ಆ್ಯಪ್ನಗರ

ತೋವಿವಿ ವಿದ್ಯಾರ್ಥಿಗಳ ಮುಷ್ಕರ 6ನೇ ದಿನಕ್ಕೆ

ಬಾಗಲಕೋಟೆ: ಕೇಂದ್ರ, ರಾಜ್ಯ ಸರಕಾರದ ಹುದ್ದೆಗಳ ನೇಮಕಾತಿಯಲ್ಲಿಅವಕಾಶ ನೀಡುವಂತೆ ಒತ್ತಾಯಿಸಿ ತೋಟಗಾರಿಕೆ ವಿವಿ ವಿದ್ಯಾರ್ಥಿಗಳು ನಡೆಸುತ್ತಿರುವ ಧರಣಿ 6ನೇ ದಿನಕ್ಕೆ ಕಾಲಿರಿಸಿದೆ.

Vijaya Karnataka 17 Nov 2019, 5:00 am
ಬಾಗಲಕೋಟೆ: ಕೇಂದ್ರ, ರಾಜ್ಯ ಸರಕಾರದ ಹುದ್ದೆಗಳ ನೇಮಕಾತಿಯಲ್ಲಿಅವಕಾಶ ನೀಡುವಂತೆ ಒತ್ತಾಯಿಸಿ ತೋಟಗಾರಿಕೆ ವಿವಿ ವಿದ್ಯಾರ್ಥಿಗಳು ನಡೆಸುತ್ತಿರುವ ಧರಣಿ 6ನೇ ದಿನಕ್ಕೆ ಕಾಲಿರಿಸಿದೆ.
Vijaya Karnataka Web employees of private educational institutions protest
ತೋವಿವಿ ವಿದ್ಯಾರ್ಥಿಗಳ ಮುಷ್ಕರ 6ನೇ ದಿನಕ್ಕೆ


ತೋಟಗಾರಿಕೆ ವಿವಿ ಆವರಣದಲ್ಲಿಮುಷ್ಕರ ಆರಂಭಿಸಿರುವ ವಿದ್ಯಾರ್ಥಿಗಳು ಶನಿವಾರವೂ ಧರಣಿ ನಡೆಸಿದರು. ಅನಿರ್ದಿಷ್ಟ ಮುಷ್ಕರ ಕೈಗೊಂಡಿರುವ ವಿದ್ಯಾರ್ಥಿಗಳು ಕೇಂದ್ರ, ರಾಜ್ಯ ಸರಕಾರದಿಂದ ನೇಮಕಾತಿ ನಿಯಮಗಳನ್ನು ತಿದ್ದುಪಡಿಗೊಳಿಸಿ ತೋಟಗಾರಿಕೆ ಪದವೀಧರರಿಗೆ ಉದ್ಯೋಗದಲ್ಲಿಆದ್ಯತೆ ಒದಗಿಸುವಂತೆ ಒತ್ತಾಯಿಸಿದ್ದಾರೆ. ಈವರೆಗೂ ಸರಕಾರಗಳಿಂದ ಸ್ಪಂದನೆ ದೊರೆಯದ ಕಾರಣ ಮುಷ್ಕರ ಮುಂದುವರಿದಿದೆ.

ಧರಣಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಕುಲಪತಿ ಡಾ.ಕೆ.ಎಂ.ಇಂದಿರೇಶ್‌ ಧರಣಿ ಕೈಬಿಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿಕೊಂಡರು. ಆದೇಶ ಹೊರಡುವವರೆಗೂ ಮುಷ್ಕರ ವಾಪಸ್‌ ಪಡೆಯುವುದಿಲ್ಲಎಂದು ವಿದ್ಯಾರ್ಥಿಗಳು ಹೇಳಿದರು. ಧರಣಿಯಲ್ಲಿನೂರಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಕಳೆದ 6 ದಿನಗಳಿಂದ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿರುವುದರಿಂದ ವಿವಿ ತರಗತಿಗಳಲ್ಲಿಬೋಧನೆ ನಡೆಯುತ್ತಿಲ್ಲ. ಧರಣಿ ಸ್ಥಳದಲ್ಲಿಪೊಲೀಸರನ್ನು ನಿಯೋಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ