ಆ್ಯಪ್ನಗರ

ನೌಕರರ ಸಂಘದ ಚುನಾವಣೆ ಬಳ್ಳಾರಿ ಬೆಂಬಲಿಗರ ಮೇಲುಗೈ

ಬಾಗಲಕೋಟ : ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ 7 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ನಾನಾ ಇಲಾಖೆಗಳ ನೌಕರರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.

Vijaya Karnataka 14 Jun 2019, 5:00 am
ಬಾಗಲಕೋಟ : ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ 7 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ನಾನಾ ಇಲಾಖೆಗಳ ನೌಕರರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
Vijaya Karnataka Web employees association election bellary supporters dominate
ನೌಕರರ ಸಂಘದ ಚುನಾವಣೆ ಬಳ್ಳಾರಿ ಬೆಂಬಲಿಗರ ಮೇಲುಗೈ


ಜಿಲ್ಲೆಯಲ್ಲಿ ನೌಕರರ ಸಂಘದ ಚುನಾವಣೆಯ ಭರಾಟೆಯಿಂದ ನಡೆದಿದ್ದು, 61 ಸ್ಥಾನಗಳ ಪೈಕಿ 54 ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಬಾಕಿ ಉಳಿದ 7 ಸ್ಥಾನಗಳಿಗೆ ಮಾತ್ರ ಗುರುವಾರ ಚುನಾವಣೆ ನಡೆದಿದ್ದು, ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಅವರ ಬೆಂಬಲಿಗರೇ ಮುನ್ನಡೆ ಸಾಧಿಸಿದ್ದಾರೆ ಎನ್ನಲಾಗಿದೆ.

ಚುನಾವಣೆಯ ಮೊದಲ ಹಂತ ಇದೀಗ ಮುಗಿದಿದ್ದು, ಇನ್ನೂ ಎರಡು ಹಂತಗಳಲ್ಲಿ ತಾಲೂಕು ಹಾಗೂ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದೆ. ಜಿಲ್ಲೆಯಲ್ಲಿ 62 ಇಲಾಖೆಗಳ ಪದಾಧಿಕಾರಿಗಳು ಹಾಗೂ 8 ತಾಲೂಕುಗಳ ಅಧ್ಯಕ್ಷರು ಸೇರಿ 70 ಮತಗಳಿರುತ್ತವೆ. ಜೂ.27 ರಂದು ತಾಲೂಕು ಘಟಕದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್‌ ಸದಸ್ಯರ ಚುನಾವಣೆ ನಡೆಯಲಿದೆ. ನಂತರ ಜು.11 ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಪ್ರತಿ ತಾಲೂಕಿನಿಂದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್‌ ಸದಸ್ಯರ ಪೈಕಿ ಒಬ್ಬರು ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಮತ ಚಲಾಯಿಸಲು ಅವಕಾಶವಿರುತ್ತದೆ. ನೂತನ ಪದಾಧಿಕಾರಿಗಳು 5 ವರ್ಷದ ಅಧಿಕಾರಾವಧಿ ಹೊಂದಿರುತ್ತಾರೆ.

ಈ ಬಾರಿ ಬಹುತೇಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿರುವುದರಿಂದ ನೌಕರರ ಬಣಗಳಲ್ಲಿ ಭಾರಿ ಪೈಪೋಟಿ ಕಂಡುಬಂದಿಲ್ಲ. 7 ಇಲಾಖೆಗಳ ಸ್ಥಾನಗಳ ಆಯ್ಕೆಗಾಗಿ ಪೈಪೋಟಿಯಿದ್ದುದರಿಂದ ಅವಿರೋಧ ಆಯ್ಕೆ ನಡೆದಿರಲಿಲ್ಲ. ಹೀಗಾಗಿ ಚುನಾವಣೆ ನಡೆಸುವುದು ಅನಿವಾರ್ಯವಾಗಿತ್ತು.

ನೂತನ ಪದಾಧಿಕಾರಿಗಳು
ಮಲ್ಲಪ್ಪ ದಾಸರ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ), ಹಣಮಪ್ಪ ಜಾನಣ್ಣವರ (ಯುವಜನ ಸೇವೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ), ಎಚ್‌.ಎಂ.ರಾಂಪೂರ, ವಿಠ್ಠಲ ವಾಲೀಕಾರ (ಪ್ರೌಢಶಾಲೆ ವಿಭಾಗ), ಸರಕಾರಿ ಕಿರಿಯ ಕಾಲೇಜ್‌ (ಚಂದ್ರಾಮಪ್ಪ ಆರ್‌.ಕೋಲಕಾರ), ಮುದ್ರಾಂಕಗಳ ನೋಂದಣಿ, ಸಣ್ಣ ಉಳಿತಾಯ ಇಲಾಖೆ, ಔಷಧ ನಿಯಂತ್ರಣ ಇಲಾಖೆ (ಮಹಮ್ಮದ್‌ ಬಿಜಲಿ), ಕಾರ್ಮಿಕ, ಕಾರ್ಖಾನೆಗಳು, ಬಾಯ್ಲರ್‌ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ (ರಮೇಶ ಹೆಗಡಿ) ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜೆ.ಕೆ.ಅಲದಿ ತಿಳಿಸಿದ್ದಾರೆ. ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ಗುರುವಾರ ಮತ ಎಣಿಕೆ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ