ಆ್ಯಪ್ನಗರ

ನ್ಯಾಯ ಸಮ್ಮತ, ನಿಷ್ಪಕ್ಷ ಪಾತ ಚುನಾವಣೆ: ಡಿಸಿ

ಬಾಗಲಕೋಟ : ಚುನಾವಣೆಯಲ್ಲಿ ಹಣಬಲ ಹಾಗೂ ಇನ್ನಿತರೆ ಆಮಿಷಕ್ಕೆ ಒಳಗಾಗದಂತೆ ನಿಷ್ಪಕ್ಷ ಪಾತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ತಿಳಿಸಿದರು.

Vijaya Karnataka 14 Mar 2019, 5:00 am
ಬಾಗಲಕೋಟ : ಚುನಾವಣೆಯಲ್ಲಿ ಹಣಬಲ ಹಾಗೂ ಇನ್ನಿತರೆ ಆಮಿಷಕ್ಕೆ ಒಳಗಾಗದಂತೆ ನಿಷ್ಪಕ್ಷ ಪಾತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ತಿಳಿಸಿದರು.
Vijaya Karnataka Web fair and impartial crime election dc
ನ್ಯಾಯ ಸಮ್ಮತ, ನಿಷ್ಪಕ್ಷ ಪಾತ ಚುನಾವಣೆ: ಡಿಸಿ


ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ನಾನಾ ಸಮಿತಿಯ ನೋಡಲ್‌ ಅಧಿಕಾರಿಗಳ ಸಭೆ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು. ಚುನಾವಣೆ ಆಯೋಗದ ಸ್ಪಷ್ಟ ನಿರ್ದೇಶನವನ್ನು ಕಟ್ಟಿನಿಟ್ಟಾಗಿ ಪಾಲಿಸುವುದರೊಂದಿಗೆ ಚುನಾವಣೆಗೆ ಸಂಬಂದಿಸಿದಂತೆ ನಾನಾ ಸಮಿತಿಯ ನೋಡಲ್‌ ಅಧಿಕಾರಿಗಳಿಗೆ ಅವರ ಸಮಿತಿಯ ಕಾರ್ಯವೈಖರಿಯೊಂದಿಗೆ ಎಲ್ಲ ಸದಸ್ಯರಿಗೆ ಸಮಿತಿಯ ಹೊಣೆಗಾರಿಕೆ ಮತ್ತು ಜವಾಬ್ದಾರಿ ಅರಿವಿರಬೇಕು. ಆಗ ಮಾತ್ರ ಪರಿಣಾಮಕಾರಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಹಣದ ವ್ಯವಹಾರದಲ್ಲಿ ನಿಗಾ

ಬ್ಯಾಂಕ್‌ಗಳಲ್ಲಿ ಹಣ ಡ್ರಾ, ವರ್ಗಾವಣೆ ಹಾಗೂ ಸಾಗಣೆಯಂತ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಲಕ್ಷ ಕ್ಕಿಂತ ಹೆಚ್ಚಿನ ಹಣದ ಚಟುವಟಿಕೆ ಕಂಡಲ್ಲಿ ತಕ್ಷ ಣ ಬ್ಯಾಂಕ್‌ ವ್ಯವಸ್ಥಾಪಕರು ಮಾಹಿತಿ ನೀಡಬೇಕು. ಸಂದೇಹಾಸ್ಪದ ಬ್ಯಾಂಕ್‌ ಖಾತೆಗಳಿದ್ದಲ್ಲಿ ಅವುಗಳ ಮಾಹಿತಿ ಐಟಿ ಇಲಾಖೆಗೆ ತಲುಪಬೇಕು. 10 ಲಕ್ಷ ರೂ. ಹೆಚ್ಚಿನ ಮೊತ್ತದ ಪ್ರಕರಣ ದಾಖಲಾದಲ್ಲಿ ಐಟಿ ಅಧಿಕಾರಿಗಳು ತುರ್ತಾಗಿ ಕ್ರಮ ಜರುಗಿಸಬೇಕು ಎಂದರು.

ಮದ್ಯದ ಮೇಲೆ ನಿಗಾ

ಮದ್ಯದ ವಹಿವಾಟಿನ ಮೇಲೆ ತೀವ್ರ ನಿಗಾ ಇಡಲಾಗಿದೆ. ಹೋಲ್‌ಸೆಲ್‌ ಮತ್ತು ರಿಟೆಲ್‌ ಮದ್ಯ ಮಾರಾಟದ ಪ್ರತಿನಿತ್ಯ ಮಾನಿಟರ್‌ ಮಾಡಿ, ಮದ್ಯ ಅಕ್ರಮ ಸಾಗಾಣೆ ಮತ್ತು ಬಳಕೆ ಕಂಡುಬಂದಲ್ಲಿ ಸೀಜ್‌ ಮಾಡಿ ಪ್ರಕರಣ ದಾಖಲಿಸಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಚೆಕ್‌ಪೋಸ್ಟ್‌ ಚುರುಕು

ದಕ್ಷ ತೆ ಹಾಗೂ ಚುರುಕಿನಿಂದ ಕಾರ್ಯ ನಿರ್ವಹಿಸಲು ಎಸ್‌ಎಸ್‌ಟಿ ಮತ್ತು ಎಫ್‌ಎಸ್‌ಟಿ ತಂಡಗಳ ಕಾರ್ಯ ನಿರ್ವಹಣೆ ಅಗತ್ಯವಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಅಕ್ರಮ ಹಣ, ಸಾಮಗ್ರಿ ಸರಬರಾಜು ತಡೆಗಟ್ಟಲು ಪ್ರತಿ ಚೆಕ್‌ಪೋಸ್ಟ್‌ನಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಚೆಕ್‌ಪೋಸ್ಟ್‌ನಲ್ಲಿ ಬರುವ ವಾಹನವನ್ನು ತಪಾಸಣೆ ಮಾಡಿ ಚುನಾವಣೆ ಕುರಿತು ಅಕ್ರಮ ವಸ್ತು, ಹಣ ಇದ್ದರೆ ವಶಕ್ಕೆ ತೆಗೆದುಕೊಳ್ಳಬೇಕು. ವಿಡಿಯೋ ರೆಕಾರ್ಡ್‌ ಮಾಡಿ ವರದಿ ಸಲ್ಲಿಸಬೇಕು ಎಂದರು.

ದೂರು ನಿರ್ವಹಣೆ

ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ದೂರು ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ಲಾಯಿಂಗ್‌ ಸ್ಕ್ವಾಡ್‌ ಟೀಮ್‌ ಸದಾ ಕಾಲ ಎಚ್ಚರದಿಂದಿರಬೇಕು. ದೂರು ಸ್ವೀಕರಿಸಿದ ನಂತರ ಅದರ ವರದಿ ಸಹಾಯಕ ಚುನಾವಣಾಧಿಕಾರಿಗೆ ಸಲ್ಲಿಕೆಯಾಗಬೇಕು. ಸೆಕ್ಟರ್‌ ಅಧಿಕಾರಿಗಳು ಮತದಾನಕ್ಕಿಂತ ಮುಂಚಿತವಾಗಿ ಮತಗಟ್ಟೆಗಳಲ್ಲಿ ಮೂಲ ಸೌಕರ್ಯ, ವಿವಿಪ್ಯಾಟ್‌ ಯಂತ್ರದ ಕಾರ್ಯ ನಿರ್ವಹಣೆ, ಮತಗಟ್ಟೆಯಲ್ಲಿನ ಸಿಬ್ಬಂದಿಗಳ ನಿರ್ವಹಣೆ, ತರಬೇತಿ ಪರಿಶೀಲಿಸಬೇಕು ಎಂದು ತಿಳಿಸಿದರು.

ಎಡಿಸಿ ಶಶೀಧರ ಕುರೇರ, ಸಮಿತಿಯ ನೋಡಲ್‌ ಅಧಿಕಾರಿ ಕೊಂಗವಾಡ, ಪ್ರಾದೇಶಿಕ ಸಾರಿಗೆ ಅಧಿಕಾರಿ ಅಯ್ಯಪ್ಪ ನಾಲತ್ವಾಡಮಠ, ತೋಟಗಾರಿಕೆ ಉಪನಿರ್ದೇಶಕ ಪ್ರಭುರಾಜ ಹಿರೇಮಠ, ಜಿಲ್ಲಾ ಸಾಕ್ಷ ರತಾ ಅಧಿಕಾರಿ ಬಸವರಾಜ ಶಿರೂರ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ