ಆ್ಯಪ್ನಗರ

ರಾಮತೀರ್ಥ ಕೊಳದಲ್ಲಿ ಮೀನುಗಳ ಸಾವು

ನಗರದ ರಾಮತೀರ್ಥದ ರಾಮೇಶ್ವರ ದೇವಸ್ಥಾನ ಆವರಣದಲ್ಲಿನ ಕೊಳದಲ್ಲಿಸಹಸ್ರಾರು ಸಂಖ್ಯೆಯಲ್ಲಿಮೀನುಗಳು ಸಾವನ್ನಪ್ಪಿದ್ದು ಸಾರ್ವಜನಿಕರಲ್ಲಿತೀವ್ರ ಆತಂಕ ಮೂಡಿಸಿದೆ.

Vijaya Karnataka Web 25 May 2020, 5:00 am
ಜಮಖಂಡಿ: ನಗರದ ರಾಮತೀರ್ಥದ ರಾಮೇಶ್ವರ ದೇವಸ್ಥಾನ ಆವರಣದಲ್ಲಿನ ಕೊಳದಲ್ಲಿಸಹಸ್ರಾರು ಸಂಖ್ಯೆಯಲ್ಲಿಮೀನುಗಳು ಸಾವನ್ನಪ್ಪಿದ್ದು ಸಾರ್ವಜನಿಕರಲ್ಲಿತೀವ್ರ ಆತಂಕ ಮೂಡಿಸಿದೆ.
Vijaya Karnataka Web JKD 24-1_41


ದೇವಸ್ಥಾನದ ಮುಂಬಾಗದ ಕೊಳದಲ್ಲಿಸಾವಿರಾರು ಸಂಖ್ಯೆಯಲ್ಲಿಕರ್ಷಕ ಮೀನುಗಲು ಸತ್ತು ನೀರಿನ ಮೇಲೆ ತೇಲಾಡುವುದನ್ನು ಕಂಡು ದೇವಸ್ಥಾನಕ್ಕೆ ಬರುವ ನಾಗರಿಕರು ಮಮ್ಮಲ ಮರುಗಿದರು.

ವಾಯುವಿಹಾರಕ್ಕೆಂದು ಆಗಮಿಸುವವರು ,ದೇವಸ್ಥಾನಕ್ಕೆ ಆಗಮಿಸುವವರು ನಿತ್ಯ ಮೀನುಗಳಿಗೆ ಆಹಾರ ನೀಡುವ ಹವ್ಯಾಸ ಹೊಂದಿದ್ದರು. ಆದರೆÜ ಬೆಳಗಿನ ಜಾವ ಸತ್ತ ಮೀನುಗಳ ನೋಡಿದ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತ ಪಡಿಸಿದರು.

ನಗರಸಭೆ ಸದಸ್ಯ ಪರಮಾನಂದ ಗವರೋಜಿ ಅವರು ಕೂಡಲೇ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದು ನಗರಸಭೆ ಸಿಬ್ಬಂದಿ ಮೂಲಕ ಸ್ವಚ್ಚಗೊಳಿಸಿದರು, ಮೀನುಗಾರಿಕೆ ಇಲಾಖೆ ಅಧಿಕಾರಿ ಪ್ರಕಾಶ ಭಜಂತ್ರಿ ಅವರು ಸ್ಥಳಕ್ಕೆ ಭೇಟ್ಟಿ ನೀಡಿ ಪರಿಶಿಲಿಸಿ ಹೊಂಡದಲ್ಲಿನ ಅರ್ಧದಷ್ಟು ನೀರನ್ನು ಹೊರ ಹಾಕುವಂತೆ ಸೂಚನೆ ನೀಡಿದರು. ಸಾರ್ವಜನಿಕರು ಯಾವುದೇ ಆಹಾರ ಪದಾರ್ಥಗಳನ್ನು ಹಾಕಬಾರದೆಂದು ಸೂಚನಾ ಫಲಕ ಹಾಕಬೇಕು ಎಂದರು.

ಮೀನುಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಹಾಗೂ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿಹಾಕಿದ್ದ ಆಹಾರ ಪದಾರ್ಥ ತಿಂದು ಉಸಿರುಗಟ್ಟಿ ಸಾವನಪ್ಪಿವೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಮುಂದಿನ ದಿನಗಳಲ್ಲಿಮೀನಿನ ಮರಿಗಳನ್ನು ಬಿಡಲಾಗುವುದು.
ಪ್ರಕಾಶ ಭಜಂತ್ರಿ. ಸಹಾಯಕ ನಿರ್ದೇಶಕರು ಮಿನುಗಾರಿಕೆ ಇಲಾಖೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ