ಆ್ಯಪ್ನಗರ

ಬಾಗಲಕೋಟೆಯಲ್ಲಿ ಕೊರೊನಾ ಸಂಕಷ್ಟದ ಮಧ್ಯೆಯೂ ವಟ ಸಾವಿತ್ರಿ ವ್ರತ ಬಿಡದ ಹೆಂಗಳೆಯರು

ಪತಿಯ ಆಯಸ್ಸು ವೃದ್ಧಿಗಾಗಿ ಬಾಗಲಕೋಟೆಯಲ್ಲಿ ಕೊರೊನಾ ಸಂಕಷ್ಟದ ನಡುವೆಯೂ ಮಹಿಳೆಯರು ವಟ ಸಾವಿತ್ರಿ ವ್ರತವನ್ನು ಆಚರಿಸಿದರು. ಪತಿ- ಪತ್ನಿಯರ ನಡುವಿನ ಪವಿತ್ರ ಬಾಂದವ್ಯದ ಶ್ರೇಷ್ಠತೆಯನ್ನು ಬಿಂಬಿಸುವ, ಸಂಸಾರದೊಂದಿಗೆ ಪಾರಮಾರ್ಥಿಕ ಚಿಂತನೆಯನ್ನು ಬೋಧಿಸುವ ವಿಶಿಷ್ಠ ವ್ರತ ಇದಾಗಿದೆ.

Vijaya Karnataka Web 5 Jun 2020, 2:46 pm
ಬಾಗಲಕೋಟೆ: ತನಗೆ ಹಾಗೂ ಪತಿಗೆ ಆರೋಗ್ಯ, ದೀರ್ಘಾಯುಷ್ಯ ಲಭಿಸಲಿ, ಧನಧಾನ್ಯ ಹಾಗೂ ಮಕ್ಕಳು ಬಂಧು ಬಳಗದಿಂದ ತನ್ನ ಪ್ರಪಂಚ ಸವಿಸ್ತಾರ ಹಾಗೂ ಸಂಪನ್ನವಾಗಲಿ ಎಂದು ಕೊರೊನಾ ಸಂಕಷ್ಟದ ಮಧ್ಯೆಯೂ ಮಹಿಳೆಯರು ಸಾವಿತ್ರಿ ವ್ರತವನ್ನು ಪಾಲಿಸಿದ್ದಾರೆ. ಇಲ್ಲಿ ಪತಿಯ ಆಯುಷ್ಯ ವೃದ್ಧಿಗಾಗಿ ಪ್ರತಿ ವರ್ಷ ಪತ್ನಿಯರು ವಟ ಸಾವಿತ್ರಿ ವೃತವನ್ನು ಕೈಗೊಳ್ಳುತ್ತಾರೆ.
Vijaya Karnataka Web ವಟ ಸಾವಿತ್ರಿ ವ್ರತ ಬಿಡದ ಹೆಂಗಳೆಯರು


ಜಿಲ್ಲೆಯ ವೆಂಕಟಪೇಟೆಯ ವೆಂಕಟೇಶ್ವರ ದೇವಸ್ಥಾನದ ಅರಳಿ ಮರಕ್ಕೆ ಉಡಿತುಂಬಿ ಮಹಿಳೆಯರು ಕೊರೊನಾ ಸಂಕಷ್ಟದಲ್ಲಿಯೂ ವಿಶೇಷ ಪೂಜೆಯನ್ನು ಸಲ್ಲಿಸಿದರು. ಪತಿ ಪತ್ನಿಯರ ನಡುವಿನ ಪವಿತ್ರ ಬಾಂದವ್ಯದ ಶ್ರೇಷ್ಠತೆಯನ್ನು ಬಿಂಬಿಸುವ, ಸಂಸಾರದೊಂದಿಗೆ ಪಾರಮಾರ್ಥಿಕ ಚಿಂತನೆಯನ್ನು ಬೋಧಿಸುವ ವಿಶಿಷ್ಠ ವ್ರತ ಇದಾಗಿದೆ.
ಜಿಲ್ಲೆಯ ವಿವಿಧೆಡೆ ಶುಕ್ರವಾರ ವಟ ಸಾವಿತ್ರಿ ವ್ರತ ನಡೆದಿದ್ದು, ಹೆಂಗಳೆಯರಿಂದ ಅರಳಿ ಮರಕ್ಕೆ ಬಿಳಿದಾರ ಸುತ್ತಿ ಅರಿಸಿನ ಕುಂಕುಮ ಸಹಿತ ಉಡಿ ತುಂಬುವ ಪೂಜೆ ನಡೆಯಿತು.
ಆಲಕ್ಕೆ ಪೂಜಿಸಿ ವಟ ಸಾವಿತ್ರಿ ವೃತ ಆಚರಣೆ
ಹಿನ್ನಲೆ
ಸಾವಿತ್ರಿಯು ಸತ್ಯವಾನನ ಪ್ರಾಣಹರಣದ ನಂತರ ಯಮಧರ್ಮನೊಂದಿಗೆ ಮೂರು ದಿನಗಳ ವರೆಗೆ ಶಾಸ್ತ್ರ ಚರ್ಚೆ ಮಾಡಿದಳು. ಆಗ ಪ್ರಸನ್ನನಾದ ಯಮಧರ್ಮನು ಸತ್ಯವಾನನನ್ನು ಪುನಃ ಜೀವಂತಗೊಳಿಸಿದನು. ಈ ಚರ್ಚೆಯು ವಟ ವೃಕ್ಷದ (ಆಲದಮರ) ಕೆಳಗೆ ಆದುದರಿಂದ ವಟವೃಕ್ಷಕ್ಕೆ ಸಾವಿತ್ರಿಯ ಹೆಸರನ್ನು ಜೋಡಿಸಲಾಯಿತು. ಸಾವಿತ್ರಿಯಂತೆಯೇ ತಮ್ಮ ಪತಿಯ ಆಯುಷ್ಯವು ಹೆಚ್ಚಾಗಲಿ ಎಂದು ಸ್ತ್ರೀಯರು ಈ ವ್ರತವನ್ನು ಆರಂಭಿಸಿದರು. ಸಾವಿತ್ರಿಯೊಂದಿಗೆ ಬ್ರಹ್ಮನು ಈ ವ್ರತದ ಮುಖ್ಯ ದೇವತೆಯಾಗಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ