ಆ್ಯಪ್ನಗರ

ದರಿದ್ರತನ ಆರಂಭವಾಗಿದ್ದೇ ಸಿದ್ದರಾಮಯ್ಯ ಕಾಲದಲ್ಲಿ: ಗೋವಿಂದ ಕಾರಜೋಳ ಕಿಡಿ

ದರಿತ್ರನ ಎಂಬುದು ಆರಂಭವಾಗಿದ್ದೇ ಸಿದ್ದರಾಮಯ್ಯ ಅವರ ಸರಕಾರದಲ್ಲಿ, ಹೆಚ್ಚು ಸಾಲ ಮಾಡಿದ್ದು ಸಿದ್ದರಾಮಯ್ಯ. ಎಂದು ಡಿಸಿಎಂ ಗೋವಿಂದ ಕಾರಜೋಳ ಟಾಂಗ್ ನೀಡಿದ್ದಾರೆ.

Vijaya Karnataka Web 11 Feb 2020, 2:48 pm
ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದರಿದ್ರ ಸರಕಾರ ಹೇಳಿಕೆಗೆ ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಟಾಂಗ್ ನೀಡಿದ್ದಾರೆ.
Vijaya Karnataka Web dcm govind karjol


ದರಿದ್ರತನ ಎಂಬುದು ಆರಂಭವಾಗಿದ್ದೇ ಸಿದ್ದರಾಮಯ್ಯ ಅವರ ಸರಕಾರದಲ್ಲಿ, ಹೆಚ್ಚು ಸಾಲ ಮಾಡಿದ್ದು ಸಿದ್ದರಾಮಯ್ಯ. ನಮ್ಮ ಬ್ಯಾರೋವಿಂಗ್ ಲಿಮಿಟ್ ಮೀರಿ ಸಾಲ ಮಾಡಿದ್ದರು. ಅಂದಿನಿಂದಲೇ ದರಿದ್ರತನ ಆರಂಭವಾಗಿತ್ತು ಎಂದಿದ್ದಾರೆ.

ಪಕೃತಿ ವಿಕೋಪದಿಂದ 35 ಸಾವಿರ ಕೋಟಿ ನಷ್ಟವಾಯ್ತು. ಹೀಗಾಗಿ ಸ್ವಲ್ಪ ಆರ್ಥಿಕ ತೊಂದರೆ ಉಂಟಾಯ್ತು. ಪ್ರಕೃತಿ ವಿಕೋಪದಲ್ಲಿ ಆದ ಮನೆ, ಬೆಳೆ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಗೆ ಪರಿಹಾರ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಹೇಳಿದಂತೆ ಏನೂ ತೊಂದರೆ ಆಗಿಲ್ಲ. ನಮ್ಮ ಸರಕಾರ ಕನಿಷ್ಠ 10 ಸಾವಿರ ಕೋಟಿ ಪರಿಹಾರ ನೀಡಿದೆ ಎಂದು ಸಮರ್ಥಿಸಿಕೊಂಡರು.

ಇದು ಅತ್ಯಂತ ದರಿದ್ರ ಸರಕಾರ: ಸಿದ್ದರಾಮಯ್ಯ ಆಕ್ರೋಶ

ಈ ಹಿಂದೆ ಆರ್ಥಿಕ ಕೊರತೆ ಎದುರಿಸುತ್ತಿರುವ ಕರ್ನಾಟಕ ಸರಕಾರ ಪದವಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಲ್ಯಾಪ್‌ಟಾಪ್‌ನ್ನು ನಿಲ್ಲಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ‘ನಮ್ಮ ಸರಕಾರದಲ್ಲಿ ಒಂದೂ ಚೆಕ್ ಬೌನ್ಸ್ ಆಗಿರಲಿಲ್ಲ. ಇದು ಅತ್ಯಂತ ದರಿದ್ರ ಸರಕಾರ. ನಮ್ಮ ಸರಕಾರ ಇದ್ದಾಗ ಹಣ ಇತ್ತು. ಈಗ ಇಲ್ಲ ಅಂದರೆ ಏನರ್ಥ?' ಎಂದು ಪ್ರಶ್ನಸಿದ್ದರು.

'ಸಂಪುಟ ಸಂಕಟ'ದ ಬೆನ್ನಲ್ಲೇ ಯತ್ನಾಳ್, ಜಿಗಜಿಣಗಿ ವಾರ್..! ವಿಜಯಪುರದಲ್ಲೀಗ 'ನಾಯಕತ್ವ' ಸಮರ..!

ಕುಮಟಳ್ಳಿ ಏನು ಹೇಳಿದ್ದಾರೆ ತಿಳಿದಿಲ್ಲ:
ಎಂಎಸ್ ಐಎಲ್ ಅಧ್ಯಕ್ಷ ಸ್ಥಾನ ಕುಮಟಳ್ಳಿ ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿ, ಅವ್ರು ಏನು ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ‌‌ ಈಗಂತೂ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇನ್ನು 6 ಹುದ್ದೆ ಖಾಲಿ ಇದೆ. ಮುಂದಿನ ದಿನಗಳಲ್ಲಿ ಸಂಪುಟ ಮತ್ತೆ ವಿಸ್ತರಣೆ ಆಗುತ್ತೆ ಎಂದರು. ಇನ್ನು ಬಿಎಸ್ವೈ ಮುಂದಿನ ಮೂರು ವರ್ಷ ಸಿಎಂ ಮುಂದುವರೆಯಲು ಶಾಸಕಾಂಗ ಸಭೆ ಕರೆಯಲಿ ಎಂದ ಯತ್ನಾಳ್ ಹೇಳಿಕೆಗೆ “ದಯವಿಟ್ಟು ಈ ಬಗ್ಗೆ ನನಗೆ ಕೇಳ್ಬೇಡಿ” ಎಂದು ಹೇಳಿಕೆ ನೀಡಲು ನಿರಾಕರಿಸಿದರು.

ದರಿದ್ರ ಅಂದರೆ ಏನು?

ಲೋಕೋಪಯೋಗಿ ಖಾತೆ ವಿಚಾರಕ್ಕೆ ಸಂಬಂಧಿಸಿ:
ಲೋಕೋಪಯೋಗಿ ಖಾತೆ ವಿಚಾರಕ್ಕೆ ಹೆಚ್ಚಿನ ಎಲ್ಲಾ ಸಚಿವರುಗಳು ಕಣ್ಣಿಟ್ಟಿದ್ದು, ಯಾರು ಕಣ್ಣಿಟ್ಟಿದ್ರೋ, ಕಣ್ಣಿಟ್ಟಿಲ್ಲವೂ ಅನ್ನೋದು ನನಗೆ ಗೊತ್ತಿಲ್ಲ. ನಾನು ಯಾವಾಗಲೂ ಹೇಳುತ್ತಿರುತ್ತೇನೆ, ಪಕ್ಷ ಮತ್ತು ಮುಖ್ಯಮಂತ್ರಿಗಳು ಏನು ಜವಾಬ್ದಾರಿ ವಹಿಸುತ್ತಾರೋ ಅದನ್ನು ನಾನು ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ