ಆ್ಯಪ್ನಗರ

ಬೆಳೆಗಾರರಿಗೆ ಇಲಾಖೆ ಸಂಪರ್ಕ ಸೇತು

ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಹಣ್ಣು ಬೆಳೆಗಾರರಿಗೆ ಮಾರುಕಟ್ಟೆ ಸಂಪರ್ಕ ಒದಗಿಸುವ ಕಾರ್ಯವನ್ನು ತೋಟಗಾರಿಕೆ ಇಲಾಖೆ ಕೈಗೊಂಡಿದೆ.

Vijaya Karnataka Web 25 Apr 2020, 5:00 am
ಬಾಗಲಕೋಟೆ: ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಹಣ್ಣು ಬೆಳೆಗಾರರಿಗೆ ಮಾರುಕಟ್ಟೆ ಸಂಪರ್ಕ ಒದಗಿಸುವ ಕಾರ್ಯವನ್ನು ತೋಟಗಾರಿಕೆ ಇಲಾಖೆ ಕೈಗೊಂಡಿದೆ.
Vijaya Karnataka Web department contacts for growers
ಬೆಳೆಗಾರರಿಗೆ ಇಲಾಖೆ ಸಂಪರ್ಕ ಸೇತು


ವಿಜಯ ಕರ್ನಾಟಕದಲ್ಲಿತೋಟಗಾರಿಕೆ ಬೆಳೆಗಳ ಕುರಿತು ಒಂದು ವಾರ ಪ್ರಕಟವಾದ ''ಕೊರೊನಾ ಸೋಂಕು, ತೋಟಗಾರಿಕೆ ಮಂಕು'' ಸರಣಿ ವರದಿಗಳಿಗೆ ಪ್ರತಿಕ್ರಿಯಿಸಿರುವ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಭುರಾಜ್‌ ಹಿರೇಮಠ, ಜಿಲ್ಲೆಯಲ್ಲಿದಾಳಿಂಬೆ, ಕಲ್ಲಂಗಡಿ, ದ್ರಾಕ್ಷಿ, ಪಪ್ಪಾಯಿ ಬೆಳೆಗಾರರಿಗೆ ಖರೀದಿದಾರರೊಂದಿಗೆ ಸಂಪರ್ಕ ಕಲ್ಪಿಸಲು ಇಲಾಖೆ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಇಲಾಖೆಯ ಬೆಂಗಳೂರಿನ ಪ್ರಧಾನ ಕಚೇರಿಗೆ ರೈತರು ಕರೆ ಮಾಡಿ ಸಮಸ್ಯೆ ವಿವರಿಸಿದ ನಂತರ ಈ ಮಾಹಿತಿಯನ್ನು ಜಿಲ್ಲಾಮಟ್ಟಕ್ಕೆ ರವಾನಿಸಲಾಗುತ್ತದೆ. ಈ ಮಾಹಿತಿ ಬೆನ್ನತ್ತಿ ಖರೀದಿದಾರರೊಂದಿಗೆ ಬೆಳೆಗಾರರ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದರು.

ಇಲಾಖೆಯಿಂದ ಬೀಳಗಿಯಲ್ಲಿಬೆಳೆಯಲಾಗಿದ್ದ ದ್ರಾಕ್ಷಿಯನ್ನು ಮಣೂಕ ಆಗಿ ಪರಿವರ್ತಿಸಲು ವಿಜಯಪುರ ಜಿಲ್ಲೆಯ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಕಳುಹಿಸಿಕೊಡಲಾಗಿದೆ. ಮಂಗಳೂರು, ಕಾಸರಗೋಡು, ಗೋವಾ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಿಗೆ ಪಪ್ಪಾಯಿ ಕಳಿಸಲಾಗಿದೆ. ಇಲಾಖೆ ಅಧಿಕಾರಿಗಳು ಖರೀದಿದಾರರು ಹಾಗೂ ರೈತರೊಡನೆ ಚರ್ಚಿಸಿ ಸೂಕ್ತ ಬೆಲೆಗೆ ಬೆಳೆ ಮಾರಾಟ ಮಾಡಿಸಿದ್ದಾರೆ. ಜತೆಗೆ ಇಲಾಖೆಯಿಂದ ಹಣ್ಣುಗಳ ಸಾಗಣೆಗಾಗಿ ವಾಹನಗಳಿಗೆ ಪಾಸ್‌ ವಿತರಿಸಲಾಗಿದೆ. ಹಾಪ್‌ಕಾಮ್ಸ್‌ ನೇತೃತ್ವದಲ್ಲಿಬಾಗಲಕೋಟೆಯಲ್ಲಿಎರಡು ಮಳಿಗೆ ಆರಂಭಿಸಲಾಗಿದೆ. ಇದೇ ಮಾದರಿಯಲ್ಲಿಸಾಧ್ಯವಾದಷ್ಟು ತಾಲೂಕು ಕೇಂದ್ರಗಳಲ್ಲೂಮಳಿಗೆ ಆರಂಭಿಸಿ ರೈತರಿಗೆ ನೆರವಾಗುವ ಉದ್ದೇಶ ಇದೆ ಎಂದರು.

ಇಲಾಖೆಯಿಂದ ರೈತರಿಗೆ ಸಾಧ್ಯವಾದಷ್ಟು ನೆರವು ನೀಡಲಾಗುತ್ತಿದೆ. ಖರೀದಿದಾರರೊಂದಿಗೆ ಮಾತನಾಡಿ ಹಣ್ಣು ಖರೀದಿಗೆ ಮನವೊಲಿಸಲಾಗುತ್ತಿದೆ. ತರಕಾರಿ ಮಾರಾಟ ಸ್ಥಳೀಯ ಮಾರುಕಟ್ಟೆ ಅವಲಂಬಿಸಿರುವುದರಿಂದ ರೈತರು ನೇರವಾಗಿ ಮಾರಾಟ ಕೈಗೊಂಡಿದ್ದಾರೆ.
-ಪ್ರಭುರಾಜ್‌ ಹಿರೇಮಠ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ


ತೋವಿವಿ ತಾಂತ್ರಿಕ ನೆರವು
ಕೊರೊನಾದಿಂದಾಗಿ ಮಾರುಕಟ್ಟೆ ಬಂದ್‌ ಆಗಿರುವುದರಿಂದ ಸಂಕಷ್ಟದಲ್ಲಿರುವ ತೋಟಗಾರಿಕೆ ಬೆಳೆಗಾರರಿಗೆ ತೋಟಗಾರಿಕೆ ವಿವಿಯಿಂದ ಸಾಧ್ಯವಾದಷ್ಟು ನೆರವು ನೀಡಲಾಗುತ್ತಿದೆ.

ಅವಳಿ ಜಿಲ್ಲೆಯಲ್ಲಿಕಲ್ಲಂಗಡಿ, ಬಾಳೆ, ಚಿಕ್ಕು, ದಾಳಿಂಬೆ, ದ್ರಾಕ್ಷಿ ಹಾಗೂ ತರಕಾರಿ ಮಾರಾಟಕ್ಕೆ ಅವಕಾಶವೇ ಇಲ್ಲದಂತಾಗಿದೆ. ಈ ಮಧ್ಯೆ ವಿಶ್ವವಿದ್ಯಾಲಯದಿಂದ ರೈತರಿಗೆ ಸಂಸ್ಕರಣೆ ಬಗ್ಗೆ ಮಾಹಿತಿ ನೀಡುವ ಕೆಲಸ ನಡೆದಿದೆ. ವಿವಿಯಿಂದ ವಿಜ್ಞಾನಿಗಳ ಮೊಬೈಲ್‌ ಸಂಖ್ಯೆಗಳನ್ನು ರೈತರಿಗೆ ನೀಡಲಾಗಿದ್ದು, ರೈತರು ಕರೆ ಮಾಡಿ ಸಂಸ್ಕರಣೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ರೈತರು ಬೆಳೆಯನ್ನು ಹೇಗೆ ಮಾರಾಟ ಮಾಡಬಹುದು ಎಂಬ ಬಗ್ಗೆ ಕೂಡ ವಿವಿಯಿಂದ ಮಾಹಿತಿ ಒದಗಿಸಲಾಗುತ್ತಿದೆ.

ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ವಿವಿಯ ವಿಸ್ತರಣಾ ನಿರ್ದೇಶಕ ಡಾ.ವೈ.ಕೆ.ಕೋಟೆಕಲ್‌, ಮಾರುಕಟ್ಟೆ ಬಂದ್‌ ಆಗಿರುವುದರಿಂದ ರೈತರು ನೇರ ಮಾರಾಟ ಪದ್ಧತಿ ಮೂಲಕ ಹಣ್ಣುಗಳನ್ನು ಮಾರಬಹುದಾಗಿದೆ. ಬೇರೆ ಜಿಲ್ಲೆ, ರಾಜ್ಯಗಳ ಮಾರುಕಟ್ಟೆಗಳು ಕಾರ್ಯನಿರ್ವಹಿಸದ ಕಾರಣ ಸ್ಥಳೀಯವಾಗಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ. ವಿವಿಯ ವಿಜ್ಞಾನಿಗಳು ಸಂಸ್ಕರಣೆ ಬಗ್ಗೆ ರೈತರಿಗೆ ಮಾಹಿತಿ ಒದಗಿಸುತ್ತಿದ್ದಾರೆ. ಬಾಳೆಹಣ್ಣನ್ನು ಒಣಗಿಸುವ, ಲಿಂಬೆ ಹಣ್ಣನ್ನು ಉಪ್ಪು ನೀರಿನಲ್ಲಿಸಂಗ್ರಹಿಸಿಟ್ಟು ಉಪ್ಪಿನಕಾಯಿ ಮಾಡುವ ಸಂಸ್ಕರಣೆ ಪ್ರಕ್ರಿಯೆ ಕೈಗೊಳ್ಳಬಹುದಾಗಿದೆ. ಇದರಿಂದ ಭವಿಷ್ಯದಲ್ಲಿಸಂಸ್ಕರಿತ ಹಣ್ಣುಗಳನ್ನು ಮಾರಾಟ ಮಾಡಲು ಸಾಧ್ಯವಿದೆ. ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿರುವ ಕೋಲ್ಡ್‌ ಸ್ಟೋರೇಜ್‌ ಘಟಕಗಳಲ್ಲಿಹಣ್ಣು ಸಂಗ್ರಹಿಸಿಡಬಹುದಾಗಿದೆ. ಈರುಳ್ಳಿ ಶೇಖರಿಸಿಡಲು ಶೆಡ್‌ನಂತಹ ವೈಜ್ಞಾನಿಕ ಮಾದರಿಯಿದೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ