ಆ್ಯಪ್ನಗರ

ಸಾಲಮನ್ನಾ ನಿರ್ಧಾರ ನಂತರವೂ ಮುಂದುವರಿದ ರೈತರ ಆತ್ಮಹತ್ಯೆ ಸರಣಿ

ಬಾಗಲಕೋಟೆ, ಚನ್ನರಾಯಪಟ್ಟಣದಲ್ಲಿ ರೈತ ಆತ್ಮಹತ್ಯೆ

Vijaya Karnataka Web 10 Jul 2018, 4:58 pm
ಬಾಗಲಕೋಟೆ: ರೈತರ ಎರಡು ಲಕ್ಷ ರೂ. ಸಾಲಮನ್ನಾ ಮಾಡುವುದಾಗಿ ಸರಕಾರ ಘೋಷಣೆ ಮಾಡಿದ ಬಳಕಿವೂ ಅನ್ನದಾತರ ಆತ್ಮಹತ್ಯೆ ಸರಣಿ ಮುಂದುವರಿಯುತ್ತಿದೆ.
Vijaya Karnataka Web ರೈತರ ಆತ್ಮಹತ್ಯೆ
ರೈತರ ಆತ್ಮಹತ್ಯೆ


ಬಾಗಲಕೋಟೆ ಜಿಲ್ಲೆಯ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಲಬಾಧೆಗೆ ಬೇಸತ್ತು ವಿಷ ಸೇವಿಸಿ ಮಂಜುನಾಥ ಹೊಸಮನಿ (26) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೂಡಲೇ ಈತನನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಈತ ಬಾದಾಮಿ ತಾಲೂಕಿನ ಬೀರನೂರ ಗ್ರಾಮ ವಾಸಿ.

ಮನೆಯ ಹಿತ್ತಲದಲ್ಲಿ ಹತ್ತಿಗೆ ಹೊಡೆಯುವ ಎಣ್ಣೆ ಸೇವಿಸಿದ್ದ. ರಾಷ್ಟ್ರೀಯ ಬ್ಯಾಂಕ್, ಕೃಷಿ ಪತ್ತಿನ ಸಂಘ, ಕೈಗಡ ಸೇರಿ 9 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. 15 ಎಕರೆ ಜಮೀನು ಇದ್ದು, ಉಳ್ಳಾಗಡ್ಡಿ, ಮೆಕ್ಕೆಜೋಳ, ತರಕಾರಿ ಬೆಳೆದಿದ್ದ...

ಕುಮಾರಸ್ವಾಮಿ ಘೋಷಣೆ ಮಾಡಿರುವ ಸಾಲಮನ್ನಾ ಲಾಭ ತಮಗೆ ಆಗಲಿಲ್ಲ... ಸಾಲದ ಹೊರೆ ಜಾಸ್ತಿ ಆಗಿದೆ ಎಂದು ಮನನೊಂದು ವಿಷ ಸೇವಿಸಿದ್ದಾನೆ.

ಸಾಲಮನ್ನಾ ಮಾಡಿದ ನಂತರದಲ್ಲಿ ಅದರ ಪ್ರಯೋಜನ ಆಗಲಿಲ್ಲ ಅಂಥ ಕೆಲ ದಿನಗಳ ಹಿಂದೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಮತ್ತೊಬ್ಬ ರೈತ ಆತ್ಮಹತ್ಯೆ

ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿ ಕಲ್ಲೇಸೋಮನಹಳ್ಳಿ ರೈತ ಪುಟ್ಟೇಗೌಡ (52) ಹೊಲದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾಲ ಮನ್ನಾದಿಂದ ಹೆಚ್ಚು ಪ್ರಯೋಜನವಾಗಲಿಲ್ಲ. ಟೊಮ್ಯಾಟೊ ಬೆಳೆದರೂ ಬೆಲೆ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ