ಆ್ಯಪ್ನಗರ

ನಾಳೆಯಿಂದ ಸಹಕಾರಿ ಸಪ್ತಾಹ

ಬಾಗಲಕೋಟ: 'ರಾಜ್ಯ ಸಹಕಾರ ಮಹಾ ಮಂಡಳದ ನೇತೃತ್ವದಲ್ಲಿ ಜಿಲ್ಲಾ ಸಹಕಾರ ಯೂನಿಯನ್‌ನಿಂದ ನ.15 ರಿಂದ 21ರವರೆಗೆ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಿಸಲಾಗುತ್ತದೆ' ಎಂದು ಯೂನಿಯನ್‌ ಅಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.

Vijaya Karnataka 14 Nov 2018, 5:00 am
ಬಾಗಲಕೋಟ: 'ರಾಜ್ಯ ಸಹಕಾರ ಮಹಾ ಮಂಡಳದ ನೇತೃತ್ವದಲ್ಲಿ ಜಿಲ್ಲಾ ಸಹಕಾರ ಯೂನಿಯನ್‌ನಿಂದ ನ.15 ರಿಂದ 21ರವರೆಗೆ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಆಚರಿಸಲಾಗುತ್ತದೆ' ಎಂದು ಯೂನಿಯನ್‌ ಅಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.
Vijaya Karnataka Web cooperative week by tomorrow
ನಾಳೆಯಿಂದ ಸಹಕಾರಿ ಸಪ್ತಾಹ


ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಗದಗ ಜಿಲ್ಲೆಯ ಕಣಗಿನಹಾಳದಲ್ಲಿ 1905ರಲ್ಲಿ ಮೊದಲ ಸಹಕಾರ ಸಂಘ ಆರಂಭಗೊಂಡ ಸವಿನೆನಪಿಗಾಗಿ ಸಪ್ತಾಹ ಹಮ್ಮಿಕೊಳ್ಳಲಾಗುತ್ತದೆ. ಮಾಜಿ ಪ್ರಧಾನಿ ನೆಹರೂ ಅವರ ಚಿಂತನೆ ಫಲವಾಗಿ ಸಪ್ತಾಹ ರೂಪುಗೊಂಡಿತು. ಈ ಹಿನ್ನೆಲೆಯಲ್ಲಿ ನ.14ರಂದು ನೆಹರೂ ಅವರ ಜಯಂತಿಯಂದು ಸಪ್ತಾಹ ಆರಂಭಗೊಳ್ಳುತ್ತದೆ. ಕೇಂದ್ರ ಸಚಿವ ಅನಂತಕುಮಾರ್‌ ಅವರ ನಿಧನದ ಹಿನ್ನೆಲೆಯಲ್ಲಿ ಮೂರು ದಿನ ಶೋಕಾಚರಣೆ ಇರುವುದರಿಂದ ನ.15ರಿಂದ ಸಪ್ತಾಹಕ್ಕೆ ಚಾಲನೆ ದೊರೆಯಲಿದೆ'ಎಂದು ತಿಳಿಸಿದರು.

'ಸಪ್ತಾಹದ ನಿಮಿತ್ತ ನಿತ್ಯ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ನ.15ರಂದು ಬಾದಾಮಿ, 16ರಂದು ಹುನಗುಂದ ತಾಲೂಕಿನ ಮೂಗನೂರ, 17ರಂದು ಬೀಳಗಿ ತಾಲೂಕಿನ ಕೊರ್ತಿ, 18ರಂದು ಜಮಖಂಡಿ, 19ರಂದು ಮುಧೋಳ, 20ರಂದು ಜಮಖಂಡಿ ತಾಲೂಕಿನ ಆಲಗೂರ, 21ರಂದು ಬಾಗಲಕೋಟದ ಡಿಸಿಸಿ ಬ್ಯಾಂಕ್‌ ಸಭಾ ಭವನದಲ್ಲಿ ಕಾರ್ಯಕ್ರಮ ನಡೆಯಲಿವೆ. ಈ ವರ್ಷ ಸಹಕಾರಿ ಮಾರಾಟ, ರೂಪಾಂತರ ದಿನ, ಸಾವಯವ ಕೃಷಿ ಹಾಗೂ ಶೂನ್ಯ ಬಂಡವಾಳದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ, ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಹಾಗೂ ಬ್ರ್ಯಾಂಡ್‌ ನಿರ್ಮಾಣ, ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ, ಸಹಕಾರ ಸಂಸ್ಥೆಗಳ ಮೂಲಕ ಆದಾಯೋತ್ಪನ್ನ ಕುರಿತು ಜಾಗೃತಿ, ಯುವಜನ ಮತ್ತು ಮಹಿಳಾ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳ ದಿನ, ಸಹಕಾರ ಸಂಘಗಳ ಮೂಲಕ ಕೌಶಲ್ಯ ವರ್ಧಿಸುವ ದಿನ ಆಚರಿಸಲಾಗುತ್ತದೆ' ಎಂದರು.

'ನ.16ರಂದು ಮೂಗನೂರನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಬಾಗಲಕೋಟದ ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಲಿದ್ದಾರೆ. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ನಾನು ಧ್ವಜಾರೋಹಣ ನೆರವೇರಿಸುವನು. ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಶಾಸಕರಾದ ಎಚ್‌.ವೈ.ಮೇಟಿ, ವಿಜಯಾನಂದ ಕಾಶಪ್ಪನವರ, ಕೆಎಂಎಫ್‌ ಅವಳಿ ಜಿಲ್ಲಾಧ್ಯಕ್ಷ ಸಂಗಣ್ಣ ಹಂಡಿ ಹಾಗೂ ಗಣ್ಯರು ಭಾಗವಹಿಸಲಿದ್ದಾರೆ' ಎಂದು ವಿವರಿಸಿದರು.

ಯನಿಯನ್‌ ನಿರ್ದೇಶಕರಾದ ಸಿದ್ದು ಗಿರಗಾವಿ, ಸಿದ್ದಲಿಂಗೇಶ ಹಳದೂರ, ನಿಂಗಣ್ಣ ಗೋಡಿ, ಸಂಗಣ್ಣ ಹಟ್ಟಿ, ಮಲ್ಲಣ್ಣ ಕುರಿ, ಸಹಕಾರ ಸಂಘಗಳ ಉಪನಿಬಂಧಕ ಕೆ.ಎಸ್‌.ಕಳಸಣ್ಣವರ, ಸಹಾಯಕ ನಿರ್ದೇಶಕ ಎಸ್‌.ಎಂ.ಹೊದ್ಲೂರ, ಯೂನಿಯನ್‌ ಸಿಇಒ ಜಯಶ್ರೀ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ