ಆ್ಯಪ್ನಗರ

ಸಂಡೇ ಲಾಕ್ ಡೌನ್ ಗೆ ಸಂಪೂರ್ಣ ಸ್ತಬ್ಧಗೊಂಡ ಬಾಗಲಕೋಟೆ

ರಾಜ್ಯದಲ್ಲಿ ಕೊರೊನಾ ಸೋಂಕು ಕೈಮೀರುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಪ್ರತಿ ಭಾನುವಾರ ಲಾಕ್ ಡೌನ್ ಆದೇಶ ಹೊರಡಿಸಿದ್ದ ಹಿನ್ನಲೆ, ಬಾಗಲಕೋಟೆಯಲ್ಲಿ ಉತ್ತಮ ಸ್ಪಂದನೆ ದೊರಕಿದೆ.

Vijaya Karnataka Web 5 Jul 2020, 4:10 pm
ಬಾಗಲಕೋಟೆ: ಬಾಗಲಕೋಟೆಯಲ್ಲಿ ಸಂಡೇ ಲಾಕ್ ಡೌನ್ ಹಿನ್ನೆಲೆ ವ್ಯಾಪಾರ- ವಹಿವಾಟು ಎಲ್ಲವೂ ಸಂಪೂರ್ಣ ಸ್ಥಬ್ದಗೊಂಡಿದೆ. ಈ ಹಿನ್ನಲೆ ಬೆಳಗಿನ ಜಾವ ಬಾಗಲಕೋಟೆಗೆ ಬಂದಿಳಿದ ಪ್ರಯಾಣಿಕರ ಪರದಾಡುವಂತಾಯಿತು.
Vijaya Karnataka Web ಬಾಗಲಕೋಟೆ


ವಿಜಯಪುರ ಜಿಲ್ಲೆಯ ಮುದ್ದೇಬಿಹಾಳಕ್ಕೆ ತೆರಳಬೇಕಿದ್ದ ಪ್ರಯಾಣಿಕರು, ಬಸ್ ಗಳಿಲ್ಲದೆ ಬಸ್ ನಿಲ್ದಾಣದ ಹೊರಗಡೆ ನಿಂತು ಕಾಯುತ್ತಿದ್ದ ದೃಶ್ಯಗಳು ಕಂಡುಬಂತು. ನಗರದ ಮಾರ್ಕೆಟ್ ಗಳು ಸಂಪೂರ್ಣ ಬಂದ್ ಆಗಿದ್ದು, ಬಸವೇಶ್ವರ ವೃತ್ತದ ಬಳಿ ಪೋಲಿಸರ ಕಟ್ಟೆಚ್ಚರ ವಹಿಸಿದ್ದರು.

ಬಾದಾಮಿಯ ಬನಶಂಕರಿ ದೇವಿಗೂ ಸಂಡೇ ಲಾಕ್ ಡೌನ್ ಎಫೆಕ್ಟ್
ನಾಡಿನ ಶಕ್ತಿಪೀಠ ಬಾದಾಮಿಯ ಬನಶಂಕರಿ ದೇವಿಗೂ ಸಂಡೇ ಲಾಕ್ ಡೌನ್ ಎಫೆಕ್ಟ್ ಆಗಿದ್ದು, ಹುಣ್ಣಿಮೆಯ ದಿನವಾದ ಇಂದು ಬಾದಾಮಿಯ ಬನಶಂಕರಿ ದೇಗುಲದ ಬಾಗಿಲು ಬಂದ್ ಮಾಡಲಾಗಿದೆ.
ಬಾದಾಮಿ ಬನಶಂಕರಿ ಐತಿಹಾಸಿಕ ದೇಗುಲವು ಕಠಿಣ ಲಾಕ್ ಡೌನ್ ಬಳಿಕ ಜೂ. 8ರಂದು ಬನಶಂಕರಿ ದೇಗುಲ ಭಕ್ತರಿಗಾಗಿ ತೆರೆದಿತ್ತು. ಲಾಕ್ ಡೌನ್ ಬಳಿಕ ಮೊದಲ ಹುಣ್ಣಿಮೆ ಬರುವಷ್ಟರಲ್ಲಿ ಮತ್ತೆ ದೇಗುಲದ ಬಾಗಿಲು ಬಂದ್ ಆಗಿದೆ. ಹುಣ್ಣಿಮೆಯಂದು ಅಪಾರ ಭಕ್ತರು ದೇವಿ ದರ್ಶನ ಪಡೆಯುತ್ತಿದ್ದು, ಬೆಳಗ್ಗಿನ ಪೂಜಾ ಕೈಂಕರ್ಯ ನೇರವೇರಿಸಿ ಅರ್ಚಕರಿಂದ ದೇಗುಲದ ಬಾಗಿಲು ಬಂದ್ ಆಗಿದೆ. ಭಕ್ತರಿಲ್ಲದೆ ದೇಗುಲದ ಆವರಣ ಬಿಕೋ ಎನ್ನುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ