ಆ್ಯಪ್ನಗರ

ದೇಶದ್ರೋಹ ಕೆಲಸ ಮಾಡುವ ಸಂಘಟನೆಯನ್ನ ಬ್ಯಾನ್ ಮಾಡ್ತೀವಿ: ಡಿಸಿಎಂ ಕಾರಜೋಳ

​​ಎಸ್‌ಡಿಪಿಐ ಸಂಘಟನೆ ಬ್ಯಾನ್ ಸಂಬಂಧ ಬಾಗಲಕೋಟೆಯಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಆದರೆ ಸರ್ಕಾರ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವದಿಲ್ಲ. ಸಾಕ್ಷ್ಯಾಧಾರ ಗಟ್ಟಿಗೊಳಿಸಿ ಯಾರು ತಪ್ಪಿಸ್ಥರಿದ್ದಾರೋ ಅವರ ಮೇಲೆ ನೂರಕ್ಕೆ ನೂರರಷ್ಟು ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಮೂಲಕ ಸಂಘಟನೆಗಳನ್ನ ಬ್ಯಾನ್‌ ಮಾಡುವ ಬಗ್ಗೆ ಪರೋಕ್ಷ ಹೇಳಿಕೆ ನೀದ್ದಾರೆ.

Vijaya Karnataka Web 15 Aug 2020, 11:47 am
ಬಾಗಲಕೋಟೆ: ದೇಶದ್ರೋಹ ಕೆಲಸ ಮಾಡಿದ್ದ ಯಾವುದೇ ಸಂಘಟನೆ ಇದ್ರೂ ಬ್ಯಾನ್ ಮಾಡ್ತೀವಿ. ದೇಶದ್ರೋಹಿ ಕೆಲ್ಸ ಮಾಡಿದವ್ರು ಮಾಡಿದ್ದೀವಿ ಎಂದು ಹೇಳೋದಿಲ್ಲ. ದೇಶ ದ್ರೋಹಿ ಕೆಲಸ ಮಾಡಿದವ್ರು ಮಾಡಿದ್ದೀವಿ ಎಂದು ಈ ದೇಶದಲ್ಲಿ ಯಾರಾದರೂ ಹೇಳಿದ್ದಾರಾ!? ಎಂದು ಡಿಸಿಎಂ ಕಾರಜೋಳ ಪ್ರಶ್ನಿಸಿದ್ದಾರೆ.
Vijaya Karnataka Web 71612527


ಎಸ್‌ಡಿಪಿಐ ಸಂಘಟನೆ ಬ್ಯಾನ್ ಸಂಬಂಧ ಬಾಗಲಕೋಟೆಯಲ್ಲಿ ಮಾತನಾಡಿದ ಡಿಸಿಎಂ ಗೋವಿಂದ ಕಾರಜೋಳ, ಆದರೆ ಸರ್ಕಾರ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವದಿಲ್ಲ. ಸಾಕ್ಷ್ಯಾಧಾರ ಗಟ್ಟಿಗೊಳಿಸಿ ಯಾರು ತಪ್ಪಿಸ್ಥರಿದ್ದಾರೋ ಅವರ ಮೇಲೆ ನೂರಕ್ಕೆ ನೂರರಷ್ಟು ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವ ಮೂಲಕ ಸಂಘಟನೆಗಳನ್ನ ಬ್ಯಾನ್‌ ಮಾಡುವ ಬಗ್ಗೆ ಪರೋಕ್ಷ ಹೇಳಿಕೆ ನೀದ್ದಾರೆ.

ಇನ್ನು ಕೆಜಿ ಹಳ್ಳಿ ಘಟನೆಯಲ್ಲಿ ಮೃತರ ಮನೆಗೆ ಜಮೀರ್ ಅಹಮ್ಮದ್ ಭೇಟಿ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಿದ ಗೋವಿಂದ ಕಾರಜೋಳ, ಯಾಕೆ ಭೇಟಿ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಅಂತ:ಕರಣವುಳ್ಳವರು, ಸಾಂತ್ವನ ಹೇಳೋದಕ್ಕೆ ರಾಜಕಾರಣಿಗಳ ಭೇಟಿ ಸ್ವಾಭಾವಿಕ. ಅವರು ಯಾವ ಉದ್ದೇಶಕ್ಕೆ ಭೇಟಿ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಹೊಸಪೇಟೆಯಲ್ಲಿ 150 ಅಡಿ ಎತ್ತರದಲ್ಲಿ ಹಾರಿದ ತ್ರಿವರ್ಣ ಧ್ವಜ, ಸಚಿವ ಆನಂದ್‌ ಸಿಂಗ್‌ರಿಂದ ಉದ್ಘಾಟನೆ!

ಕೆಜಿ ಹಳ್ಳಿಯಲ್ಲಿ ನಡೆದ ಗಲಭೆ ನಂತರ ಎಸ್‌ಡಿಪಿಐ ಬ್ಯಾನ್‌ ಸಂಬಂಧ ರಾಜ್ಯಾದ್ಯಂತ ಆಗ್ರಹ ಕೇಳಿಬರುತ್ತಿದೆ, ಸರಕಾರ ಕೂಡ ಈ ಬಗ್ಗೆ ಪರಿಶೀಲಿಸುವ ಬಗ್ಗೆ ಹೇಳುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ