ಆ್ಯಪ್ನಗರ

ಭೂಗತನಾಗಿದ್ದ ವಿವಾದಾತ್ಮಕ ಪಾರಂಪರಿಕ ವೈದ್ಯ ಅಸ್ಲಂ ಬಾಬಾ ಮತ್ತೆ ಪ್ರತ್ಯಕ್ಷ!

14 ವರ್ಷಗಳ ಹಿಂದೆ ವಿಚಿತ್ರ ವೈದ್ಯಕೀಯ ಚಿಕಿತ್ಸೆಯಿಂದಾಗಿ ಅಸ್ಲಂ ಅಪಾರ ಜನಪ್ರಿಯತೆ ಗಳಿಸಿದ್ದ ಅಸ್ಲಂ ಬಾಬಾ ಎಲ್ಲ ಬಗೆಯ ರೋಗಗಳಿಗೂ ಚಿಕಿತ್ಸೆ ನೀಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ. ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈತನ 35 ಎಕರೆ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.

Vijaya Karnataka Web 10 Feb 2020, 7:36 pm
ಬಾಗಲಕೋಟೆ: ಹಲವು ವರ್ಷಗಳಿಂದ ಅಜ್ಞಾತವಾಗಿದ್ದ ವಿವಾದಾತ್ಮಕ ಪಾರಂಪರಿಕ ವೈದ್ಯ ಅಸ್ಲಂ ಬಾಬಾ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ!
Vijaya Karnataka Web ಅಸ್ಲಂ ಬಾಬಾ
ಅಸ್ಲಂ ಬಾಬಾ


ನಗರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಿಎಎ ವಿರೋಧಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಅಸ್ಲಂ ಬಾಬಾ ಪಾಲ್ಗೊಂಡಿದ್ದ.

ವೇದಿಕೆಯ ಎದುರು ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಅಸ್ಲಂ, ಸಾರ್ವಜನಿಕರು ಹಾಗೂ ಪೊಲೀಸರ ಕುತೂಹಲಕ್ಕೆ ಕಾರಣನಾದ. 14 ವರ್ಷಗಳ ಹಿಂದೆ ವಿಚಿತ್ರ ವೈದ್ಯಕೀಯ ಚಿಕಿತ್ಸೆಯಿಂದಾಗಿ ಅಸ್ಲಂ ಅಪಾರ ಜನಪ್ರಿಯತೆ ಗಳಿಸಿದ್ದ ಅಸ್ಲಂ ಬಾಬಾ ಎಲ್ಲ ಬಗೆಯ ರೋಗಗಳಿಗೂ ಚಿಕಿತ್ಸೆ ನೀಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ.

ಈತ ರೋಗಿಗಳನ್ನು ಕುರ್ಚಿಯಿಂದ ಬಡಿದು ಗುಣಪಡಿಸುವುದಾಗಿ ಹೇಳಿಕೊಳ್ಳುತ್ತಿದ್ದ. ಬರಿಗೈಯಿಂದ ಹೊಟ್ಟೆಯಲ್ಲಿನ ಹರಳುಗಳನ್ನು ಹೊರ ತೆಗೆಯುವುದು, ಶಸ್ತ್ರಚಿಕಿತ್ಸೆ ಮಾಡದೇ ರೋಗ ಗುಣಪಡಿಸುವುದು ಚಿಕಿತ್ಸಾ ವಿಧಾನವಾಗಿತ್ತು.

ಈತ ನೀಡುತ್ತಿದ್ದ ಚಿಕಿತ್ಸೆಯ ವಿಡಿಯೋಗಳು ಪ್ರಸಾರವಾಗುತ್ತಿದ್ದಂತೆ ನಾನಾ ಸಂಘಟನೆಗಳು, ಸಾರ್ವಜನಿಕರಿಂದ ತೀವ್ರ ಪ್ರತಿರೋಧ ಎದುರಾಯಿತು. ಕೆಲವು ಸಂಘಟನೆಗಳು ಚಿಕಿತ್ಸೆ ಪ್ರದರ್ಶಿಸಿ ಸಾಬೀತುಪಡಿಸುವಂತೆ ಸವಾಲು ಹಾಕಿದ್ದವು.

ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈತನ 35 ಎಕರೆ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು. ಈತನ ವೈದ್ಯ ವೃತ್ತಿಗೆ ನಿರ್ಬಂಧ ಹೇರಿ ಆದೇಶ ಹೊರಡಿಸಿತು. ಕೆಲವು ವರ್ಷಗಳ ನಂತರ ಸೊಲ್ಲಾಪುರದ್ಲಲಿ ಅಸ್ಲಂ ಬಾಬಾ ಚಿಕಿತ್ಸೆ ನೀಡಿದ ಪ್ರಕರಣ ನಡೆದಿತ್ತು.

ನಂತರ ಅಜ್ಞಾತವಾಗಿದ್ದ ಅಸ್ಲಂ ಬಾಬಾ ಸೋಮವಾರ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾನೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ಲಂ 'ಸಿಎಎ ಮೂಲಕ ಬೇರೆ ದೇಶಗಳ ಹಿಂದುಗಳನ್ನು ಇಲ್ಲಿ ಕರೆ ತರಲಾಗುತ್ತಿದೆ. ವೈರಿ ದೇಶದ ಉಗ್ರರು ವಲಸಿಗರ ವೇಷದಲ್ಲಿ ಬಂದು ಇಲ್ಲಿ ಬಾಂಬ್ ಇಟ್ಟರೆ ದೇಶದಲ್ಲಿ ಸೌಹಾರ್ದ ಕೆಡುತ್ತದೆ. ಇಲ್ಲಿನ ಹಿಂದುಗಳಿಗೆ ಉದ್ಯೋಗ ಸೇರಿದಂತೆ ಅವಶ್ಯಕ ಸೌಲಭ್ಯ ಒದಗಿಸಬೇಕು. ಯಾವ ದೇಶದಲ್ಲಾದರೂ ಅಲ್ಪಸಂಖ್ಯಾತರಿಗೂ ಸೌಲಭ್ಯ ನೀಡಬೇಕು. ಇದೇ ಕಾರಣಕ್ಕೆ ಸಿಎಎ ಕಾಯ್ದೆ ಜಾರಿಗೊಳಿಸುವುದು ಬೇಡ. ನಾವು ಮುಸ್ಲಿಮರು ಎಲ್ಲ ಧರ್ಮದವರೊಡನೆ ಭಾವೈಕ್ಯದಿಂದ ಬಾಳುತ್ತಿದ್ದೇವೆ. ನಾವು ದೇಶವನ್ನು ರಕ್ಷಿಸು ಬಯಸುತ್ತೇವೆ' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ