ಬಾಗಲಕೋಟೆ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಕೆ.ರಾಜೇಂದ್ರ ಸೋಮವಾರ ಅಧಿಕಾರ ವಹಿಸಿಕೊಂಡರು. ಈ ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು.
ಜಿಲ್ಲಾಧಿಕಾರಿ ಹುದ್ದೆಯ ಪ್ರಭಾರ ವಹಿಸಿಕೊಂಡ ಜಿಪಂ ಸಿಇಒ ಮೊಹಮ್ಮದ ಇಕ್ರಂ ಶರೀಪ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ಇದೇ ಸಂದರ್ಭದಲ್ಲಿಎಸ್ಪಿ ಲೋಕೇಶ ಜಗಲಾಸರ, ಐಎಎಸ್ ಅಧಿಕಾರಿ ಗರಿಮಾ ಪಂವಾರ್ ಶುಭ ಕೋರಿದರು.
ಕಂದಾಯ ಗ್ರಾಮಗಳ ಸೃಜನೆಯ ವಿಶೇಷ ಕೋಶದ ನಿರ್ದೇಶಕರು ಹಾಗೂ ಕಂದಾಯ ಇಲಾಖೆ ಪದನಿಮಿತ್ತ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2010ರ ಕರ್ನಾಟಕ ಬ್ಯಾಚ್ನ ಐಎಎಸ್ ಬ್ಯಾಚ್ ಅಧಿಕಾರಿಯಾಗಿರುವ ಅವರು ರಾಮನಗರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪಶುವೈದ್ಯ ಶಾಸ್ತ್ರದಲ್ಲಿಮಾಸ್ಟರ್ ಪದವಿ ಪಡೆದಿರುವ ಇವರು ಭಾರತೀಯ ಸೇನೆಯಲ್ಲಿ1993ರಿಂದ 1998ರ ವರೆಗೆ ಕ್ಯಾಪ್ಟನ್ ಆಗಿ, 1998 ರಿಂದ 1999ರ ವರೆಗೆ ಸಹ ಪ್ರಾಧ್ಯಾಪಕರಾಗಿ ಪಶು ವೈದ್ಯಕೀಯ ಕಾಲೇಜಿನಲ್ಲಿಕಾರ್ಯನಿರ್ವಹಿಸಿದ್ದಾರೆ. 2006 ರಿಂದ 2008ರ ವರಗೆ ಹೊಸಪೇಟೆ 2009 ರಿಂದ 2011ರ ವರೆಗೆ ಜಮಖಂಡಿಯ ಉಪವಿಭಾಗಾಧಿಕಾರಿಯಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಮುಖ್ಯ ಆಡಳಿತಾಧಿಕಾರಿ, ಕೆಎಸ್ಡಿಬಿಯ ಜಂಟಿ ಆಯುಕ್ತರಾಗಿ, ಕೆಇಪಿಸಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಹುದ್ದೆಯ ಪ್ರಭಾರ ವಹಿಸಿಕೊಂಡ ಜಿಪಂ ಸಿಇಒ ಮೊಹಮ್ಮದ ಇಕ್ರಂ ಶರೀಪ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ಇದೇ ಸಂದರ್ಭದಲ್ಲಿಎಸ್ಪಿ ಲೋಕೇಶ ಜಗಲಾಸರ, ಐಎಎಸ್ ಅಧಿಕಾರಿ ಗರಿಮಾ ಪಂವಾರ್ ಶುಭ ಕೋರಿದರು.
ಕಂದಾಯ ಗ್ರಾಮಗಳ ಸೃಜನೆಯ ವಿಶೇಷ ಕೋಶದ ನಿರ್ದೇಶಕರು ಹಾಗೂ ಕಂದಾಯ ಇಲಾಖೆ ಪದನಿಮಿತ್ತ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 2010ರ ಕರ್ನಾಟಕ ಬ್ಯಾಚ್ನ ಐಎಎಸ್ ಬ್ಯಾಚ್ ಅಧಿಕಾರಿಯಾಗಿರುವ ಅವರು ರಾಮನಗರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪಶುವೈದ್ಯ ಶಾಸ್ತ್ರದಲ್ಲಿಮಾಸ್ಟರ್ ಪದವಿ ಪಡೆದಿರುವ ಇವರು ಭಾರತೀಯ ಸೇನೆಯಲ್ಲಿ1993ರಿಂದ 1998ರ ವರೆಗೆ ಕ್ಯಾಪ್ಟನ್ ಆಗಿ, 1998 ರಿಂದ 1999ರ ವರೆಗೆ ಸಹ ಪ್ರಾಧ್ಯಾಪಕರಾಗಿ ಪಶು ವೈದ್ಯಕೀಯ ಕಾಲೇಜಿನಲ್ಲಿಕಾರ್ಯನಿರ್ವಹಿಸಿದ್ದಾರೆ. 2006 ರಿಂದ 2008ರ ವರಗೆ ಹೊಸಪೇಟೆ 2009 ರಿಂದ 2011ರ ವರೆಗೆ ಜಮಖಂಡಿಯ ಉಪವಿಭಾಗಾಧಿಕಾರಿಯಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿಮುಖ್ಯ ಆಡಳಿತಾಧಿಕಾರಿ, ಕೆಎಸ್ಡಿಬಿಯ ಜಂಟಿ ಆಯುಕ್ತರಾಗಿ, ಕೆಇಪಿಸಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.