿ ತೋಟದ, ತಿಪ್ಪಣ್ಣ ಬೀಡಕಿ, ಪರಪ್ಪ ಕಡಮನಿ, ಮಹ್ಮದ್‌ ಸೌದಾಗರ ಮುಂತಾದ ಪ್ರಮುಖರಿದ್ದರು.

ಅಧಿಕಾರಿಗಳ ಪರಿಶ್ರಮ:

ಮತದಾನ ಬಹಿಷ್ಕಾರ ಮಾಡಿದ್ದ ಅಂಕಲಗಿ, ಶಾರದಾಳಗಳಲ್ಲಿ ನಾಲ್ಕೈದು ದಿನಗಳ ಹಿಂದೆ ಹಾಗೂ ಶನಿವಾರ ಸಂಜೆ ಗೋವಿಂದಕೊಪ್ಪದಲ್ಲಿ ಉಪವಿಭಾಗಾಧಿಕಾರಿ, ಜಯಾ, ತಹಸೀಲ್ದಾರ್‌ ಮೋಹನ ನಾಗಠಾಣ ಯಕೆಪಿ ಅಧಿಕಾರಿಗಳೊಂದಿಗೆ ಸಂತ್ರಸ್ತರ ಸಭೆ ನಡೆಸಿ ಮತದಾನ ಮಾಡುವಂತೆ ಮನವೊಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ