ಆ್ಯಪ್ನಗರ

ಇಂದು ಸಚಿವರಿಂದ ಬರ ವೀಕ್ಷಣೆ

ಬಾಗಲಕೋಟ: ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಜ.8 ರಂದು ಜಿಲ್ಲೆಯ ಬರಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಲಿದೆ.

Vijaya Karnataka 8 Jan 2019, 5:00 am
ಬಾಗಲಕೋಟ: ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ಜ.8 ರಂದು ಜಿಲ್ಲೆಯ ಬರಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಲಿದೆ.
Vijaya Karnataka Web drought view by minister today
ಇಂದು ಸಚಿವರಿಂದ ಬರ ವೀಕ್ಷಣೆ


ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಸಚಿವರಾದ ಸತೀಶ ಜಾರಕಿಹೊಳಿ, ಜಮೀರ್‌ ಅಹಮದ್‌ ಖಾನ್‌, ಎಂ.ಸಿ.ಮನಗೂಳಿ, ಸಿ.ಎಸ್‌.ಶಿವಳ್ಳಿ, ಎಂ.ಬಿ.ಪಾಟೀಲ, ಆರ್‌.ಬಿ.ತಿಮ್ಮಾಪುರ ಸಮಿತಿ ಸದಸ್ಯರಾಗಿದ್ದಾರೆ. ವಿಜಯಪುರದಿಂದ ಮಧ್ಯಾಹ್ನ 12.20ಕ್ಕೆ ಬೀಳಗಿ ತಾಲೂಕಿನ ಬಾಡಗಂಡಿಗೆ ತಂಡ ಆಗಮಿಸಲಿದೆ. ಬಾಡಗಂಡಿಯಲ್ಲಿ ಸೂರ್ಯಕಾಂತಿ ಹಾಗೂ ಹಿಂಗಾರಿ ಜೋಳ ಹಾಳಿಗೊಳಗಾದ ಕ್ಷೇತ್ರ ವೀಕ್ಷಿಸಲಿದೆ. ನಂತರ ಬಹುಗ್ರಾಮ ಕುಡಿವ ನೀರಿನ ಯೋಜನೆ ಪರಿಶೀಲಿಸಿ, 1 ಗಂಟೆಗೆ ಸುನಗ ಕ್ರಾಸ್‌ನಲ್ಲಿ ಮೇವು ಬೆಳೆಯ ತಾಕು ವೀಕ್ಷಿಸಲಿದೆ. ನರೇಗಾ ಯೋಜನೆಯಡಿ ಸುಬೇದಾರ್‌ ಕೆರೆ ಹೂಳೆತ್ತುವ ಕಾಮಗಾರಿ, ಬಾಳೆ ಕ್ಷೇತ್ರ ವೀಕ್ಷಣೆ ನಡೆಸಲಿದೆ. ಮಧ್ಯಾಹ್ನ 1.45ಕ್ಕೆ ಅನಗವಾಡಿಯಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ, ಗದ್ದನಕೇರಿಯಲ್ಲಿ ಅರಣ್ಯ ಇಲಾಖೆ ಕಾಮಗಾರಿಯನ್ನು ಸಚಿವರು ಪರಿಶೀಲಿಸಲಿದ್ದಾರೆ. ಮಧ್ಯಾಹ್ನ 2 ರಿಂದ 2.30ರವರೆಗೆ ಸಾರ್ವಜನಿಕರನ್ನು ಭೇಟಿ ಮಾಡಲಿದ್ದಾರೆ. ಮಧ್ಯಾಹ್ನ 3ಕ್ಕೆ ಜಿಪಂ ಸಭಾ ಭವನದಲ್ಲಿ ಬರ ನಿರ್ವಹಣೆ ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ