ಆ್ಯಪ್ನಗರ

ಸಿದ್ದರಾಮಯ್ಯಗೆ ಘೇರಾವ್‌

ಬಾಗಲಕೋಟೆ: ಎಸ್‌ಸಿ ಕಾಲೊನಿಗೆ ಭೇಟಿ ನೀಡಬೇಕು ಎಂದು ಒತ್ತಾಯಿಸಿ ಮಹಿಳೆಯರು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರಿಗೆ ಘೇರಾವ್‌ ಹಾಕಿ ಒತ್ತಾಯಿಸಿದ ಘಟನೆ ಸುಳ್ಳ ಗ್ರಾಮದಲ್ಲಿ ನಡೆದಿದೆ.

Vijaya Karnataka 20 Aug 2019, 5:00 am
ಬಾಗಲಕೋಟೆ: ಎಸ್‌ಸಿ ಕಾಲೊನಿಗೆ ಭೇಟಿ ನೀಡಬೇಕು ಎಂದು ಒತ್ತಾಯಿಸಿ ಮಹಿಳೆಯರು ಮಾಜಿ ಸಿಎಂ, ಬಾದಾಮಿ ಶಾಸಕ ಸಿದ್ದರಾಮಯ್ಯ ಅವರಿಗೆ ಘೇರಾವ್‌ ಹಾಕಿ ಒತ್ತಾಯಿಸಿದ ಘಟನೆ ಸುಳ್ಳ ಗ್ರಾಮದಲ್ಲಿ ನಡೆದಿದೆ.
Vijaya Karnataka Web ex cm mla gherav to siddaramaiah
ಸಿದ್ದರಾಮಯ್ಯಗೆ ಘೇರಾವ್‌


ಪ್ರವಾಹಪೀಡಿತ ಬಾದಾಮಿ ತಾಲೂಕಿನ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಸುಳ್ಳ ಗ್ರಾಮದಲ್ಲಿ ಸಂತ್ರಸ್ತರು ಅಹವಾಲು ಸ್ವೀಕರಿಸಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ 'ಎಸ್‌ಸಿ ಕಾಲೊನಿಗೆ ಭೇಟಿ ನೀಡಿ ಬಿದ್ದಿರುವ ಮನೆಗಳನ್ನು ನೋಡಿ, ನಮಗೆ ಪರಿಹಾರ ನೀಡಿಲ್ಲ. ತಿನ್ನಲು ಅಕ್ಕಿ, ಜಾನುವಾರುಗಳಿಗೆ ಮೇವು ಕೊಟ್ಟಿಲ್ಲ' ಎಂದು ಮಹಿಳೆಯರು ಸಿದ್ದರಾಮಯ್ಯ ಕಾರ್‌ಗೆ ಘೇರಾವ್‌ ಹಾಕಿ ಮನವಿ ಮಾಡಿಕೊಂಡರು. ಆಗ ಮಾಜಿ ಶಾಸಕ ಸೋಮಶೇಖರ್‌ ಅವರಿಗೆ ಕಿಟ್‌ ವಿತರಿಸುವಂತೆ ಸಿದ್ದರಾಮಯ್ಯ ಸೂಚಿಸಿದರು. ಮಹಿಳೆಯರಿಗೆ ನಾನಾ ಸಾಮಗ್ರಿಗಳ ಕಿಟ್‌ ಹಾಗೂ ಅಕ್ಕಿಯನ್ನು ಸೋಮಶೇಖರ್‌ ವಿತರಿಸಿದರು. ನಂತರ ಮಹಿಳೆಯರ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ 'ಸುಳ್ಳ ಗ್ರಾಮದ ಸಂಪೂರ್ಣ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುತ್ತೇನೆ' ಎಂದು ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ