ಆ್ಯಪ್ನಗರ

ವಿದ್ಯುತ್‌ ತಂತಿ ತುಳಿದು ಇಬ್ಬರ ಸಾವು

ಸಾವಳಗಿ: ಸಮೀಪದ ಗೋಠೆ ಗ್ರಾಮದ ತೊಗರಿ ಹೊಲದಲ್ಲಿವಿದ್ಯುತ್‌ ತಂತಿ ತುಳಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.

Vijaya Karnataka 29 Oct 2019, 5:00 am
Vijaya Karnataka Web electric wire crashes killing two
ವಿದ್ಯುತ್‌ ತಂತಿ ತುಳಿದು ಇಬ್ಬರ ಸಾವು
ಸಾವಳಗಿ: ಸಮೀಪದ ಗೋಠೆ ಗ್ರಾಮದ ತೊಗರಿ ಹೊಲದಲ್ಲಿವಿದ್ಯುತ್‌ ತಂತಿ ತುಳಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಗೋಠೆ ಗ್ರಾಮದ ಸಂತೋಷ ಅಶೋಕಗೌಡ ಪಾಟೀಲ (28), ಕಳಬೀಳಗಿ ಗ್ರಾಮದ ಬಾಳಾಸಾಹೇಬ ಸಂಗಪ್ಪ ಕಟಾವೆ (20) ಮೃತರು. ತೊಗರಿ ಔಷಧ ಸಿಂಪರಣೆ ಮಾಡಲು ತೆರಳಿದ್ದಾಗ ನೆಲದಲ್ಲಿಬಿದ್ದಿದ್ದ ವಿದ್ಯುತ ತಂತಿ ತುಳಿದು ಈ ದುರ್ಘಟನೆ ನಡೆದಿದೆ.

ಕಂಬದಿಂದ ಜೋತು ಬಿದ್ದಿದ್ದ ವಿದ್ಯುತ ತಂತಿಗಳನ್ನು ದುರಸ್ತಿ ಮಾಡುವಂತೆ ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಹಲವು ಸಲ ಮನವಿ ಮಾಡಿದ್ದರೂ ಹೆಸ್ಕಾಂ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಿರಲಿಲ್ಲ. ಇದರಿಂದ ಈಗ ಇಬ್ಬರು ಯುವಕರು ಸಾವನ್ನಪ್ಪಬೇಕಾುತು ಎಂದು ಸ್ಥಳೀಯರು ಹಾಗೂ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದರು. ದೀಪಾವಳಿ ಆಚರಿಸಬೇಕಾಗಿದ್ದ ಕುಟುಂಬಗಳಲ್ಲಿಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು.

' ಒಳ್ಳೆಯ ರೀತಿಯಲ್ಲಿಶಾಲೆ ಕಲಿ ಎಂದು ಬುದ್ದಿ ಹೆಳುತ್ತಾ, ಶಾಲೆ ಖರ್ಚುಯೆಲ್ಲಾನಮ್ಮ ಅಣ್ಣನೆ ನೊಡಿಕೊಳ್ಳುತ್ತಿದ್ದ, ದೀಪಾವಳಿ ಹಬ್ಬದಲ್ಲಿಮನೆಗೆ ಹೊಸದೊಂದು ಬೈಕ ತರುಣು ಅಂತಾ ಹೇಳಿದ್ದ ಇಗಾ ಅವನೇ ಇಲ್ರೀ ' ಎಂದು ಬಾಳಾ ಸಾಹೇಬ ಸಹೋದರ ಕಲ್ಮೇಶ ಕಟಾವೆ ಕಣ್ಣೀರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ