ಆ್ಯಪ್ನಗರ

ನೂರಾರು ಭಕ್ತರಿಂದ ತುಳಸಿಗೇರೆಪ್ಪನ ದರ್ಶನ

ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿಕಳೆದ 70 ದಿನಗಳಿಂದ ದಿಗ್ಬಂಧನಕ್ಕೆ ಒಳಗಾಗಿದ್ದ ಸಮೀಪದ ಪ್ರಸಿದ್ಧ ಪವಮಾನ ಕ್ಷೇತ್ರ ತುಳಸಿಗೇರಿಯ ಶ್ರೀ ಹನುಮಂತದೇವರ ದೇವಸ್ಥಾನದ ಬಾಗಿಲು ಸೋಮವಾರದಂದು ಮತ್ತೆ ತೆರೆದಿದ್ದು, ನೂರಾರು ಭಕ್ತರು ತಮ್ಮ ಆರಾಧ್ಯ ದೇವರ ದರ್ಶನ ಪಡೆದು ಧನ್ಯತಾ ಭಾವ ಮೆರೆದರು.

Vijaya Karnataka Web 9 Jun 2020, 5:00 am
ಕಲಾದಗಿ: ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿಕಳೆದ 70 ದಿನಗಳಿಂದ ದಿಗ್ಬಂಧನಕ್ಕೆ ಒಳಗಾಗಿದ್ದ ಸಮೀಪದ ಪ್ರಸಿದ್ಧ ಪವಮಾನ ಕ್ಷೇತ್ರ ತುಳಸಿಗೇರಿಯ ಶ್ರೀ ಹನುಮಂತದೇವರ ದೇವಸ್ಥಾನದ ಬಾಗಿಲು ಸೋಮವಾರದಂದು ಮತ್ತೆ ತೆರೆದಿದ್ದು, ನೂರಾರು ಭಕ್ತರು ತಮ್ಮ ಆರಾಧ್ಯ ದೇವರ ದರ್ಶನ ಪಡೆದು ಧನ್ಯತಾ ಭಾವ ಮೆರೆದರು.
Vijaya Karnataka Web KLDG-8-1_41


ಧಾರ್ಮಿಕ ದತ್ತಿ ಇಲಾಖೆಯ ಮಾರ್ಗಸೂಚಿಯ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ದೇವಾಲಯದ ಮಹಾದ್ವಾರದ ಬಳಿಯೇ ಭಕ್ತರ ಧರ್ಮಲ್‌ ಸ್ಕ್ರೀನಿಂಗ್‌ ಮಾಡಿದ ಆಡಳಿತ ಸಿಬ್ಬಂದಿಗಳು ಅವರ ವೈಯಕ್ತಿಕ ಮಾಹಿತಿಗಳನ್ನು ದಾಖಲಿಸಿಕೊಂಡರು.ಆರು ಅಡಿ ಅಂತರದಲ್ಲಿನ ಬಾಕ್ಸ್‌ನಲ್ಲಿನಿಂತು ಸರತಿಸಾಲಿನಲ್ಲಿಸಾಗಿದ ಭಕ್ತರು ನಿಯಮದನುಸಾರವಾಗಿ ಕೇವಲ ದೇವರಿಗೆ ಕೈ ಮುಗಿದು ದರ್ಶನ ಪಡೆದರು.

ಬೆಳಗ್ಗೆ 7ರಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಲು ಪ್ರಾರಂಭಿಸಿದ್ದರು. ಜಿಲ್ಲೆಸೇರಿದಂತೆ ಬೆಳಗಾವಿ, ವಿಜಯಪುರ ಹಾಗೂ ಇತರೆಡೆಯ ಭಕ್ತರು ಆಗಮಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ