ಆ್ಯಪ್ನಗರ

ಎತ್ತುಗಳ ರೋಮಾಂಚನ ಓಟ, ಭಾರ ಎತ್ತುವ ಆಟ

ಲೋಕಾಪೂರ : ಉತ್ತರ ಕರ್ನಾಟಕದ ಜನಪ್ರೀಯ ಹಬ್ಬಗಳಲ್ಲಿ ಒಂದಾಗಿರುವ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಸೊಗಡಿನ ಕಾರು ಹುಣ್ಣೆಮೆಯನ್ನು ಭಾನುವಾರ ರೈತರು ಸಂಭ್ರಮದಿಂದ ಆಚರಿಸಿದರು.

Vijaya Karnataka 18 Jun 2019, 5:00 am
ಲೋಕಾಪೂರ : ಉತ್ತರ ಕರ್ನಾಟಕದ ಜನಪ್ರೀಯ ಹಬ್ಬಗಳಲ್ಲಿ ಒಂದಾಗಿರುವ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಸೊಗಡಿನ ಕಾರು ಹುಣ್ಣೆಮೆಯನ್ನು ಭಾನುವಾರ ರೈತರು ಸಂಭ್ರಮದಿಂದ ಆಚರಿಸಿದರು.
Vijaya Karnataka Web exciting race of oxen weightlifting game
ಎತ್ತುಗಳ ರೋಮಾಂಚನ ಓಟ, ಭಾರ ಎತ್ತುವ ಆಟ


ಹಬ್ಬದ ಅಂಗವಾಗಿ ಪಟ್ಟಣದಲ್ಲಿ ವಿವಿಧೆಡೆ ಎತ್ತುಗಳ ಕರಿ ಹರಿಯುವ ಮೂಲಕ ಕಡು ಬೇಸಿಗೆ ಕಳೆದು ಮುಂಗಾರು ಸ್ವಾಗತಿಸಲು ಹಬ್ಬ ಸಾಕ್ಷಿಯಾಯಿತು. ರೈತರು ತಮ್ಮ ಎತ್ತು ಹಾಗೂ ಹೋರಿಗಳ ಮೈ ತೊಳೆದು ಬಣ್ಣ ಹಚ್ಚಿ ಶೃಂಗರಿಸಿ ಸಂಜೆ ಹಮ್ಮಿಕೊಂಡ ಕರಿ ಹರಿಯುವ ದೃಶ್ಯ ರೋಮಾಂಚನಗೊಳಿಸಿತು. ಕೊಂಬುಗಳಿಗೆ ಬಣ್ಣ ಹಚ್ಚಿ, ಮೈತುಂಬ ಹಲವು ಬಗೆಯ ಹೂವಿನಿಂದ ಶೃಂಗರಿಸಿ ಎತ್ತುಗಳ ಕರಿ ಹರಿಯಲಾುತು.

ಕಾರು ಹುಣ್ಣಿಮೆ ಪ್ರಯುಕ್ತ ಇಲ್ಲಿನ ದೇಸಾು ವಾಡೆುಂದ ವೆಂಕಟೆಶ್ವರ ದೇವಸ್ಥಾನ ಮುಂಭಾಗದ ಹಾಗೂ ಹಳ್ಳದ ಮುಂಭಾಗದಲ್ಲಿ ಎತ್ತುಗಳ ಕರಿ ಹರಿಯುವ ಕಾರ್ಯಕ್ರಮ ನಡೆುತು. ರೈತರು ಎತ್ತುಗಳನ್ನು ಸಿಂಗರಿಸಿಕೊಂಡು ಮೆರವಣೆಗೆ ಮಾಡಿದರು. ಐದು ಜೊತೆ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ದೇಸಾಯಿವರ, ಬಡಿಗೇರ, ಚೌಧರಿ, ಕುಲಕರ್ಣಿ, ಅಡಿವೆಪ್ಪ ಕಂಬಾರ, ರಾಗಪ್ಪ ಎತ್ತುಗಳು ಸ್ಪರ್ಧೇಯಲ್ಲಿ ಭಾಗವಹಿಸಿದ್ದು ಬಿಳಿ ಎತ್ತುಗಳು ಸ್ಪರ್ಧೇಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. ಲೋಕಾಪೂರ ಸುತ್ತಮುತ್ತಲಿನ ಗ್ರಾಮದ ಜನರು ಎತ್ತುಗಳಿಗೆ ಹೊರುದುಂಬಿಸಿ ಕರಿ ಹರಿದರು ಗ್ರಾಮದ ರೈತರು ಗುಂಡು ಎತ್ತುವ ಸ್ಪರ್ಧೆಯನ್ನು ಏರ್ಪಡಿಸಿದ್ದರು.

ಈ ವೇಳೆ ಸಿದ್ರಾಮಪ್ಪ ದೇಸಾು, ಗ್ರಾಪಂ ಉಪಾಧ್ಯಕ್ಷ ಮಾರುತಿ ರಂಗಣ್ಣವರ, ಹುಲ್ಲಪ್ಪ ತಳವಾರ, ಲೋಕಣ್ಣ ಸಕ್ರಿ, ನಾಗಪ್ಪ ಗುರಾಣಿ, ರಾಮಣ್ಣ ಜೋಗಿನ, ದುಂಡಪ್ಪ ಸಕ್ರಿ, ಹಣಮಂತ ಹೂಗಾರ, ವಿಠ್ಠಲ ಹುಗ್ಗಿ, ಪರಶುರಾಮ ಜುನ್ನಪ್ಪನವರ, ಹಣಮಂತ ಹುಕುಮನವರ, ಬಸಪ್ಪ ಶಿಲ್ಲೇದಾರ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ