ಆ್ಯಪ್ನಗರ

ಕರ್ತವ್ಯನಿರತ ಸಿಆರ್‌ಪಿಎಫ್‌ ಯೋಧ ಹೃದಯಾಘಾತದಿಂದ ಸಾವು

​​ಸಿಆರ್‌ಪಿಎಫ್‌ ಬೆಟಾಲಿಯನ್ 73ರಲ್ಲಿ ಜಮ್ಮು ಕಾಶ್ಮೀರ ರಾಜಧಾನಿ ಶ್ರೀ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭೀಮಸಿಂಗ್ ಹುತಾತ್ಮರಾಗಿದ್ದಾರೆ.

Vijaya Karnataka Web 10 Jul 2019, 5:46 pm
ಬಾಗಲಕೋಟೆ: ಕರ್ತವ್ಯನಿರತ ಸಿಆರ್‌ಪಿಎಫ್‌ ಯೋಧ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ಯೋಧ ಭೀಮಸಿಂಗ್ ರಾಠೋಡ್ ಹುತಾತ್ಮರಾಗಿದ್ದಾರೆ.
Vijaya Karnataka Web soldier death bgk


ಶ್ರೀನಗರದಲ್ಲಿ ಕರ್ತವ್ಯ ನಿರತ ವೇಳೆ ಹೃದಯಾಘಾತದಿಂದ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ನಿವಾಸಿ ಭೀಮಸಿಂಗ್ ರಾಠೋಡ್ (54) ಹುತಾತ್ಮರಾಗಿದ್ದಾರೆ. ಈ ಹಿನ್ನೆಲೆ ಹುತಾತ್ಮ ಯೋಧನ ಮನೆಯಲ್ಲಿ ಆಕ್ರಂದನ ಜೋರಾಗಿದೆ. ಇನ್ನು, ನಾಳೆ ಹುತಾತ್ಮ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬರುವ ಸಾಧ್ಯತೆ ಇದೆ.

ಸಿಆರ್‌ಪಿಎಫ್‌ ಬೆಟಾಲಿಯನ್ 73ರಲ್ಲಿ ಭೀಮಸಿಂಗ್ ಜಮ್ಮು ಕಾಶ್ಮೀರ ರಾಜಧಾನಿ ಶ್ರೀ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ