ರಾಜ್ಯದಲ್ಲಿನ ಅಶಾಂತಿಗೆ ಕಾಂಗ್ರೆಸ್ ವೈಫಲ್ಯವೇ ಕಾರಣ
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಲು ಕಾಂಗ್ರೆಸ್ ಸರಕಾರದ ವೈಫಲ್ಯವೇ ಕಾರಣ ಎಂದು ಶಾಸಕ ಗೋವಿಂದ ಕಾರಜೋಳ ಆರೋಪಿಸಿದರು.
ಮುಧೋಳ(ಬಾಗಲಕೋಟ): ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗಲು ಕಾಂಗ್ರೆಸ್ ಸರಕಾರದ ವೈಫಲ್ಯವೇ ಕಾರಣ ಎಂದು ಶಾಸಕ ಗೋವಿಂದ ಕಾರಜೋಳ ಆರೋಪಿಸಿದರು.
ನಗರದ ಹೇಮರಡ್ಡಿ ಕಲ್ಯಾಣ ಮಂಟಪದ ಆವರಣದಲ್ಲಿ ಗುರುವಾರ ಹಿಂದು ಜಾಗರಣಾ ವೇದಿಕೆಯು ಗಡಿಪಾರು ಆದೇಶ ಖಂಡಿಸಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸಿ ಶಾಸಕರು ಮಾತನಾಡಿದರು.
2015ರಲ್ಲಿ ನಡೆದ ಗಣೇಶ ಹಬ್ಬದಲ್ಲಿ ಕಲ್ಲು ತೂರಾಟ ಕಾನೂನು ಸುವ್ಯವಸ್ಥೆ ಹಾಳಾಗಲು ಅಂದಿನ ತಾಲೂಕಾಡಳಿತವೇ ಹೊಣೆಯಾಗಿದೆ. ಘಟನೆ ನೆಪ ಇಟ್ಟುಕೊಂಡು 12 ಜನರನ್ನು ಗಡಿಪಾರು ಆದೇಶ ಮಾಡಿದ್ದಾರೆ. ಕಾಣದ ಕೈಗಳ ಕೈವಾಡದಿಂದ ಅಣ್ಣ ತಮ್ಮಂದಿರಂತೆ ಇದ್ದು ಹಿಂದು ಮುಸ್ಲಿಂ ಹಬ್ಬಗಳೂ ಸೌಹಾರ್ದತೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಪರಸ್ಪರ ಪ್ರೀತಿ, ವಿಶ್ವಾಸವನ್ನು ಗಮನಿಸದೇ ಅಧಿಕಾರಿಗಳು ಯುವಕರನ್ನು ಗಡಿಪಾರು ಮಾಡಿದ್ದಾರೆ. ಶಾಂತಿ ಸಭೆ ಹೆಸರಿನಲ್ಲಿ ಢೋಂಗಿ ನಾಟಕ ನಡೆದಿದೆ. ಎಂಲ್ಸಿಯವರು ರಾಜ್ಯದ ಮುಖ್ಯಮಂತ್ರಿಗೆ ಹೇಳಿ ಗಡಿಪಾರು ಆದೇಶ ಹಿಂದೆ ಪಡೆಯಬೇಕಾಗಿತ್ತು ಎಂದು ಪರೋಕ್ಷ ವಾಗಿ ದೂರಿದ್ದಾರೆ.
ಸಿಪಿಐ, ತಹಸೀಲ್ದಾರ್, ಡಿವೈಎಸ್ಪಿ, ಎಸ್ಪಿ ಹಾಗೂ ಐಜಿಪಿವರಿಗೆ ಮನವಿ ಮಾಡಿಕೊಂಡಿದ್ದರೂ ಮಾತು ಕೇಳದೇ ಗಡಿಪಾರು ಆದೇಶ ಮಾಡಿದರು. ಮೂರು ತಿಂಗಳದಲ್ಲಿ ಸರಕಾರ ಪತನಗೊಳ್ಳಲಿದೆ. ನಮ್ಮ ಅವಧಿಯಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಆಡಳಿತ ನಡೆಸಿದ್ದೇವೆ ಎಂದ ಕಾರಜೋಳ ತಿಳಿಸಿದ್ದಾರೆ.
ಹಿಂದು ಜಾಗರಣಾ ವೇದಿಕೆ ಪ್ರಮುಖ ಜಗದೀಶ ಕಾರಂತಜೀ ಮಾತನಾಡಿ, 34 ವರ್ಷಗಳಿಂದಲೂ ಹಿಂದುತ್ವ, ಸಂಘಟನೆ, ಸುರಕ್ಷ ತೆ, ಜಾಗೃತಿ ಮೂಡಿಸುತ್ತಾ ಬರಲಾಗುತ್ತಿದೆ. ವೇದಿಕೆ ಪಕ್ಷಾತೀತ, ಜಾತ್ಯತೀತವಾಗಿ ನಡೆದುಕೊಂಡು ದೇಶ ಸಂರಕ್ಷ ಣೆಯಲ್ಲಿ ತೊಡಗಿಸಿಕೊಂಡು ಬಂದಿರುವುದು ಎಲ್ಲರಿಗೂ ಗೊತ್ತಿದೆ. ಹಿಂದು ಧರ್ಮ ಉಳಿವಿಗೆ, ಸಂಸ್ಕೃತಿಗೆ, ದೇಶದ ಏಳ್ಗೆಗೆ ಜಾಗರಣಾ ವೇದಿಕೆ ಬೆಳೆದುಬಂದಿದೆ. ಧರ್ಮ, ರಾಷ್ಟ್ರ ರಕ್ಷ ಣೆಗಾಗಿ ನಾವೆಲ್ಲರೂ ಸಂಘಟಿತರಾಗಬೇಕು. ಕೋರ್ಟ್, ಕಚೇರಿಗಳು ಅಲೆದಾಡುವುದು ಸಾಮಾನ್ಯ ಕೆಲಸವಲ್ಲ. 2015ರಲ್ಲಿ ನಡೆದ ಘಟನೆಗೆ ಮೂಲ ಪೊಲೀಸ್ ಅಧಿಕಾರಿಗಳ ವೈಫಲ್ಯವೇ ಕಾರಣವಾಗಿದೆ. ಅಧಿಕಾರಿಗಳ ಮೋಜು, ಮಸ್ತ್ತಿ, ಲಂಚದ ಹೆಸರಿನಲ್ಲಿ ಆಡಳಿತದಿಂದ ಅಂತಹ ಅನಾಹುತಗಳಾಗಿವೆ. ಇಂದಿನ ಪೊಲೀಸ್ ಅಧಿಕಾರಿಗಳ ನೀತಿಯಿಂದ ಗಡಿಪಾರು ಆದೇಶ ಜೀವಂತಕ್ಕೆ ಬಂದಿದೆ ಎಂದು ಆರೋಪಿಸಿದ ಅವರು, ಐಜಿಪಿಯಿಂದ ಸಿಪಿಐವರಿಗೆ ಅಧಿಕಾರಿಗಳ ವಿರುದ್ಧ ದೂರಿದ್ದರು. ಯಾವುದೇ ರಾಜಕೀಯ ಶಕ್ತಿಗಾಗಿ ಹೋರಾಟವಲ್ಲ. ಹಿಂದುತ್ವಕ್ಕಾಗಿ ದೇಶದ ಸಾಮ್ರಾಜ್ಯಕ್ಕಾಗಿ, ಮತಾಂತರ, ಜಿಹಾದ್, ಲವ ಜಿಹಾದ್ ವಿರುದ್ಧ ಹೋರಾಟ ಎಂದರು.
ಹಿಂದು ಜಾಗರಣಾ ವೇದಿಕೆಯ ವಿಭಾಗೀಯ ಸಂಚಾಲಕ ಶ್ರೀಶೈಲಗೌಡ ಪಾಟೀಲ ಮಾತನಾಡಿ, ಹಿಂದೂ ಸಮಾಜ, ಚಳವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ ಮುಖಂಡ ಶಿವಾನಂದ ಬಡಿಗೇರ ಸಹಿತ 9 ಜನರನ್ನು ಗಡಿಪಾರು ಮಾಡಿದ್ದಾರೆ. 2015ರಲ್ಲಿ ಗಣೇಶ ವಿಸರ್ಜನೆ ವೇಳೆಯಲ್ಲಿ ನಡೆದ ಘಟನೆಗೆ ಪೊಲೀಸ್ ವೈಫಲ್ಯವೇ ಕಾರಣ ಎಂದು ದೂರಿದರು.
ಸಂಸದ ಅನಂತಕುಮಾರ ಹೆಗಡೆ ಮಾತನಾಡಿ, ರಾಜ್ಯದಲ್ಲಿರುವುದು ಬ್ರಿಟಿಷರಿಗಿಂತ ಗತಿಗೆಟ್ಟ ಸರಕಾರವಾಗಿದೆ. ಹಿಂದೆ ಬ್ರಿಟಿಷರು ಉತ್ಸವ, ಹಬ್ಬಗಳನ್ನು ಮಾಡಲು ಅವಕಾಶ ನೀಡುತ್ತಿದ್ದರು. ಆದರೆ ಇಂದಿನ ಸಿದ್ದರಾಮಯ್ಯ ಸರಕಾರ ಅವುಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದ ಅವರು, ಮುಸ್ಲಿಮರ ಮತಕ್ಕಾಗಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಕಲಾದಗಿಯ ಶ್ರೀ ಮಾತನಾಡಿ, ಭಾರತ ಸಂಸ್ಕೃತಿ, ಪರಂಪರೆಗೆ ಖ್ಯಾತಿ ಪಡೆದಿದೆ. ಹಿಂದುಗಳ ಮೇಲೆ ಆಗುತ್ತಿರುವ ಅಕ್ರಮ ನೀತಿಗೆ ನಾವು ಹಿಂದೆ ಸರಿಯಬಾರದು. ಧರ್ಮಕ್ಕೆ ಜಯ ಸಿಗುತ್ತದೆ ಎಂದರು.
ಬೆಳಗಲಿಯ ಸಿದ್ದರಾಮ ಶ್ರೀ ಸಾನ್ನಿಧ್ಯ ವಹಿಸಿದ್ದರು. ಕಿರಣ ಪವಾಡಶೆಟ್ಟರ್, ಸಂಗಪ್ಪ ಕುಪ್ಪಸದ, ಅಯ್ಯನಗೌಡರ, ವಿಶ್ವನಾಥ ಕುಂಟೋಜಿ ಇದ್ದರು.
ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ್ದರಿಂದ ಹಿಂಜಾವೇ ಪ್ರಮುಖ ಶಿವಾನಂದ ಬಡಿಗೇರ ವೇದಿಕೆ ಮೇಲೆ ಆಗಮಿಸಿ ಮಾತನಾಡಿದರು.
ವೇದಿಕೆ ಮುಂಬಾಗದಲ್ಲಿ ಮಾಜಿ ಸಚಿವ ಮುರಗೇಶ ನಿರಾಣಿ, ಸಂಸದರಾದ ಪಿ.ಸಿ.ಗದ್ದಿಗೌಡರ, ಪ್ರತಾಪಸಿಂಹ, ಅನಂತಕುಮಾರ ಹೆಗಡೆ, ಬಿಜೆಪಿ ರಾಜ್ಯ ವಕ್ತಾರ ಸಿ.ಟಿ.ರವಿ, ದೊಡ್ಡನಗೌಡ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದು ಸವದಿ, ಶ್ರೀಕಾಂತ ಕುಲಕರ್ಣಿ, ನಾರಾಯಣಸಾ ಭಾಂಡಗೆ, ರಾಮಣ್ಣ ತಳೇವಾಡ, ಬಿ.ಎಚ್.ಪಂಚಗಾಂವಿ, ಕೆ.ಆರ್.ಮಾಚಪ್ಪನ್ನವರ, ಸಿದ್ದು ಚಿಕದಾನಿ, ಪ್ರದೀಪ ನಿಂಬಾಳಕರ, ತುಷಾರ ಬೋಪಳೆ, ಸತ್ಯೆಪ್ಪ ಮೆಟಗುಡ್ಡ, ವೆಂಕಣ್ಣ ಕಳ್ಳಿಗುದ್ದಿ, ಯಮನಪ್ಪ ಹೊರಟ್ಟಿ, ಪ್ರಕಾಶ ಚಿತ್ತರಗಿ, ಬಂಡು ಘಾಟಗೇ, ಸಂಗಣ್ಣ ಕಾತರಕಿ, ಮೋಹನ ಜಾಧವ, ಲೋಕಣ್ಣ ಕತ್ತಿ, ಲಕ್ಷ ್ಮಣ ಚಿನ್ನಣ್ಣವರ, ಉಮೇಶ ಕಾರಜೋಳ ಇದ್ದರು.