ಆ್ಯಪ್ನಗರ

ಸ್ಲಂ ನಿವಾಸಿಗಳೊಂದಿಗೆ ದೀಪಾವಳಿ ಆಚರಣೆ

ಬಾಗಲಕೋಟ: ಲಾಯನ್ಸ್‌ ಸಂಸ್ಥೆ ಅನೇಕ ಸಾಮಾಜಿಕ ಕಾರ್ಯಗಳೊಂದಿಗೆ ಜನರ ಜೀವನ ಮಟ್ಟವನ್ನ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಿಮ್ಮೆಲ್ಲರೊಂದಿಗೆ ಬೆರೆತು ಹಬ್ಬದ ಆಚರಣೆಯಲ್ಲಿ ತೊಡಗಿರುವುದು ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

Vijaya Karnataka 5 Nov 2018, 5:00 am
ಬಾಗಲಕೋಟ: ಲಾಯನ್ಸ್‌ ಸಂಸ್ಥೆ ಅನೇಕ ಸಾಮಾಜಿಕ ಕಾರ್ಯಗಳೊಂದಿಗೆ ಜನರ ಜೀವನ ಮಟ್ಟವನ್ನ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಿಮ್ಮೆಲ್ಲರೊಂದಿಗೆ ಬೆರೆತು ಹಬ್ಬದ ಆಚರಣೆಯಲ್ಲಿ ತೊಡಗಿರುವುದು ಮಾನವೀಯ ಮೌಲ್ಯಗಳಿಗೆ ಜೀವ ತುಂಬಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.
Vijaya Karnataka Web diwali celebration with slum residents
ಸ್ಲಂ ನಿವಾಸಿಗಳೊಂದಿಗೆ ದೀಪಾವಳಿ ಆಚರಣೆ


ನಗರದ ಲಾಯನ್ಸ್‌ ಕ್ಲಬ್‌ ವತಿಯಿಂದ ರೈಲ್ವೆ ನಿಲ್ದಾಣದ ಹತ್ತಿರದ ಅಲೆಮಾರಿ ಜನಾಂಗಕ್ಕೆ ದೀಪಾವಳಿ ಹಬ್ಬದ ನಿಮಿತ್ತ ಬಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಬಟ್ಟೆ ವಿತರಿಸಿ ಅವರು ಮಾತನಾಡಿದರು.

ಸಾವಿರಾರು ರೂಪಾಯಿ ಖರ್ಚು ಮಾಡಿ ಸದ್ದು ಗದ್ದಲ ಮೂಲಕ ಪರಿಸರ ಮಾಲಿನ್ಯಗೊಳಿಸುವದನ್ನು ಕಡಿಮೆಗೊಳಿಸಿ ಬಾಗಲಕೋಟ ಲಾಯನ್ಸ್‌ ಪರಿವಾರ ಸ್ಲಂ ನಿವಾಸಿಗಳ ಬಡಮಕ್ಕಳಿಗೆ ಹೊಸ ಬಟ್ಟೆ, ಸಿಹಿ ಹಂಚಿ ಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿರುವುದು ಶ್ಲಾಘನೀಯ ಎಂದರು.

ಲಾಯನ್ಸ್ಸ್‌ ಅಧ್ಯಕ್ಷ ಡಾ.ವಿಕಾಸ ದಡ್ಡೆನವರ, ಸಾವಿರಾರು ರೂ. ವ್ಯರ್ಥವಾಗಿ ಖರ್ಚು ಮಾಡುವ ಬದಲು ಅರ್ಥ ಬದ್ಧವಾಗಿ ಸರ್ವರು ಸುಖಿಯಾಗಿರೋಣ ಎಂದು ಎಲ್ಲ ಸದಸ್ಯರು ಅಂದಾಜು 75 ಸಾವಿರ ರೂ. ಸಂಗ್ರಹಿಸಿ 135 ಬಡ ಮಕ್ಕಳಿಗೆ ಬಟ್ಟೆ ನೀಡಿ ಅವರ ಮುಖದಲ್ಲಿ ಸಂತಸ ಕಾಣುವದು ಸಾರ್ಥಕ ಕಾರ್ಯ ಎಂದರು.

ನಗರಸಭೆ ಸದಸ್ಯೆ ಡಾ.ರೇಖಾ ಕಲಬುರ್ಗಿ, ಡಾ ಅರ್ಚನಾ ದಡ್ಡೇನವರ, ತೃಪ್ತಿ ದರಬಾರ, ವಿನಿತಾ ಕಲಬುರ್ಗಿ, ಎಂ.ಎಸ್‌.ಜಿಗಜಿನ್ನಿ, ಮಹೇಶ ದರಬಾರ, ಬಾಪುರಾವ ಬುರ್ಲಿ, ಜಯಪ್ರಕಾಶ ಬೆಂಡಿಗೇರಿ, ಚಂದ್ರಶೇಖರ್‌ ಶೆಟ್ಟಿ, ವೈಜನಾಥ ಪಾಟೀಲ, ರಾಜೇಶ ಗುಜ್ಜರ, ಪ್ರಮೋದ ಶೇಠ್‌, ಸುನೀಲ ಕಲಬುರ್ಗಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ