ಆ್ಯಪ್ನಗರ

ರಂಜಾನ್‌ ಆಚರಣೆ, ಸಮೃದ್ಧಿಗೆ ಪ್ರಾರ್ಥನೆ

ಬಾಗಲಕೋಟ : ಶಾಂತಿ ಹಾಗೂ ಪ್ರಾರ್ಥನೆಯ ಮಹತ್ವವವುಳ್ಳ ರಂಜಾನ್‌ ಹಬ್ಬವನ್ನು ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

Vijaya Karnataka 6 Jun 2019, 5:00 am
ಬಾಗಲಕೋಟ : ಶಾಂತಿ ಹಾಗೂ ಪ್ರಾರ್ಥನೆಯ ಮಹತ್ವವವುಳ್ಳ ರಂಜಾನ್‌ ಹಬ್ಬವನ್ನು ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
Vijaya Karnataka Web ed celebration prayer for prosperity
ರಂಜಾನ್‌ ಆಚರಣೆ, ಸಮೃದ್ಧಿಗೆ ಪ್ರಾರ್ಥನೆ


ಮುಸ್ಲಿಂ ಸಮುದಾಯದವರು ಮಂಗಳವಾರ ಸಂಜೆ ಚಂದ್ರ ದರ್ಶನವಾಗುತ್ತಿದ್ದಂತೆ ಬುಧವಾರ ರಂಜಾನ್‌ ಆಚರಣೆಗಾಗಿ ನಿರ್ಧಾರ ಕೈಗೊಂಡರು. ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ ನಡೆಯಿತು. ಮಧ್ಯಾಹ್ನ ವಿಶೇಷ ಖಾದ್ಯವಾದ ಸುರಕುರಮಾ ಸವಿದು ಮುಸ್ಲಿಂ ಬಾಂಧವರು ಹಬ್ಬ ಆಚರಿಸಿದರು.

ಹಳೆಯ ಬಾಗಲಕೋಟದ ಅಂಜುಮನ್‌ ಶಾಲೆ ಮೈದಾನ, ನವನಗರದ ಈದ್ಗಾ ಮೈದಾನಗಳಲ್ಲಿ ಸಾವಿರಾರು ಜನರು ಪ್ರಾರ್ಥನೆ ಸಲ್ಲಿಸಿದರು. ಮೌಲ್ವಿಗಳು ಶಾಂತಿ, ಸಮೃದ್ಧಿ, ಉತ್ತಮ ಮಳೆ ಹಾಗೂ ಬೆಳೆಗಾಗಿ ಬೇಡಿಕೊಂಡರು. ಪ್ರಾರ್ಥನೆಗೂ ಮುನ್ನ ಬಡವರಿಗೆ ದಾನ (ಜಕಾತ್‌) ನೀಡುವ ಮೂಲಕ ಎಲ್ಲರೂ ಹಬ್ಬ ಆಚರಿಸಲಿ ಎಂಬ ಸಂದೇಶ ಸಾರಲಾಯಿತು. ಬಡವರ ಮನೆಗಳಿಗೆ ತೆರಳಿದ ಜನರು ಬಟ್ಟೆ, ಹಣ ನೀಡಿ ಹಬ್ಬದ ಶುಭಾಶಯ ಕೋರಿದರು. ಪ್ರಾರ್ಥನೆ ನಂತರ ನಾನಾ ಧರ್ಮೀಯರಿಗೆ ಶುಭ ಕೋರಿದ ಮುಸ್ಲಿಂ ಸಮುದಾಯದವರು ಅಪ್ಪುಗೆಯ ಮೂಲಕ ಈದ್‌ ಮುಬಾರಕ್‌ ಎಂದರು.

ಹಳೆಯ ಬಾಗಲಕೋಟದ ಪಂಕಾ ಮಸೀದಿ ಪ್ರದೇಶದಲ್ಲಿ ಹಬ್ಬದ ಸಂಭ್ರಮವಿತ್ತು. ಅಂಗಡಿಗಳಲ್ಲಿ ಅತ್ತರ್‌, ಶ್ಯಾವಿಗೆ, ಬಟ್ಟೆಗಳು, ಗೃಹಾಲಂಕಾರ ವಸ್ತುಗಳ ಮಾರಾಟ ಜೋರಾಗಿತ್ತು. ಪುರುಷರು, ಮಹಿಳೆಯರು ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಧ್ಯಾಹ್ನ ಮನೆ ಮನೆಗಳಲ್ಲಿ ಶ್ಯಾವಿಗೆಯ ವಿಶೇಷ ಖಾದ್ಯ ಸುರಕುರಮಾ ಸಿದ್ಧಪಡಿಸಲಾಯಿತು. ಬಂಧುಗಳು, ಸ್ನೇಹಿತರನ್ನು ಆಹ್ವಾನಿಸಿ ಔತಣಕೂಟ ಆಯೋಜಿಸಲಾಗಿತ್ತು. ಸಂಜೆ ಇಫ್ತಾರ್‌ ಕೂಟದ ಮೂಲಕ ವಿಶೇಷ ಖಾದ್ಯಗಳ ಔತಣಕೂಟ ನಡೆಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ