ಕಲಾದಗಿ: ನಮ್ಮೆಲ್ಲರ ಸಂಕಷ್ಟಗಳ ನಿವಾರಣೆಗೆ ಲೋಕ ಕಲ್ಯಾಣಾರ್ಥಕ್ಕಾಗಿ ಬರುವ ನವೆಂಬರ್ 19 ರಂದು ಆಯೋಜಿಸಿರುವ ಜಗತ್ ರಕ್ಷ ಕ ಶ್ರೀನಿವಾಸ ದೇವರ ಕಲ್ಯಾಣೋತ್ಸವವನ್ನು ಶ್ರದ್ಧಾಭಕ್ತಿಯಿಂದ ಜವಾಬ್ದಾರಿ ಹೊತ್ತುಕೊಳ್ಳುವುದರ ಮೂಲಕ ಯಶಸ್ವಿಗೊಳಿಸಬೇಕೆಂದು ಕೋರುವುದರೊಂದಿಗೆ ಹಿರಿಯ ಮುಖಂಡ ಖಜ್ಜಿಡೋಣಿಯ ಜಿ.ವಿ.ಮಂಟೂರ ಕಲ್ಯಾಣೋತ್ಸವ ಸೇವೆಗೆಂದು ತಾವು 1ಲಕ್ಷ ರೂ. ದೇಣಿಗೆ ಕೊಡುವುದಾಗಿ ಘೋಷಿಸಿದರು.
ಗ್ರಾಮದ ಹಣ್ಣುಬೆಳೆಗಾರರ ಸಂಘದ ಆವರಣದಲ್ಲಿ ನಡೆದ ಆಸುಪಾಸಿನ 12 ಗ್ರಾಮಗಳ ಪ್ರಮುಖರು ಪಾಲ್ಗೊಂಡಿದ್ದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸಾವಿರಾರು ಜನ ಸೇರಲಿರುವ ಬೃಹತ್ ಪ್ರಮಾಣದ ಕಾರ್ಯಕ್ರಮದಲ್ಲಿ ಸ್ವಲ್ಪವೂ ವ್ಯತ್ಯಾಸವಾಗದಂತೆ ಎಲ್ಲರು ಸೇವೆ ಮಾಡಬೇಕೆಂದು ಕೋರಿದರು.
ಹನುಮಂತಗೌಡ ಬಿರಾದಾರಪಾಟೀಲ ಮಾತನಾಡಿ ರಚಿಸಿರುವ ಸಮಿತಿಯಲ್ಲಿರುವವರು ತಮ್ಮ ಜವಾಬ್ದಾರಿಗಳನ್ನು ಸೇವಾ ಮನೋಭಾವದಿಂದ ನಿರ್ವಹಿಸಬೇಕೆಂದು ಮನವಿ ಮಾಡಿ, ಅಗತ್ಯ ಸಲಹೆ ಸೂಚನೆ ನೀಡಿದರು.
ಸಮಿತಿಗಳ ರಚನೆ: ಇದಕ್ಕೂ ಮೊದಲು 10 ಕ್ಕೂ ಅಧಿಕ ನಾನಾ ಸಮಿತಿಗಳನ್ನು ರಚಿಸಲಾಯಿತು.
ಮುಖಂಡರಾದ ಈರಪ್ಪ ಅರಕೇರಿ, ಸಂಗಣ್ಣ ಮುದೋಳ, ಕೆ.ಎಲ್.ಬಿಲಕೇರಿ, ವಿ.ಜಿ.ದೇಶಪಾಂಡೆ, ಹನುಮಂತ ಅರಕೇರಿ, ನಿಂಗಪ್ಪ ಅರಕೇರಿ, ವೆಂಕಣ್ಣ ಬಿರಾದಾರ ಪಾಟೀಲ, ಕೆ.ಆರ್.ಶಿಲ್ಪಿ, ಎಸ್.ಎ.ಹೊಸೂರ, ಎಂ.ಸಿ.ಅಂಗಡಿ, ರಾಚಯ್ಯಸ್ವಾಮಿ ಬುದ್ನಿಮಠ, ಅಶೋಕ ಪಾಟೀಲ, ಯಲ್ಲಪ್ಪ ಪೂಜಾರಿ, ಬಾಬು ಉಮತಾರ, ವೆಂಕಣ್ಣ ಬಿಲಕೇರಿ, ಬಾಲಚಂದ್ರ ವಾಸನದ, ಲಕ್ಷ ್ಮಣ ಮೂಲಿಮನಿ, ವೆಂಕಣ್ಣ ದ್ಯಾವನಗೌಡರ, ಈರಪ್ಪ ವೆಂಕಾರೆಡ್ಡಿ, ಅಜಯ ಕುಲಕರ್ಣಿ ಮುಂತಾದವರು ಇದ್ದರು.