ಆ್ಯಪ್ನಗರ

ಸುರಿಯುವ ಮಳೆಯಲ್ಲೇ ಬಾಗಲಕೋಟೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ

ನೆರೆ ಪೀಡಿತ ಪ್ರದೇಶಗಳಾದ ಕರ್ಲಕೊಪ್ಪ, ಹಾಗನೂರ ಗ್ರಾಮಗಳಲ್ಲಿ ಸಿದ್ದರಾಮಯ್ಯ ಪರಿಶೀಲನೆ ನಡೆಸಿದರು. ಕರ್ಲಕೊಪ್ಪ ಗ್ರಾಮದಲ್ಲಿ ಸಿದ್ದರಾಮಯ್ಯ ಸಂತ್ರಸ್ಥರ ಸಮಸ್ಯೆ ಆಲಿಸುತ್ತಿದ್ದಾಗ ಜೋರಾಗಿ ಸುರಿದ ಮಳೆ ಸಭೆಗೆ ಅಡ್ಡಿಪಡಿಸಿದ ಘಟನೆ ನಡೆಯಿತು.

Vijaya Karnataka Web 22 Oct 2019, 5:16 pm
ಬಾಗಲಕೋಟೆ: ಮಳೆ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಕ್ಷೇತ್ರ ಬಾದಾಮಿ ಪ್ರವಾಸ ಮಾಡಿದರು. ಜೋರಾಗಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದ ಸಿದ್ದರಾಮಯ್ಯ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಕಾರ್ಯ ಮುಂದುವರೆಸಿದರು.
Vijaya Karnataka Web SiddaramaiahInBadami


ನೆರೆ ಪೀಡಿತ ಪ್ರದೇಶಗಳಾದ ಕರ್ಲಕೊಪ್ಪ, ಹಾಗನೂರ ಗ್ರಾಮಗಳಲ್ಲಿ ಸಿದ್ದರಾಮಯ್ಯ ಪರಿಶೀಲನೆ ನಡೆಸಿದರು. ಕರ್ಲಕೊಪ್ಪ ಗ್ರಾಮದಲ್ಲಿ ಸಿದ್ದರಾಮಯ್ಯ ಸಂತ್ರಸ್ಥರ ಸಮಸ್ಯೆ ಆಲಿಸುತ್ತಿದ್ದಾಗ ಜೋರಾಗಿ ಸುರಿದ ಮಳೆ ಸಭೆಗೆ ಅಡ್ಡಿಪಡಿಸಿದ ಘಟನೆ ನಡೆಯಿತು.

ಈ ಸಮರ್ಪಕವಾಗಿ ಸರ್ವೆ ಮಾಡದ ಅಧಿಕಾರಿಗಳ ವಿರುದ್ದ ಅಸಮಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಸಹಾಯಕ ಆಯುಕ್ತ ಗಂಗಪ್ಪ ಮತ್ತು ತಹಶೀಲ್ದಾರ ಮಲ್ಲಿಕಾರ್ಜುನರನ್ನ ತರಾಟೆಗೆ ತೆಗೆದುಕೊಂಡರು. ‘ಬಿದ್ದ ಮನೆ ಸದಸ್ಯರಿಗೆ ಪರಿಹಾರ ನೀಡದಿದ್ರೆ ಅವರೇನು ನಾಮ ಹಾಕೋಬೇಕಾ?’ ಎಂಬುದಾಗಿ ಸಿದ್ದರಾಮಯ್ಯ ಹರಿಹಾಯ್ದರು.

ಪರಿಹಾರ ವಿಚಾರದಲ್ಲಿ ನಾನು ಹೇಳಿದ್ದಕ್ಕೆಲ್ಲಾ ಅಸೆಂಬ್ಲಿಯಲ್ಲಿ ಒಪ್ಪಿಕೊಂಡಿದ್ದಾರೆ. ನೀವು ಕೊಡಲ್ಲ ಅಂದ್ರೆ ಹೇಗೆ? ಎಂದು ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡರು. ಇತ್ತ ಗ್ರಾಮದಲ್ಲಿ ಸರಾಯಿ ಅಂಗಡಿ ಬಂದ್ ಮಾಡುವಂತೆ ಮಹಿಳೆಯರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು. ನಂತರ ಮಳೆ ಮಧ್ಯೆಯೇ ಛತ್ರಿಯ ಸಹಾಯದಿಂದ ಕಾರು ಏರಿ ಸಿದ್ದರಾಮಯ್ಯ ಹೊರಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ