ಕೂಡಲಸಂಗಮ: ಕೊರೊನಾ ಹಿನ್ನೆಲೆಯಲ್ಲಿ ಎಪ್ರಿಲ್ 12 ರಂದು ನಡೆಯಬೇಕಿದ್ದ ಕೂಡಲಸಂಗಮದ ಸಂಗಮೇಶ್ವರ ಜಾತ್ರೆ ಹಾಗೂ ಎಪ್ರಿಲ್ 8 ರಂದು ನಡೆಯಬೇಕಿದ್ದ ಬೀಳಗಿ ತಾಲೂಕಿನ ಚಿಕ್ಕಸಂಗಮದ ಸಂಗಮೇಶ್ವರ ಜಾತ್ರೆಯನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ರದ್ದು ಪಡಿಸಿದೆ.
ಸಂಗಮೇಶ್ವರ ಜಾತ್ರೆಯ ನಿಮಿತ್ಯ ಎಪ್ರಿಲ್ 4 ರಿಂದ ನಡೆಯಬೇಕಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಎಪ್ರಿಲ್ 10 ರಿಂದ ನಡೆಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಂಡಿವೆ.
ಪ್ರತಿ ವರ್ಷ ಸಂಗಮೇಶ್ವರ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಿದ್ದರು, ಜಾತ್ರೆಯ ಮುನ್ನಾ ದಿನ ಬಾಗಲಕೋಟೆ ಯಿಂದ ಕಾಲ್ನಡಿಗೆಯ ಮೂಲಕ ಕೂಡಲಸಂಗಮಕ್ಕೆ ಸಂಗಮೇಶ್ವರ ಬಂಗಾರದ ಕಳಸವನ್ನು ಮೇರವಣಿಗೆಯ ಮೂಲಕ ತರುತ್ತಿದ್ದರು. ಈ ಪಾದಯಾತ್ರೆಯಲ್ಲಿ20 ರಿಂದ 30 ಸಾವಿರ ಭಕ್ತರ ಪಾಲ್ಗೊಳ್ಳುತ್ತಿದ್ದರು. ಸಂಗಮೇಶ್ವರ ರಥೋತ್ಸವಕ್ಕೆ ಬೆಳಗಲ್ಲಿನಿಂದ ಹಗ್ಗ, ಇದ್ದಲಗಿಯ ಹಿಲಾಲ, ಗಂಜಿಹಾಳದ ತರಗು ಬಾಳಿ ಕಂಬ, ನಂದಿಕೊಲು, ಗುಳೆದಗುಡ್ಡದಿಂದ ಉತ್ಸವದ ಕಳಸ ಹಾಗೂ ಪಲ್ಲಕ್ಕಿ ಬರುತ್ತಿತ್ತು. ಪ್ರಸ್ತಕ ವರ್ಷ ಈ ಎಲ್ಲಕಾರ್ಯಗಳನ್ನು ರದ್ದುಪಡಿಸಲಾಗಿದೆ.
ಐತಿಹಾಸಿ, ಚಾರಿತ್ರಿಕ ಹಿನ್ನೆಲೆ ಹೊಂದಿದ ಸಂಗಮೇಶ್ವರ ಜಾತ್ರೆ ಶತಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಈ ಜಾತ್ರೆ ರದ್ದಾಗಿರುವುದು ಇದೇ ಮೊದಲು.
ಎಲ್ಲೆಡೆ ಬಂದ್
ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಭಕ್ತರ, ಪ್ರವಾಸಿಗರ ಸುರಕ್ಷತಾ ದೃಷ್ಠಿಯಿಂದ ಮಂಡಳಿಯು ತನ್ನ ವ್ಯಾಪ್ತಿಯ ಕೂಡಲಸಂಗಮದ ಸಂಗಮೇಶ್ವರ ದೇವಾಲಯ, ದಾಸೋಹ ಭವನ, ವಿಜಯಪುರ ಜಿಲ್ಲೆಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನ, ದಾಸೋಹ ಭವನ, ಬಸವ ಸ್ಮಾರಕ, ಯಾತ್ರಿ ನಿವಾಸ, ಸಾರ್ವಜನಿಕ ಗ್ರಂಥಾಲಯ ಹಾಗೂ ಇಂಗಳೇಶ್ವರದ ಸ್ಮಾರಕ, ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿಯ ನೀಲಾಂಬಿಕಾ ಐಕ್ಯ ಮಂಟಪ, ಬೀಳಗಿ ತಾಲೂಕಿನ ಚಿಕ್ಕ ಸಂಗಮದ ಸಂಗಮೇಶ್ವರ ದೇವಾಲಯ ಹಾಗೂ ಬೆಳಗಾವಿ ಜಿಲ್ಲೆಕಿತ್ತೂರ ತಾಲೂಕಿನ ಎಂ.ಕಿ.ಹುಬ್ಬಳ್ಳಿಯ ಗಂಗಾಂಬಿಕಾ ಐಕ್ಯ ಮಂಟಪದ ಪ್ರವೇಶವನ್ನು ಮಾರ್ಚ 17 ರಿಂದಲೇ ಸ್ಥಗಿತಗೊಳಿಸಿದೆ.
ಮಾರ್ಚ 17 ರಿಂದಲೇ ದೇವಸ್ಥಾನಕ್ಕೆ ಪ್ರವೇಶ ಸ್ಥಗಿತ ಮಾಡಲಾಗಿದೆ. ಬೀಳಗಿ ತಾಲೂಕಿನ ಚಿಕ್ಕಸಂಗಮದ ಸಂಗಮೇಶ್ವರ ಜಾತ್ರೆ ಹಾಗೂ ಕೂಡಲಸಂಗಮದ ಸಂಗಮೇಶ್ವರ ಜಾತ್ರೆಯನ್ನು ರದ್ದು ಪಡಿಸಲಾಗಿದೆ. ಭಕ್ತರು ತಮ್ಮ ಮನೆಯಲ್ಲಿಯೇ ಧಾರ್ಮಿಕ ಕಾರ್ಯಗಳನ್ನು ಮಾಡಬಹುದು, ಯಾರು ಜಾತ್ರೆಯ ಬರುವ ಪ್ರಯತ್ನ ಮಾಡಬಾರದು.
- ರಾಜಶ್ರೀ ಅಗಸರ, ಆಯುಕ್ತರು, ಕೂಡಲಸಂಗಮ ಅಭಿವೃದ್ಧಿ ಮಂಡಳಿ
ಸಂಗಮೇಶ್ವರ ಜಾತ್ರೆಯ ನಿಮಿತ್ಯ ಎಪ್ರಿಲ್ 4 ರಿಂದ ನಡೆಯಬೇಕಿದ್ದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಎಪ್ರಿಲ್ 10 ರಿಂದ ನಡೆಯಬೇಕಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಂಡಿವೆ.
ಪ್ರತಿ ವರ್ಷ ಸಂಗಮೇಶ್ವರ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಕ್ಕೂ ಅಧಿಕ ಭಕ್ತರು ಬರುತ್ತಿದ್ದರು, ಜಾತ್ರೆಯ ಮುನ್ನಾ ದಿನ ಬಾಗಲಕೋಟೆ ಯಿಂದ ಕಾಲ್ನಡಿಗೆಯ ಮೂಲಕ ಕೂಡಲಸಂಗಮಕ್ಕೆ ಸಂಗಮೇಶ್ವರ ಬಂಗಾರದ ಕಳಸವನ್ನು ಮೇರವಣಿಗೆಯ ಮೂಲಕ ತರುತ್ತಿದ್ದರು. ಈ ಪಾದಯಾತ್ರೆಯಲ್ಲಿ20 ರಿಂದ 30 ಸಾವಿರ ಭಕ್ತರ ಪಾಲ್ಗೊಳ್ಳುತ್ತಿದ್ದರು. ಸಂಗಮೇಶ್ವರ ರಥೋತ್ಸವಕ್ಕೆ ಬೆಳಗಲ್ಲಿನಿಂದ ಹಗ್ಗ, ಇದ್ದಲಗಿಯ ಹಿಲಾಲ, ಗಂಜಿಹಾಳದ ತರಗು ಬಾಳಿ ಕಂಬ, ನಂದಿಕೊಲು, ಗುಳೆದಗುಡ್ಡದಿಂದ ಉತ್ಸವದ ಕಳಸ ಹಾಗೂ ಪಲ್ಲಕ್ಕಿ ಬರುತ್ತಿತ್ತು. ಪ್ರಸ್ತಕ ವರ್ಷ ಈ ಎಲ್ಲಕಾರ್ಯಗಳನ್ನು ರದ್ದುಪಡಿಸಲಾಗಿದೆ.
ಐತಿಹಾಸಿ, ಚಾರಿತ್ರಿಕ ಹಿನ್ನೆಲೆ ಹೊಂದಿದ ಸಂಗಮೇಶ್ವರ ಜಾತ್ರೆ ಶತಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಈ ಜಾತ್ರೆ ರದ್ದಾಗಿರುವುದು ಇದೇ ಮೊದಲು.
ಎಲ್ಲೆಡೆ ಬಂದ್
ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಭಕ್ತರ, ಪ್ರವಾಸಿಗರ ಸುರಕ್ಷತಾ ದೃಷ್ಠಿಯಿಂದ ಮಂಡಳಿಯು ತನ್ನ ವ್ಯಾಪ್ತಿಯ ಕೂಡಲಸಂಗಮದ ಸಂಗಮೇಶ್ವರ ದೇವಾಲಯ, ದಾಸೋಹ ಭವನ, ವಿಜಯಪುರ ಜಿಲ್ಲೆಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನ, ದಾಸೋಹ ಭವನ, ಬಸವ ಸ್ಮಾರಕ, ಯಾತ್ರಿ ನಿವಾಸ, ಸಾರ್ವಜನಿಕ ಗ್ರಂಥಾಲಯ ಹಾಗೂ ಇಂಗಳೇಶ್ವರದ ಸ್ಮಾರಕ, ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿಯ ನೀಲಾಂಬಿಕಾ ಐಕ್ಯ ಮಂಟಪ, ಬೀಳಗಿ ತಾಲೂಕಿನ ಚಿಕ್ಕ ಸಂಗಮದ ಸಂಗಮೇಶ್ವರ ದೇವಾಲಯ ಹಾಗೂ ಬೆಳಗಾವಿ ಜಿಲ್ಲೆಕಿತ್ತೂರ ತಾಲೂಕಿನ ಎಂ.ಕಿ.ಹುಬ್ಬಳ್ಳಿಯ ಗಂಗಾಂಬಿಕಾ ಐಕ್ಯ ಮಂಟಪದ ಪ್ರವೇಶವನ್ನು ಮಾರ್ಚ 17 ರಿಂದಲೇ ಸ್ಥಗಿತಗೊಳಿಸಿದೆ.
ಮಾರ್ಚ 17 ರಿಂದಲೇ ದೇವಸ್ಥಾನಕ್ಕೆ ಪ್ರವೇಶ ಸ್ಥಗಿತ ಮಾಡಲಾಗಿದೆ. ಬೀಳಗಿ ತಾಲೂಕಿನ ಚಿಕ್ಕಸಂಗಮದ ಸಂಗಮೇಶ್ವರ ಜಾತ್ರೆ ಹಾಗೂ ಕೂಡಲಸಂಗಮದ ಸಂಗಮೇಶ್ವರ ಜಾತ್ರೆಯನ್ನು ರದ್ದು ಪಡಿಸಲಾಗಿದೆ. ಭಕ್ತರು ತಮ್ಮ ಮನೆಯಲ್ಲಿಯೇ ಧಾರ್ಮಿಕ ಕಾರ್ಯಗಳನ್ನು ಮಾಡಬಹುದು, ಯಾರು ಜಾತ್ರೆಯ ಬರುವ ಪ್ರಯತ್ನ ಮಾಡಬಾರದು.
- ರಾಜಶ್ರೀ ಅಗಸರ, ಆಯುಕ್ತರು, ಕೂಡಲಸಂಗಮ ಅಭಿವೃದ್ಧಿ ಮಂಡಳಿ