ಆ್ಯಪ್ನಗರ

ಗೌಹಾತಿಯಲ್ಲಿ ಛಬ್ಬಿಯ ಯೋಧ ಸಾವು

ಕಲಾದಗಿ: ಅಸ್ಸಾಂನ ಮೇಘಾಲಯದಲ್ಲಿಬಿಎಸ್‌ಎಫ್‌ನಲ್ಲಿಸೇವೆ ಸಲ್ಲಿಸುತ್ತಿದ್ದ ಸಮಿಪದ ಛಬ್ಬಿ ಪುನರ್ವಸತಿ ಕೇಂದ್ರದ ಯೋಧ ಚಂದ್ರಶೇಖರ ಪು ಮುಳಗುಂದ(40)ಅನಾರೋಗ್ಯದಿಂದ ಶನಿವಾರ ಸಂಜೆ ಗೌಹಾತಿಯ ಮಿಲಟರಿ ಆಸ್ಪತ್ರೆಯಲ್ಲಿಮೃತಪಟ್ಟಿದ್ದಾರೆ.

Vijaya Karnataka 25 Nov 2019, 5:00 am
ಕಲಾದಗಿ: ಅಸ್ಸಾಂನ ಮೇಘಾಲಯದಲ್ಲಿಬಿಎಸ್‌ಎಫ್‌ನಲ್ಲಿಸೇವೆ ಸಲ್ಲಿಸುತ್ತಿದ್ದ ಸಮಿಪದ ಛಬ್ಬಿ ಪುನರ್ವಸತಿ ಕೇಂದ್ರದ ಯೋಧ ಚಂದ್ರಶೇಖರ ಪು ಮುಳಗುಂದ(40)ಅನಾರೋಗ್ಯದಿಂದ ಶನಿವಾರ ಸಂಜೆ ಗೌಹಾತಿಯ ಮಿಲಟರಿ ಆಸ್ಪತ್ರೆಯಲ್ಲಿಮೃತಪಟ್ಟಿದ್ದಾರೆ.
Vijaya Karnataka Web death of chubby warrior in guwahati
ಗೌಹಾತಿಯಲ್ಲಿ ಛಬ್ಬಿಯ ಯೋಧ ಸಾವು


ಯೋಧನ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವದೊಂದಿಗೆ ಸೋಮವಾರ ಮಧ್ಯಾಹ್ನದ ಹೊತ್ತಿಗೆ ಊರಿನ ಕೃಷಿ ಪತ್ತಿನ ಸಹಕಾರಿ ಸಂಘದ ಎದುರಿನ ಸರಕಾರಿ ಜಾಗದಲ್ಲಿಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಬಾಗಲಕೋಟ ತಹಸೀಲ್ದಾರ ಜಿ.ಎಸ್‌.ಹಿರೇಮಠ ಪತ್ರಿಕೆ ಗೆ ತಿಳಿಸಿದ್ದಾರೆ.ನೆರವೇರಲಿದೆ.

ರಜೆ ಮುಗಿಸಿ ಸೇವೆಗೆ:

ಕಳೆದ 19ವರ್ಷಗಳಿಂದ ಬಿಎಸ್‌ಎಫ್‌ನಲ್ಲಿಸೈನಿಕನಾಗಿ ಸೇವೆಸಲ್ಲಿಸುತ್ತಿದ್ದ ಚಂದ್ರಶೇಖರಗೆ ವಯೋವೃದ್ಧ ತಾಯಿ ಬಾಯವ್ವ, ಪತ್ನಿ ಸಾವಿತ್ರಿ ಹಾಗೂ 2 ವರ್ಷದ ಮಗ ಪವನ, 8 ವರ್ಷದ ಮಗಳು ಸೃಷ್ಠಿ ಇದ್ದಾರೆ. ಕಳೆದ ಐದಾರು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗೌಹಾತಿ ಮಿಲಟರಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದು ಗುಣಮುಖರಾಗಿ ರಜೆ ಮೇಲೆ ಕಳೆದ ದಸರೆಯಲ್ಲಿಛಬ್ಬಿಗೆ ಬಂದಿದ್ದರು. ರಜೆ ಮುಗಿದಿದ್ದರಿಂದ ಸಂಪೂರ್ಣ ಗುಣಮುಖರಾಗಿದ್ದ ಅವರು ಕಳೆದ ಕಳೆದ 3 ರಂದು ಸೇವೆಗೆ ತೆರಳಿದ್ದರು.

ಮತ್ತೆ ಅನಾರೋಗ್ಯ:

ಸೇವೆಯಲ್ಲಿದ್ದಾಗಲೆ ಮತ್ತೆ ಅನಾರೋಗ್ಯಕ್ಕೆ ಒಳಗಾಗದ ಅವರು ಕಳೆದೊಂದು ವಾರದಿಂದ ಮತ್ತೆ ಗೌಹಾತಿಯ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೈಕೆಗಾಗಿ ಅವರ ಪತ್ನಿ ಕಳೆದ ನಾಲ್ಕುದಿನಗಳ ಹಿಂದೆ ಗೌಹಾತಿಗೆ ತೆರಳಿದ್ದರು.

ಶೋಕ:
ಯೋಧನ ಮರಣಕ್ಕೆ ಇಡೀ ಊರು ಕಂಬನಿ ಮಿಡಿಯುತ್ತಿದೆ. ವೃದ್ಧ ತಾಯಿ ಬಾಯವ್ವ ಅವರಿಗೆ ಹೃದಯ ಸಂಬಂಧಿ ತೊಂದರೆ ಇರುವುದರಿಂದ ಮಗನ ಸಾವಿನ ಸುದ್ದಿಯನ್ನು ಅವರಿಗೆ ಹೇಳುವುದು ಹೇಗೇ ಎಂಬ ಸಂಕಟದಲ್ಲಿಅವರ ಬಂಧುಗಳಿದ್ದು, ಸಂಜೆಯಾದರು ಮಗನ ಸಾವಿನ ಸುದ್ದಿ ಹೇಳಿರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ