ಆ್ಯಪ್ನಗರ

ಜಲಪ್ರಳಯದಿಂದ ಕಾಂಗ್ರೆಸ್ಸಿಗರು ಸಹ ನಿರಾಶ್ರಿತ: ಸಚಿವ ಈಶ್ವರಪ್ಪ ವ್ಯಂಗ್ಯ

ಜಳಪ್ರಳಯದಿಂದ ಕಾಂಗ್ರೆಸ್ಸಿಗರು ಸಹ ನಿರಾಶ್ರಿತರಾಗಿದ್ದಾರೆಂದು ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

Vijaya Karnataka Web 22 Aug 2019, 2:58 pm
ಬಾಗಲಕೋಟ: ರಾಜ್ಯದಲ್ಲಿ ಉಂಟಾಗಿರುವ ಜಲಪ್ರಳಯ ಹಾಗೂ ಪ್ರವಾಹ ಸ್ಥಿತಿಯಿಂದ ಕಾಂಗ್ರೆಸ್ಸಿಗರು ಸಹ ನಿರಾಶ್ರಿತರಾಗಿದ್ದಾರೆ ಎಂದು ನೂತನ ಸಚಿವ ಕೆ.ಎಸ್.ಈಶ್ವರಪ್ಪ ಛೇಡಿಸಿದ್ದಾರೆ.
Vijaya Karnataka Web k s eshwarappa


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಿದ್ದು ಹೋಗಿದೆ ಎಂದು ವಿಧಿ ಇಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರನ್ನೂ ಭೇಟಿಯಾಗುತ್ತಿದ್ದಾರೆ. 17-18 ಶಾಸಕರೇಕೆ ಪಕ್ಷ ಬಿಟ್ಟ ಹೋದರು ಎನ್ನುವುದನ್ನು ಯೋಚನೆ ಮಾಡಲಿ ಎಂದು ಸಲಹೆ ನೀಡಿದರು.

ಸಚಿವ ಸ್ಥಾನ ವಂಚಿತ ಉಮೇಶ ಕತ್ತಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಕರೆ ಮಾಡಿ ಭೇಟಿಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಪ್ರವಾಹ ಪೀಡಿತ ನಿರಾಶ್ರಿತರಿಗೆ ಕತ್ತೆ ಏನಾದರೂ ನೆರವು ನೀಡಬಹುದೇನೋ ಎಂದು ಭೇಟಿಗೆ ಕರೆದಿರಬಹುದು ಅಷ್ಟೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಸರಕಾರದ ಆಯುಷ್ಯ ಬಹಳಿಲ್ಲ ಎಂಬ ಕಾಂಗ್ರೆಸ್‌ನ ಮಾಜಿ ಸಚಿವ ಎಸ್ ಆರ್ ಪಾಟೀಲ್‌ ಹೇಳಿಕೆಗೆ ತಿರುಗೇಟು ನೀಡಿದ ಈಶ್ವರಪ್ಪ, ಈಗ ಕಾಂಗ್ರೆಸ್‌ನಲ್ಲಿ ಅವರ ಪರಿಸ್ಥಿತಿ ಏನು?, ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ, ಅವರು ಅಧಿಕಾರದಲ್ಲಿದ್ದರು. ಈಗ ನಾವು ಅಧಿಕಾರದಲ್ಲಿದ್ದೇವೆ. ಆದರೆ, ಅವರು ವಿಪಕ್ಷ ನಾಯಕನ ಸ್ಥಾನದಲ್ಲಿ ಅಲ್ಲ ಎನ್ನುವ ಮೂಲಕ ವ್ಯಂಗ್ಯವಾಡಿದರು.

ಕಾಂಗ್ರೆಸ್ ನಾಯಕರಿಗೆ ಟೀಕೆ ಮಾಡುವುದೊಂದೆ ಗೊತ್ತು. ಸದ್ಯ ಕಾಂಗ್ರೆಸ್‌ನ ಸ್ಥಿತಿ ವಿಪಕ್ಷ ನಾಯಕನ ಆಯ್ಕೆ ಬಿಡಿ, ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡಲು ಆಗದಂತಿದೆ ಎಂದು ಕುಟುಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ