ಆ್ಯಪ್ನಗರ

ಸಿದ್ದರಾಮಯ್ಯ ಮತಾಂಧ ಹೇಳಿಕೆ: ಈಶ್ವರಪ್ಪ ಸಮರ್ಥನೆ

ಕಣ್ಣೆದುರು 21 ಜನ ಯುವಕರ ಕಗ್ಗೊಲೆಯಾಯ್ತು. ಆಗ ಸಿದ್ದರಾಮಯ್ಯ ಕೊಲೆಗಡುಕರ ವಿರುದ್ಧ ಕ್ರಮಕೈಗೊಂಡಿದ್ರೆ ಸಿದ್ದರಾಮಯ್ಯರನ್ನು ಸರಿಯಾದ ಮುಖ್ಯಮಂತ್ರಿ ಎಂದು ಒಪ್ಪುತ್ತಿದ್ದೆ.

Vijaya Karnataka Web 10 Nov 2018, 11:33 am
ಬಾಗಲಕೋಟೆ: ಸಿದ್ದರಾಮಯ್ಯ ಓರ್ವ ಮತಾಂಧ ಎಂಬ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಮಾಜಿ ಡಿಸಿಎಂ, ಬಿಜೆಪಿ ನಾಯಕ ಕೆ. ಎಸ್‌. ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ. ಬಾಗಲಕೋಟೆಯಲ್ಲಿ ಹೇಳಿಕೆ ನೀಡಿದ ಅವರು, ಸಿದ್ದರಾಮಯ್ಯ ಒಬ್ಬ‌ ಮತಾಂಧ ಅನ್ನೋದ್ರಲ್ಲಿ ಅನುಮಾನವಿಲ್ಲ. ಆದ್ರೆ ಸಿದ್ದರಾಮಯ್ಯರನ್ನು ಟಿಪ್ಪುಗೆ ಹೋಲಿಸಿರೋದು ಎಷ್ಟರಮಟ್ಟಿಗೆ ಸರಿಯಿದೆ ಅನ್ನೋದು ನನಗೆ ಗೊತ್ತಿಲ್ಲ ಎಂದಿದ್ದಾರೆ.
Vijaya Karnataka Web k s Eshwarappa


ಕಣ್ಣೆದುರು 21 ಜನ ಯುವಕರ ಕಗ್ಗೊಲೆಯಾಯ್ತು. ಆಗ ಸಿದ್ದರಾಮಯ್ಯ ಕೊಲೆಗಡುಕರ ವಿರುದ್ಧ ಕ್ರಮಕೈಗೊಂಡಿದ್ರೆ ಸಿದ್ದರಾಮಯ್ಯರನ್ನು ಸರಿಯಾದ ಮುಖ್ಯಮಂತ್ರಿ ಎಂದು ಒಪ್ಪುತ್ತಿದ್ದೆ. ಆದರೆ ಅದು ಬಿಟ್ಟು ಕೊಲೆಗಡುಕರನ್ನು ಬಿಟ್ಟು ಕೋಮುವಾದಿಗಳನ್ನು ಹತ್ತಿಕ್ಕುತ್ತೇವೆಂದು ಸಪೋರ್ಟ್ ನೀಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಒಬ್ಬ ಮತಾಂಧ ಅನ್ನೋದನ್ನು ಒಪ್ಪುತ್ತೇನೆ ಎಂದಿದ್ದಾರೆ.

ಸಚಿವ ಜಮೀರ್ ಹೇಳಿಕೆಗೆ ಟಾಂಗ್ ನೀಡಿದ ಈಶ್ವರಪ್ಪ, ಹಿಂದೂ ಮುಸ್ಲಿಂ ದೂರ ದೂರ ಹೋಗೋಕೆ ಕಾಂಗ್ರೆಸ್ ಕಾರಣ. ಬಿಜೆಪಿ ಅಧಿಕಾರದಲ್ಲಿದ್ದಾಗ ಹಿಂದೂ ಮುಸ್ಲಿಂ ಗಲಭೆ ಆಗಿಲ್ಲ. ಇತಿಹಾಸವೇ ಹೇಳ್ತಿದೆ ಟಿಪ್ಪು ಒಬ್ಬ ಕೊಲೆಗಾರ ಎಂದು. ಬಿಜೆಪಿ 104 ಸೀಟ್ ಪಡೆದಿದ್ರೆ ಕಾಂಗ್ರೆಸ್ 78 ಪಡೆದಿದೆ, ಇದನ್ನು ನೋಡಿ ಜಮೀರ್ ಮಾತನಾಡಬೇಕು. ಕುಮಾರಸ್ವಾಮಿ ದೂರ ಉಳಿದಿರೋದಕ್ಕೆ ಕಾರಣ ಏನು. ಇದಕ್ಕೆ ಸಿಎಂ ಸ್ಪಷ್ಟನೆ ನೀಡಲಿ ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ